AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ

ನಟನೆಗೆ ಕೊಂಚ ಬ್ರೇಕ್​ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್​ ಮಾಡಿಕೊಂಡಿದ್ದರು. ಹಾಗಾಗಿ ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶವನ್ನೂ ತಳ್ಳಿ ಹಾಕಿದ್ದರು. ಆದರೆ ಕಡೆಗೆ ಆಗಿದ್ದೇ ಬೇರೆ.

ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ
ಶಾರುಖ್ ಖಾನ್, ಸಮಂತಾ, ನಾಗ ಚೈತನ್ಯ
TV9 Web
| Edited By: |

Updated on: Oct 17, 2021 | 9:36 AM

Share

ಕಳೆದ ಕೆಲವು ತಿಂಗಳಿನಿಂದ ನಟಿ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದವು. ಅವರು ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ನಂತರವೂ ಅದರ ಕುರಿತಾದ ಗಾಸಿಪ್​ಗಳಿಗೆ ಬ್ರೇಕ್​ ಬಿದ್ದಿಲ್ಲ. ಅಷ್ಟೊಂದು ಅನ್ಯೋನ್ಯವಾಗಿದ್ದ ಜೋಡಿ ಏಕಾಏಕಿ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳಲು ಕಾರಣ ಏನಿರಬಹುದು ಎಂಬುದನ್ನು ಗಾಸಿಪ್​ ಮಂದಿ ಕೆದಕುತ್ತಲೇ ಇದ್ದಾರೆ. ಈ ನಡುವೆ ಸಮಂತಾಗೆ ಆದ ಎರಡು ದೊಡ್ಡ ನಷ್ಟದ ಬಗ್ಗೆ ಈಗ ಗುಸುಗುಸು ಹಬ್ಬಿದೆ. ಮಗು ಪಡೆಯಬೇಕು ಎಂದುಕೊಂಡಿದ್ದ ಸಮಂತಾ ಆಸೆ ಮಣ್ಣು ಪಾಲಾಯಿತು. ಅವರಿಗೆ ಶಾರುಖ್​ ಜೊತೆ ನಟಿಸುವ ಅವಕಾಶವೂ ಕೈತಪ್ಪಿ ಹೋಯಿತು ಎಂಬ ಗಾಸಿಪ್​ ಕೇಳಿಬಂದಿದೆ.

ಬಾಲಿವುಡ್​ ನಟ ಶಾರುಖ್​ ಖಾನ್​ ಜೊತೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು. ಅದನ್ನು ವೈಯಕ್ತಿಕ ಕಾರಣದಿಂದ ಸಮಂತಾ ರಿಜೆಕ್ಟ್​ ಮಾಡಿದ್ದರಂತೆ. ಏನು ಆ ವೈಯಕ್ತಿಕ ಕಾರಣ? ತಾಯಿಯಾಗುವ ಹಂಬಲ!

ಹೌದು, ನಟನೆಗೆ ಕೊಂಚ ಬ್ರೇಕ್​ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್​ ಮಾಡಿಕೊಂಡಿದ್ದರು. ಅದಕ್ಕಾಗಿಯೇ ಅವರು ‘ಶಾಕುಂತಲಂ’ ಚಿತ್ರದ ಶೂಟಿಂಗ್​ ಬೇಗ ಬೇಗ ಮುಗಿಯುವಂತೆ ಒತ್ತಾಯ ಹೇರಿದ್ದರು. ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶವನ್ನೂ ತಳ್ಳಿ ಹಾಕಿದ್ದರು. ಆದರೆ ಕಡೆಗೆ ಆಗಿದ್ದೇ ಬೇರೆ.

ನಾಗ ಚೈತನ್ಯ ಮತ್ತು ಸಮಂತಾ ನಡುವೆ ವೈಮನಸ್ಸು ಮೂಡಿತು. ಅದು ವಿಚ್ಛೇದನದಲ್ಲಿ ಕೊನೆಯಾಯಿತು. ಮಗು ಪಡೆಯಬೇಕು ಎಂಬ ಸಮಂತಾ ಆಸೆ ಈಡೇರಲೇ ಇಲ್ಲ. ಅತ್ತ, ಶಾರುಖ್​ ಜೊತೆ ನಟಿಸುವ ಅವಕಾಶವೂ ಕೈ ಹಿಡಿಯಲಿಲ್ಲ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ಸಮಂತಾ ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳುವತ್ತ ಗಮನ ಹರಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ಯಶಸ್ಸಿನ ಬಳಿಕ ಅವರಿಗೆ ಬೇಡಿಕೆ ಹೆಚ್ಚಿದೆ. ದಸರಾ ಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದ್ದು, ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಇದು ವಿಚ್ಛೇದನದ ಬಳಿಕ ಅವರು ಒಪ್ಪಿಕೊಂಡ ಮೊದಲ ಸಿನಿಮಾ.

ಇದನ್ನೂ ಓದಿ:

ಡಿವೋರ್ಸ್​ ಬಳಿಕ ನಾಗ ಚೈತನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್​: ಅ.22ಕ್ಕಾಗಿ ಎಲ್ಲರ ನಿರೀಕ್ಷೆ

‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ