AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?

ಸಂಗಯ್​ ಮೂಲತಃ ಭೂತಾನ್​ನವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?
ರಾಧೆ ಚಿತ್ರದ ವಿಲನ್ ಸಂಗಯ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 17, 2021 | 7:17 AM

ಸಲ್ಮಾನ್​ ಖಾನ್​ ಸಿನಿಮಾ ಎಂದಮೇಲೆ ಅಲ್ಲಿ ಆ್ಯಕ್ಷನ್​ಗಳಿಗೆ ಬರ ಇರುವುದಿಲ್ಲ. ಅವರ ಪ್ರತಿ ಸಿನಿಮಾದಲ್ಲೂ ತೂಕ ಇರುವ ವಿಲನ್​ ಹುಡುಕಿ ತರಲಾಗುತ್ತದೆ. ಇದು ರಾಧೆ ಚಿತ್ರದಲ್ಲೂ ಮುಂದುವರಿದಿದೆ. ಸಾಕಷ್ಟು ಆ್ಯಕ್ಷನ್​ಗಳಿಂದ ಕೂಡಿರುವ ರಾಧೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಲನ್​ ಪಾತ್ರ ಮಾಡಿದ ಸಂಗಯ್​. ರಣದೀಪ್​ ಹೂಡಾ ಜತೆ ಇವರು ನಟಿಸಿದ್ದರು. ಸಂಗಯ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಬಂದವರು. ಬಾಡಿ ಬಿಲ್ಡರ್​, ಮಿಸ್ಟರ್​ ಭೂತಾನ್, ರಿಯಲ್​ ಎಸ್ಟೇಟ್​ ಉದ್ಯಮಿ ಕೂಡ ಹೌದು. ಈಗ ಬಾಲಿವುಡ್​ ಖಳನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.  

ಸಂಗಯ್​ ಮೂಲತಃ ಭೂತಾನ್​ ಅವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ. 2019ರಲ್ಲಿ ದಬಾಂಗ್​ 3 ಸಿನಿಮಾ ರಿಲೀಸ್​ ಟೈಮ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಅವರನ್ನು ಸಂಗಯ್​ ಭೇಟಿ ಮಾಡಿದ್ದರು.

ನಾನು ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಬೆಳೆಯಿತು. ಅದನ್ನು​ ಗಂಭೀರವಾಗಿ ಪರಿಗಣಿಸಿದೆ. 2013ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದೆ. ನಂತರ ಬಾಡಿ ಬಿಲ್ಡಿಂಗ್​​ಗೆ ಸೇರಿಕೊಂಡೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ನನಗಿದೆ. ಮಕಾವುದಲ್ಲಿ ನಡೆದ ಏಷಿಯನ್​ ಬಾಡಿಬಿಲ್ಡ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದೆ. ಉಜಬೇಕಿಸ್ತಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದೆ. ಇದೇ ರೀತಿಯ ಸಾಕಷ್ಟು ಪದಕ ಗೆದ್ದೆ ಎಂದಿದ್ದಾರೆ.

‘ದಬಾಂಗ್​ 3 ಸಿನಿಮಾ ರಿಲೀಸ್​ ಸಮಯದಲ್ಲಿ ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಿದ್ದೆ. ಎರಡು ತಿಂಗಳ ನಂತರದಲ್ಲಿ ನನಗೆ ಅವರಿಂದ ಕರೆ ಬಂತು ರಾಧೆ ಸಿನಿಮಾದಲ್ಲಿ ನೀವು ವಿಲನ್​ ಆಗಿ ನಟಿಸಬಹುದೇ ಎಂದು ಕೇಳಿದರು. ನಾನು ಆಫರ್ ಒಪ್ಪಿಕೊಂಡೆ. ಈ ಮೂಲಕ ಬಾಲಿವುಡ್​ಗೆ ಬಂದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ