AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಕೆಗಳಿಂದ ರೋಸಿಹೋದ ಪ್ರಶಾಂತ್ ನೀಲ್, ಬದಲಾಗುವ ನಿರ್ಧಾರ ಮಾಡಿದ ನಿರ್ದೇಶಕ

Prashanth Neel: ಪ್ರಶಾಂತ್ ನೀಲ್, ಕಮರ್ಶಿಯಲ್, ಮಾಸ್ ಸಿನಿಮಾಗಳಿಗೆ ಭಿನ್ನ ವ್ಯಾಕರಣ ನೀಡಿದ ನಿರ್ದೇಶಕ. ತಮ್ಮ ಡಾರ್ಕ್ ಕಲರ್ ಗ್ರೇಡಿಂಗ್, ಮೊನಚು ಸಂಭಾಷಣೆ, ಭಿನ್ನವಾಗಿ ಕತೆ ಹೇಳುವ ರೀತಿ, ನಿರೂಪಣಾ ಶೈಲಿಯಿಂದ ತಮ್ಮದೇ ಒಂದು ಭಿನ್ನ ಶೈಲಿಯನ್ನೇ ಅವರು ಸೃಷ್ಟಿಸಿದ್ದಾರೆ. ಆದರೆ ಈಗ ಪ್ರಶಾಂತ್ ನೀಲ್ ತಮ್ಮ ಶೈಲಿಯನ್ನೇ ಕೈಬಿಡುತ್ತಿದ್ದಾರೆ.

ಟೀಕೆಗಳಿಂದ ರೋಸಿಹೋದ ಪ್ರಶಾಂತ್ ನೀಲ್, ಬದಲಾಗುವ ನಿರ್ಧಾರ ಮಾಡಿದ ನಿರ್ದೇಶಕ
Prashanth Neel
ಮಂಜುನಾಥ ಸಿ.
|

Updated on: May 21, 2026 | 5:33 PM

Share

ಪ್ರಶಾಂತ್ ನೀಲ್ (Prashanth Neel), ಪ್ರಸ್ತುತ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಈ ವರೆಗೆ ನಾಲ್ಕು ಸಿನಿಮಾಗಳನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಎಲ್ಲವೂ ಸೂಪರ್ ಹಿಟ್. ಪ್ರಶಾಂತ್ ನೀಲ್, ಕಮರ್ಶಿಯಲ್, ಮಾಸ್ ಸಿನಿಮಾಗಳಿಗೆ ಭಿನ್ನ ವ್ಯಾಕರಣ ನೀಡಿದ ನಿರ್ದೇಶಕ. ತಮ್ಮ ಡಾರ್ಕ್ ಕಲರ್ ಗ್ರೇಡಿಂಗ್, ಮೊನಚು ಸಂಭಾಷಣೆ, ಭಿನ್ನವಾಗಿ ಕತೆ ಹೇಳುವ ರೀತಿ, ನಿರೂಪಣಾ ಶೈಲಿಯಿಂದ ತಮ್ಮದೇ ಒಂದು ಭಿನ್ನ ಶೈಲಿಯನ್ನೇ ಅವರು ಸೃಷ್ಟಿಸಿದ್ದಾರೆ. ಆದರೆ ಈಗ ಪ್ರಶಾಂತ್ ನೀಲ್ ತಮ್ಮ ಶೈಲಿಯನ್ನೇ ಕೈಬಿಡುತ್ತಿದ್ದಾರೆ.

ಇದೀಗ ಜೂ ಎನ್​​ಟಿಆರ್ ನಟಿಸಿರುವ ‘ಡ್ರ್ಯಾಗನ್’ ಸಿನಿಮಾ ಅನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಟೀಸರ್ ನಿನ್ನೆಯಷ್ಟೆ (ಮೇ 20) ಬಿಡುಗಡೆ ಆಗಿದೆ. ನೀಲ್ ಅವರ ಈ ಹಿಂದಿನ ಸಿನಿಮಾಗಳಾದ ‘ಸಲಾರ್’, ‘ಕೆಜಿಎಫ್’ ರೀತಿ, ‘ಡ್ರ್ಯಾಗನ್’ ಸಹ ಕಡುಕಪ್ಪು ಬಣ್ಣದ ಥೀಮ್ ಅನ್ನು ಹೊಂದಿದೆ. ಅದೇ ಬ್ಯಾಟಲ್ ಫೀಲ್ಡ್, ಅದೇ ಸ್ಟೋರಿ ನರೇಟರ್ (ಕಥಾ ನಿರೂಪಕನ ಪಾತ್ರ). ಅಬ್ಬರದ ಸಂಗೀತ. ಸಿಂಗಲ್ ವಲ್ರ್ಡ್ ಡೈಲಾಗ್​​ಗಳು ಸಿನಿಮಾನಲ್ಲಿವೆ. ಟೀಸರ್ ಅನ್ನು ಬಹಳ ಜನ ಮೆಚ್ಚಿದ್ದಾರಾದರೂ, ನೀಲ್ ತಮ್ಮ ಹಳೆಯ ಸಿನಿಮಾಗಳ ಮಾದರಿಯನ್ನೇ ಇಲ್ಲೂ ಅನುಸರಿಸಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ಇನ್ನೆರಡು ಸಿನಿಮಾಗಳ ಬಳಿಕ ತಮ್ಮ ಶೈಲಿಯನ್ನು ಬದಲಾವಣೆ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ. ಇನ್ನು ಮುಂದೆ ಡಾರ್ಕ್ ಥೀಮ್​​ಗಳು ಇರುವುದಿಲ್ಲ. ಸಾಕಷ್ಟು ಮಂದಿ ನನ್ನ ಶೈಲಿಯ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಕೆಲವರು ನನ್ನೊಟ್ಟಿಗೆ ನೇರವಾಗಿ ವಾಗ್ವಾದ ಸಹ ಮಾಡಿದ್ದಾರೆ. ಆದರೆ ಇನ್ನು ಮುಂದೆ ನಾನು ನನ್ನ ನೈಜ ಶೈಲಿಯನ್ನು ಬಳಸುವುದಿಲ್ಲ ಎಂದಿದ್ದಾರೆ. ಇದು ನಿಜಕ್ಕೂ ದೊಡ್ಡ ನಿರ್ಧಾರವೇ ಆಗಿದೆ.

ಇದನ್ನೂ ಓದಿ:ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್

ಪ್ರಶಾಂತ್ ನೀಲ್ ಅವರು ‘ಸಲಾರ್ 2’, ‘ಡ್ರ್ಯಾಗನ್ 2’ ಸಿನಿಮಾಗಳನ್ನು ನಿರ್ದೇಶಿಸಲಿದ್ದು, ಆ ಎರಡು ಸಿನಿಮಾಗಳ ಬಳಿಕ ನೀಲ್ ಅವರು ತಮ್ಮ ಶೈಲಿಯನ್ನೇ ಬದಲಿಸಲಿದ್ದಾರೆ. ‘ನನ್ನ ಸಿನಿಮಾಗಳಲ್ಲಿ ಇನ್ನು ಮುಂದೆ ಹೆಚ್ಚು ಬಣ್ಣಗಳು ಕಾಣಲಿವೆ. ಇಂಟೆನ್ಸ್ ಕತೆಯ ಹೊರತಾಗಿ ಭಿನ್ನ ಕತೆಗಳು ಸಹ ಇರಲಿವೆ’ ಎಂದಿದ್ದಾರೆ. ‘ಹಾಗಿದ್ದರೆ ನಿಮ್ಮ ಸಿನಿಮಾನಲ್ಲಿ ಪಿಂಕ್ ಬಣ್ಣವನ್ನೂ ನೋಡಬಹುದೇ?’ ಎಂಬ ಪ್ರಶ್ನೆಗೆ, ‘ಖಂಡಿತ ಹೌದು’ ಎಂದಿದ್ದಾರೆ ನೀಲ್.

ಡಾರ್ಕ್ ಥೀಮ್, ಪಾತಕಿಗಳ ಪ್ರಪಂಚವನ್ನು ಸೃಷ್ಟಿಸುವುದು, ಮುಖ್ಯವಾದ ಹಲವು ಪಾತ್ರಗಳ ಸೃಷ್ಟಿಸಿ ಅವರನ್ನು ಕತೆಯಲ್ಲಿ ಕನೆಕ್ಟ್ ಮಾಡುವುದು ಮೂರನೇ ಒಂದು ಪಾತ್ರದ ಮೂಲಕ ಕತೆಯನ್ನು ನರೇಟ್ ಮಾಡಿಸುವುದು ಇವು ಪ್ರಶಾಂತ್ ನೀಲ್ ಅವರ ಶೈಲಿ. ಇದರಿಂದ ನೀಲ್ ಅವರಿಗೆ ಭಾರಿ ಯಶಸ್ಸು ಸಹ ಸಿಕ್ಕಿದೆ. ಆದರೆ ಇನ್ನು ಮುಂದೆ ಆ ಶೈಲಿಯನ್ನೇ ಬಿಡಲಿದ್ದಾರಂತೆ ನೀಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ