AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ರಿಮೇಕ್​ ಮಾಡೋಕೆ ಸಲ್ಮಾನ್​ ಖಾನ್​ ಕೊನೆಗೂ ಫೈನಲ್​ ಮಾಡಿದ್ರು ಸಿನಿಮಾ

ಒಂದೊಮ್ಮೆ ಸಲ್ಮಾನ್​ ಖಾನ್ ಈ ಸಿನಿಮಾ ರಿಮೇಕ್​ ಮಾಡುತ್ತಾರೆ ಎಂದಾದರೂ ಅದು ತೆರೆಗೆ ಬರೋಕೆ ಸಾಕಷ್ಟು ಸಮಯ ಬೇಕಾಗಬಹುದು. ಬಾಲಿವುಡ್​ ನೇಟಿವಿಟಿಗೆ ತಕ್ಕಂತೆ ಸಿನಿಮಾದ ಕಥೆ ಬದಲಾಯಿಸಬೇಕು, ಸಂಭಾಷಣೆ ಬರೆಯಬೇಕು, ಕಲಾವಿದರ ಆಯ್ಕೆ ಮಾಡಬೇಕು.

Salman Khan: ರಿಮೇಕ್​ ಮಾಡೋಕೆ ಸಲ್ಮಾನ್​ ಖಾನ್​ ಕೊನೆಗೂ ಫೈನಲ್​ ಮಾಡಿದ್ರು ಸಿನಿಮಾ
ಸಲ್ಮಾನ್​-ರವಿತೇಜಾ
ರಾಜೇಶ್ ದುಗ್ಗುಮನೆ
| Edited By: |

Updated on: Jun 10, 2021 | 2:55 PM

Share

‘ರಾಧೆ: ಯುವರ್ ಮೋಸ್ಟ್​ ವಾಂಟೆಡ್​ ಭಾಯ್’​ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗಿ ನೆಲಕಚ್ಚಿತ್ತು. ಸತತ ಸೋಲಿನಿಂದ ಕಂಗೆಟ್ಟಿರುವ ಸಲ್ಮಾನ್ ಖಾನ್ ಟಾಲಿವುಡ್​ನ ಚಿತ್ರವೊಂದನ್ನು ರಿಮೇಕ್​ ಮಾಡೋಕೆ ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಈಗ ರಿಮೇಕ್​ಮಾಡೋಕೆ ಸಲ್ಮಾನ್​ ಖಾನ್​ ತೆಲುಗಿನ ಸಿನಿಮಾವೊಂದನ್ನು ಫೈನಲ್​ ಮಾಡಿದ್ದಾರೆ.

2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್​-3’, ‘ಭಾರತ್’​, ‘ದಬಾಂಗ್​ 3’ ಚಿತ್ರಗಳು ಸೋಲು ಕಂಡಿದ್ದವು. ಹೀಗಾಗಿ, ರಾಧೆ ಸಿನಿಮಾ ಮೂಲಕ ಅವರಿಗೆ ಯಶಸ್ಸು ಗಳಿಸೋದು ಅನಿವಾರ್ಯವಾಗಿತ್ತು. ಆದರೆ, ಸಲ್ಲು ಲೆಕ್ಕಾಚಾರ ತಲೆಕೆಳಗಾಗಿದೆ. ರಾಧೆ ಸಿನಿಮಾ ಕೂಡ ವಿಮರ್ಶೆಯಲ್ಲಿ ಸೋತಿದೆ. ಇದರಿಂದ ಸಲ್ಲು ಆತಂಕಕ್ಕೆ ಒಳಗಾಗಿದ್ದು, ಶೀಘ್ರವೇ ತೆಲುಗು ಸಿನಿಮಾ ರಿಮೇಕ್​ ಮಾಡಲಿದ್ದಾರೆ ಎನ್ನಲಾಗಿತ್ತು. ಅದೇ ರೀತಿ ಸಲ್ಮಾನ್​ ಖಾನ್​ ತೆಲುಗು ಚಿತ್ರವೊಂದನ್ನು ನೋಡಿ ಇಷ್ಟಪಟ್ಟಿದ್ದಾರಂತೆ.

ನಿರ್ದೇಶಕ ರಮೇಶ್ ವರ್ಮಾ ಹಾಗೂ ನಟ ರವಿತೇಜ ‘ಖಿಲಾಡಿ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಟೀಸರ್​ ರಿಲೀಸ್​ ಆಗಿತ್ತು. ಸಲ್ಮಾನ್​ ಖಾನ್​ ಈ ಟೀಸರ್​ ವೀಕ್ಷಣೆ ಮಾಡಿದ್ದು, ಅವರಿಗೆ ಇಷ್ಟವಾಗಿದೆ. ಕೂಡಲೇ ಸಿನಿಮಾ ತಂಡವನ್ನು ಸಲ್ಲು ಸಂಪರ್ಕಿಸಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಸಲ್ಲುಗೆ ಇಷ್ಟವಾಗಿದ್ದು, ಇದನ್ನೇ ರಿಮೇಕ್​ ಮಾಡೋಕೆ ಅವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಒಂದೊಮ್ಮೆ ಸಲ್ಮಾನ್​ ಖಾನ್ ಈ ಸಿನಿಮಾ ರಿಮೇಕ್​ ಮಾಡುತ್ತಾರೆ ಎಂದಾದರೂ ಅದು ತೆರೆಗೆ ಬರೋಕೆ ಸಾಕಷ್ಟು ಸಮಯ ಬೇಕಾಗಬಹುದು. ಬಾಲಿವುಡ್​ ನೇಟಿವಿಟಿಗೆ ತಕ್ಕಂತೆ ಸಿನಿಮಾದ ಕಥೆ ಬದಲಾಯಿಸಬೇಕು, ಸಂಭಾಷಣೆ ಬರೆಯಬೇಕು, ಕಲಾವಿದರ ಆಯ್ಕೆ ಮಾಡಬೇಕು. ಇದೆಲ್ಲ ಆದ ನಂತರ ಶೂಟಿಂಗ್​, ನಂತರ ಪೋಸ್ಟ್​ ಪ್ರೊಡಕ್ಷನ್​ ಮಾಡಿ ಚಿತ್ರ ತೆರೆಗೆ ತರುವುದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ.

ಇನ್ನು, ಹಿಂದಿಯಲ್ಲೂ ರಮೇಶ್ ಬಳಿಯೇ ಸಿನಿಮಾ ಮಾಡುವಂತೆ ಸಲ್ಲು ಕೋರಿದ್ದಾರೆ ಎನ್ನಲಾಗುತ್ತಿದೆ. ಅವರು ಇದನ್ನು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ, ಸಲ್ಮಾನ್​ ಖಾನ್​ ಈ ಸಿನಿಮಾ ರಿಮೇಕ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಅಂದಹಾಗೆ, ಸಲ್ಮಾನ್​ ಖಾನ್​ ಟಾಲಿವುಡ್​ ಸಿನಿಮಾ ಮೊರೆ ಹೋಗಿದ್ದು ಇದೇ ಮೊದಲೇನಲ್ಲ. 2009ರಲ್ಲಿ ತೆರೆಗೆ ಬಂದಿದ್ದ ‘ಕಿಕ್’​ ಚಿತ್ರವನ್ನು ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್​ ಮಾಡಿ ಯಶಸ್ಸು ಕಂಡಿದ್ದರು. ಇನ್ನು ತೆಲುಗಿನ ಅರ್ಜುನ್​ ರೆಡ್ಡಿ, ಟೆಂಪರ್​ ಚಿತ್ರಗಳು ಬಾಲಿವುಡ್​ಗೆ ರಿಮೇಕ್​ ಆಗಿ ಯಶಸ್ಸು ಗಳಿಸಿವೆ.

ಇದನ್ನೂ ಓದಿ:

ರಾಧೆ ತೆರೆಕಂಡ ಬೆನ್ನಲ್ಲೇ ಒಟಿಟಿಗೆ ಗುಡ್​​ ಬೈ ಹೇಳಿದ ಸಲ್ಮಾನ್​ ಖಾನ್​

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ