AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಾಜಾಗುತ್ತಿದೆ ಯಾರೂ ಕೇಳಿರದ ಪ್ರಭಾಸ್​ ಸಿನಿಮಾ ಹಾಡು; ಭಾರತಲ್ಲೇ ಇದು ಮೊದಲ ಪ್ರಯೋಗ

ಪ್ರಭಾಸ್​ ನಟನೆಯ ಸಾಹೋ ಸಿನಿಮಾಗೆ ಗಿಬ್ರಾನ್​ ಸೇರಿ ಹಲವು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್​ ಸಾಂಗ್​ ಕಂಪೋಸ್​ ಮಾಡಲಾಗಿತ್ತು.

ಹರಾಜಾಗುತ್ತಿದೆ ಯಾರೂ ಕೇಳಿರದ ಪ್ರಭಾಸ್​ ಸಿನಿಮಾ ಹಾಡು; ಭಾರತಲ್ಲೇ ಇದು ಮೊದಲ ಪ್ರಯೋಗ
ಪ್ರಭಾಸ್​
ಮದನ್​ ಕುಮಾರ್​
| Edited By: |

Updated on: Jun 06, 2021 | 4:29 PM

Share

ಎಲ್ಲ ಕಡೆ ಕೊರೊನಾ ವೈರಸ್​ ಕಾಟ ಕೊಡುತ್ತಿದೆ. ದೇಶಾದ್ಯಂತ ಜನರು ಕಷ್ಟಪಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ರೀತಿಯಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ. ಸ್ಟಾರ್​ ನಟರು ನೇರವಾಗಿ ಮತ್ತು ತಮ್ಮ ಅಭಿಮಾನಿ ಸಂಘಗಳ ಮೂಲಕ ಜನಪರ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ಸಂಗೀತ ನಿರ್ದೇಶಕ ಗಿಬ್ರಾನ್​ ಕೂಡ ಸಮಾಜಮುಖಿ ಕೆಲಸ ಮಾಡಲು ಸಜ್ಜಾಗಿದ್ದಾರೆ. ಆದರೆ ಅವರ ಹಾದಿ ಹೊಸದಾಗಿದೆ. ತಾವೇ ಸಿದ್ಧಪಡಿಸಿರುವ ಒಂದು ಹಾಡನ್ನು ಹರಾಜು ಹಾಕಲು ಅವರು ಮುಂದಾಗಿದ್ದಾರೆ. ಅದರಿಂದ ಬಂದ ಹಣವನ್ನು ಕೊವಿಡ್​ ವಿರುದ್ಧದ ಹೋರಾಟಕ್ಕೆ ಬಳಸಲಿದ್ದಾರೆ.

ಅಷ್ಟಕ್ಕೂ ಗಿಬ್ರಾನ್​ ಹರಾಜು ಹಾಕಲಿರುವ ಹಾಡು ಯಾವುದು? ಪ್ರಭಾಸ್​ ನಟನೆಯ ಸಾಹೋ ಸಿನಿಮಾದ್ದು. ಹೌದು, ಪ್ರಭಾಸ್​ ನಟನೆಯ ಸಾಹೋ ಸಿನಿಮಾಗೆ ಗಿಬ್ರಾನ್​ ಸೇರಿ ಹಲವು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್​ ಸಾಂಗ್​ ಕಂಪೋಸ್​ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಹಾಡನ್ನು ಬಳಸಿಕೊಳ್ಳಲಿಲ್ಲ ಮತ್ತು ರಿಲೀಸ್​ ಕೂಡ ಮಾಡಲಿಲ್ಲ. ಅದೇ ಗೀತೆಯನ್ನು ಈಗ ಹರಾಜು ಹಾಕಲು ಗಿಬ್ರಾನ್​ ನಿರ್ಧರಿಸಿದ್ದಾರೆ.

‘ಹರಾಜಿನಿಂದ ಬರುವ ಹಣದಲ್ಲಿ ಶೇ.50ರಷ್ಟನ್ನು ತಮಿಳುನಾಡು ಸಿಎಂ ರಿಲೀಫ್​ ಫಂಡ್​ಗೆ ದೇಣಿಗೆಯಾಗಿ ನೀಡುತ್ತೇನೆ. ಕೊರೊನಾ ವೈರಸ್​ ಮತ್ತು ಲಾಕ್​ಡೌನ್​ನಿಂದ ಕೆಲಸ ಇಲ್ಲದೆ ಕಷ್ಟಪಡುತ್ತಿರುವ ಸಂಗೀತಗಾರರಿಗೂ ಸಹಾಯ ಮಾಡುತ್ತೇನೆ. ಎನ್​ಎಫ್​ಟಿ (non-fungible token) ವೆಬ್​ಸೈಟ್​ ಮೂಲಕ ಈ ರೀತಿ ಹಾಡು ಹರಾಜು ಆಗುತ್ತಿರುವುದು ಭಾರತದಲ್ಲಿ ಇದೇ ಮೊದಲು’ ಎಂದು ಗಿಬ್ರಾನ್​ ಹೇಳಿದ್ದಾರೆ.

‘ಈವರೆಗೂ ನಾನು ಮತ್ತು ನಿರ್ದೇಶಕ ಸುಜೀತ್​ ಹೊರತುಪಡಿಸಿ ಆ ಹಾಡನ್ನು ಯಾರೂ ಕೇಳಿಲ್ಲ. ಹಾಡು ಮೂಡಿಬಂದಿರುವ ರೀತಿ ಬಗ್ಗೆ ನಮಗೆ ತುಂಬ ಸಂತಸ ಇದೆ’ ಎಂದಿದ್ದಾರೆ ಗಿಬ್ರಾನ್​. ಯಾರೂ ಕೇಳಿರದ ಈ ಹಾಡನ್ನು ಹರಾಜಿನಲ್ಲಿ ಯಾರು ಕೊಂಡುಕೊಳ್ಳಲಿದ್ದಾರೆ? ಎಷ್ಟು ಹಣ ಸಂಗ್ರಹ ಆಗಲಿದೆ ಎಂಬ ಕೌತುಕ ಎಲ್ಲರಲ್ಲೂ ಮೂಡಿದೆ.

ಕೊವಿಡ್​ ಸಂದರ್ಭದಲ್ಲಿ ಅಜಿತ್​ ಕುಮಾರ್​, ಸೂರ್ಯ, ಯಶ್​, ಉಪೇಂದ್ರ, ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​ ಸೇರಿದಂತೆ ಹಲವಾರು ನಟರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ, ಅರ್ಜುನ್​ ಗೌಡ ಮುಂತಾದವರು ಕೊರೊನಾ ಸೋಂಕಿತರ ಕುಟುಂಬದವರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದಾರೆ.

ಇದನ್ನೂ ಓದಿ:

ಪ್ರಭಾಸ್​ ಚಿತ್ರದಲ್ಲಿ 10 ಬಾಲಿವುಡ್​ ಸೆಲೆಬ್ರಿಟಿಗಳು; ಸಂಭಾವನೆ ಮೊತ್ತವೇ 200 ಕೋಟಿ! ಯಾವುದು ಈ ಸಿನಿಮಾ?​

ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು