AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್​ ಪುತ್ರ ವರ್ಸಸ್​ ಜೂ. ಎನ್​ಟಿಆರ್​ ಪುತ್ರ; ಪಾತ್ರಕ್ಕಾಗಿ ಸ್ಟಾರ್ ಕಿಡ್​ಗಳ ಪೈಪೋಟಿ?

ಶಕುಂತಲೆಯ ಮಗ ಭರತನ ಪಾತ್ರಕ್ಕಾಗಿ ಈಗ ಬಾಲಕನೊಬ್ಬನನ್ನು ನಿರ್ದೇಶಕರು ಆಯ್ಕೆ ಮಾಡಬೇಕಿದೆ. ಆ ಪಾತ್ರಕ್ಕೆ ಅಲ್ಲು ಅಯಾನ್​ ಮತ್ತು ಅಭಯ್​ ರಾಮ್​ ಹೆಸರುಗಳು ಕೇಳಿಬರುತ್ತಿವೆ.

ಅಲ್ಲು ಅರ್ಜುನ್​ ಪುತ್ರ ವರ್ಸಸ್​ ಜೂ. ಎನ್​ಟಿಆರ್​ ಪುತ್ರ; ಪಾತ್ರಕ್ಕಾಗಿ ಸ್ಟಾರ್ ಕಿಡ್​ಗಳ ಪೈಪೋಟಿ?
ಅಲ್ಲು ಅರ್ಜುನ್​, ಅಲ್ಲು ಅಯಾನ್​, ಜ್ಯೂ. ಎನ್​ಟಿಆರ್​, ಅಭಯ್​ ರಾಮ್​
ಮದನ್​ ಕುಮಾರ್​
|

Updated on: Jun 10, 2021 | 12:50 PM

Share

ಸ್ಟಾರ್​ ಕಲಾವಿದರ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಡುವುದು ಭಾರತದ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸರ್ವೇಸಾಮಾನ್ಯ. ನೆಪೋಟಿಸಂ ಬಗ್ಗೆ ಪರ-ವಿರೋಧದ ಚರ್ಚೆ ಏನೇ ಇದ್ದರೂ ಕೂಡ ಸ್ಟಾರ್​ ಕುಟುಂಬದ ಕುಡಿಗಳಿಗೆ ಬಹುಬೇಗ ಅವಕಾಶಗಳು ಸಿಕ್ಕಿಬಿಡುತ್ತವೆ. ಅದೇನೇ ಇರಲಿ, ಈಗ ಅಲ್ಲು ಅರ್ಜುನ್​ ಪುತ್ರ ಅಲ್ಲು ಅಯಾನ್​ ಹಾಗೂ ಜ್ಯೂ. ಎನ್​ಟಿಆರ್​ ಪುತ್ರ ಅಭಯ್​ ರಾಮ್​ ಕೂಡ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಇನ್ನೂ ಎಳೆ ಬಾಲಕರಾಗಿರುವ ಈ ಪೋರರ ನಡುವೆ ಪಾತ್ರಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂಬ ಮಾತು ಟಾಲಿವುಡ್​ ಅಂಗಳಲ್ಲಿ ಹರಿದಾಡುತ್ತಿದೆ!

ಸದ್ಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಮೂಲಕ ಭಾರಿ ಯಶಸ್ಸು ಕಂಡಿರುವ ನಟಿ ಸಮಂತಾ ಅಕ್ಕಿನೇನಿ ಅವರು ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಶಕುಂತಲೆಯಾಗಿ ಸಮಂತಾ ಕಾಣಿಸಿಕೊಂಡರೆ, ಶಕುಂತಲೆಯ ಮಗ ಭರತನ ಪಾತ್ರಕ್ಕಾಗಿ ಈಗ ಬಾಲಕನೊಬ್ಬನನ್ನು ನಿರ್ದೇಶಕರು ಆಯ್ಕೆ ಮಾಡಬೇಕಿದೆ. ಆ ಪಾತ್ರಕ್ಕೆ ಅಲ್ಲು ಅಯಾನ್​ ಮತ್ತು ಅಭಯ್​ ರಾಮ್​ ಹೆಸರುಗಳು ಕೇಳಿಬರುತ್ತಿವೆ.

ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಈ ಗಾಸಿಪ್ ಬಗ್ಗೆ ಯಾರೂ ಸಹ ಅಧಿಕೃತವಾಗಿ ಮಾತನಾಡಿಲ್ಲ. ತಮ್ಮ ಪುತ್ರರನ್ನು ಲಾಂಚ್​ ಮಾಡುವ ಬಗ್ಗೆ ಜ್ಯೂ. ಎನ್​ಟಿಆರ್ ಆಗಲಿ, ಅಲ್ಲು ಅರ್ಜುನ್​ ಆಗಲಿ ಏನನ್ನೂ ಹೇಳಿಕೊಂಡಿಲ್ಲ. ಚಿತ್ರತಂಡದಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ತಮ್ಮದೇ ರೀತಿಯ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಜ್ಯೂ. ಎನ್​ಟಿಆರ್​ ಅವರು ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1996ರಲ್ಲಿ ಅವರು ನಟಿಸಿದ ಎರಡನೇ ಚಿತ್ರಕ್ಕೆ ಇದೇ ಗುಣಶೇಖರ್​ ಅವರು ನಿರ್ದೇಶನ ಮಾಡಿದ್ದರು. ಹಾಗಾಗಿ ಈಗ ಜ್ಯೂ. ಎನ್​ಟಿಆರ್​ ಪುತ್ರನನ್ನೂ ಅವರೇ ಬಾಲನಟನಾಗಿ ಲಾಂಚ್​ ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಚಿತ್ರತಂಡ ಮೂಲಗಳಿಂದ ಬೇರೆಯದೇ ಸಮಾಚಾರ ಕೇಳಿಬರುತ್ತಿದೆ. ‘ಸದ್ಯಕ್ಕಂತೂ ನಿರ್ದೇಶಕರು ಆ ರೀತಿಯ ಯಾವುದೇ ಪ್ಲ್ಯಾನ್​ ಮಾಡಿಕೊಂಡಿಲ್ಲ. ಎಲ್ಲ ಕಡೆ ಹೈಪ್​ ಸೃಷ್ಟಿ ಆಗಿರುವುದರಿಂದ ಸ್ಟಾರ್​ ಕಿಡ್​ಗಳಲ್ಲಿ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಬಹುದೇನೋ’ ಎನ್ನಲಾಗುತ್ತಿದೆ.

ಜ್ಯೂ. ಎನ್​ಟಿಆರ್​ ಅವರು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅತ್ತ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

Butta Bomma Song: ‘ಬುಟ್ಟ ಬೊಮ್ಮ..’ ಹಾಡಿಗೆ ಮತ್ತೊಂದು ದಾಖಲೆ; ಹಿರಿಹಿರಿ ಹಿಗ್ಗಿದ ಅಲ್ಲು ಅರ್ಜುನ್​ ಫ್ಯಾನ್ಸ್​​

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು