AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?

ಸಂಗಯ್​ ಮೂಲತಃ ಭೂತಾನ್​ನವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?
ರಾಧೆ ಚಿತ್ರದ ವಿಲನ್ ಸಂಗಯ್
ರಾಜೇಶ್ ದುಗ್ಗುಮನೆ
| Edited By: |

Updated on: May 17, 2021 | 7:17 AM

Share

ಸಲ್ಮಾನ್​ ಖಾನ್​ ಸಿನಿಮಾ ಎಂದಮೇಲೆ ಅಲ್ಲಿ ಆ್ಯಕ್ಷನ್​ಗಳಿಗೆ ಬರ ಇರುವುದಿಲ್ಲ. ಅವರ ಪ್ರತಿ ಸಿನಿಮಾದಲ್ಲೂ ತೂಕ ಇರುವ ವಿಲನ್​ ಹುಡುಕಿ ತರಲಾಗುತ್ತದೆ. ಇದು ರಾಧೆ ಚಿತ್ರದಲ್ಲೂ ಮುಂದುವರಿದಿದೆ. ಸಾಕಷ್ಟು ಆ್ಯಕ್ಷನ್​ಗಳಿಂದ ಕೂಡಿರುವ ರಾಧೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಲನ್​ ಪಾತ್ರ ಮಾಡಿದ ಸಂಗಯ್​. ರಣದೀಪ್​ ಹೂಡಾ ಜತೆ ಇವರು ನಟಿಸಿದ್ದರು. ಸಂಗಯ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಬಂದವರು. ಬಾಡಿ ಬಿಲ್ಡರ್​, ಮಿಸ್ಟರ್​ ಭೂತಾನ್, ರಿಯಲ್​ ಎಸ್ಟೇಟ್​ ಉದ್ಯಮಿ ಕೂಡ ಹೌದು. ಈಗ ಬಾಲಿವುಡ್​ ಖಳನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.  

ಸಂಗಯ್​ ಮೂಲತಃ ಭೂತಾನ್​ ಅವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ. 2019ರಲ್ಲಿ ದಬಾಂಗ್​ 3 ಸಿನಿಮಾ ರಿಲೀಸ್​ ಟೈಮ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಅವರನ್ನು ಸಂಗಯ್​ ಭೇಟಿ ಮಾಡಿದ್ದರು.

ನಾನು ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಬೆಳೆಯಿತು. ಅದನ್ನು​ ಗಂಭೀರವಾಗಿ ಪರಿಗಣಿಸಿದೆ. 2013ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದೆ. ನಂತರ ಬಾಡಿ ಬಿಲ್ಡಿಂಗ್​​ಗೆ ಸೇರಿಕೊಂಡೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ನನಗಿದೆ. ಮಕಾವುದಲ್ಲಿ ನಡೆದ ಏಷಿಯನ್​ ಬಾಡಿಬಿಲ್ಡ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದೆ. ಉಜಬೇಕಿಸ್ತಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದೆ. ಇದೇ ರೀತಿಯ ಸಾಕಷ್ಟು ಪದಕ ಗೆದ್ದೆ ಎಂದಿದ್ದಾರೆ.

‘ದಬಾಂಗ್​ 3 ಸಿನಿಮಾ ರಿಲೀಸ್​ ಸಮಯದಲ್ಲಿ ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಿದ್ದೆ. ಎರಡು ತಿಂಗಳ ನಂತರದಲ್ಲಿ ನನಗೆ ಅವರಿಂದ ಕರೆ ಬಂತು ರಾಧೆ ಸಿನಿಮಾದಲ್ಲಿ ನೀವು ವಿಲನ್​ ಆಗಿ ನಟಿಸಬಹುದೇ ಎಂದು ಕೇಳಿದರು. ನಾನು ಆಫರ್ ಒಪ್ಪಿಕೊಂಡೆ. ಈ ಮೂಲಕ ಬಾಲಿವುಡ್​ಗೆ ಬಂದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!