AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?

ಸಂಗಯ್​ ಮೂಲತಃ ಭೂತಾನ್​ನವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?
ರಾಧೆ ಚಿತ್ರದ ವಿಲನ್ ಸಂಗಯ್
ರಾಜೇಶ್ ದುಗ್ಗುಮನೆ
| Edited By: |

Updated on: May 17, 2021 | 7:17 AM

Share

ಸಲ್ಮಾನ್​ ಖಾನ್​ ಸಿನಿಮಾ ಎಂದಮೇಲೆ ಅಲ್ಲಿ ಆ್ಯಕ್ಷನ್​ಗಳಿಗೆ ಬರ ಇರುವುದಿಲ್ಲ. ಅವರ ಪ್ರತಿ ಸಿನಿಮಾದಲ್ಲೂ ತೂಕ ಇರುವ ವಿಲನ್​ ಹುಡುಕಿ ತರಲಾಗುತ್ತದೆ. ಇದು ರಾಧೆ ಚಿತ್ರದಲ್ಲೂ ಮುಂದುವರಿದಿದೆ. ಸಾಕಷ್ಟು ಆ್ಯಕ್ಷನ್​ಗಳಿಂದ ಕೂಡಿರುವ ರಾಧೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಲನ್​ ಪಾತ್ರ ಮಾಡಿದ ಸಂಗಯ್​. ರಣದೀಪ್​ ಹೂಡಾ ಜತೆ ಇವರು ನಟಿಸಿದ್ದರು. ಸಂಗಯ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಬಂದವರು. ಬಾಡಿ ಬಿಲ್ಡರ್​, ಮಿಸ್ಟರ್​ ಭೂತಾನ್, ರಿಯಲ್​ ಎಸ್ಟೇಟ್​ ಉದ್ಯಮಿ ಕೂಡ ಹೌದು. ಈಗ ಬಾಲಿವುಡ್​ ಖಳನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.  

ಸಂಗಯ್​ ಮೂಲತಃ ಭೂತಾನ್​ ಅವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ. 2019ರಲ್ಲಿ ದಬಾಂಗ್​ 3 ಸಿನಿಮಾ ರಿಲೀಸ್​ ಟೈಮ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಅವರನ್ನು ಸಂಗಯ್​ ಭೇಟಿ ಮಾಡಿದ್ದರು.

ನಾನು ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಬೆಳೆಯಿತು. ಅದನ್ನು​ ಗಂಭೀರವಾಗಿ ಪರಿಗಣಿಸಿದೆ. 2013ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದೆ. ನಂತರ ಬಾಡಿ ಬಿಲ್ಡಿಂಗ್​​ಗೆ ಸೇರಿಕೊಂಡೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ನನಗಿದೆ. ಮಕಾವುದಲ್ಲಿ ನಡೆದ ಏಷಿಯನ್​ ಬಾಡಿಬಿಲ್ಡ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದೆ. ಉಜಬೇಕಿಸ್ತಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದೆ. ಇದೇ ರೀತಿಯ ಸಾಕಷ್ಟು ಪದಕ ಗೆದ್ದೆ ಎಂದಿದ್ದಾರೆ.

‘ದಬಾಂಗ್​ 3 ಸಿನಿಮಾ ರಿಲೀಸ್​ ಸಮಯದಲ್ಲಿ ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಿದ್ದೆ. ಎರಡು ತಿಂಗಳ ನಂತರದಲ್ಲಿ ನನಗೆ ಅವರಿಂದ ಕರೆ ಬಂತು ರಾಧೆ ಸಿನಿಮಾದಲ್ಲಿ ನೀವು ವಿಲನ್​ ಆಗಿ ನಟಿಸಬಹುದೇ ಎಂದು ಕೇಳಿದರು. ನಾನು ಆಫರ್ ಒಪ್ಪಿಕೊಂಡೆ. ಈ ಮೂಲಕ ಬಾಲಿವುಡ್​ಗೆ ಬಂದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ