ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ 1, ದರ್ಶನ್ ಎ 2; ನಟನಿಗೆ ಹೆಚ್ಚಿದ ಸಂಕಷ್ಟ

| Updated By: ಮದನ್​ ಕುಮಾರ್​

Updated on: Jun 11, 2024 | 7:03 PM

ರೇಣುಕಾ ಸ್ವಾಮಿಯ ಕೊಲೆ ಕೇಸ್​ನಲ್ಲಿ ನಟಿ ಪವಿತ್ರಾ ಗೌಡ ಎ 1 ಆಗಿದ್ದು, ನಟ ದರ್ಶನ್​ ಎ 2 ಹಾಗೂ ಸಹಚರ ಕೆ. ಪವನ್​ ಎ 3 ಆಗಿದ್ದಾನೆ. ಬೌರಿಂಗ್​ ಆಸ್ಪತ್ರೆಯಲ್ಲಿ ಎಲ್ಲ 13 ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಒಟ್ಟು 13 ಜನರನ್ನು ಇಂದು (ಜೂನ್​ 11) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ತನಿಖೆಯ ತೀವ್ರತೆ ಹೆಚ್ಚಾಗಿದೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ 1, ದರ್ಶನ್ ಎ 2; ನಟನಿಗೆ ಹೆಚ್ಚಿದ ಸಂಕಷ್ಟ
ದರ್ಶನ್​, ಪವಿತ್ರಾ ಗೌಡ
Follow us on

ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು (Renuka Swamy) ಕೊಲೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಈ ಪ್ರಕರಣದ ತನಿಖೆ ಚುರುಕಾಗಿದೆ. ಕೇಸ್​ನಲ್ಲಿ ಪವಿತ್ರಾ ಗೌಡ (Pavithra Gowda) ಎ1 ಆಗಿದ್ದು, ದರ್ಶನ್​ ಎ2 ಹಾಗೂ ಕೆ. ಪವನ್​ ಎ3 ಆಗಿದ್ದಾನೆ. ಎಲ್ಲರ ಮೆಡಿಕಲ್​ ಟೆಸ್ಟ್​ ಮಾಡಿಸಲಾಗಿದೆ. ಒಟ್ಟು 13 ಜನರನ್ನು ಇಂದು (ಜೂನ್​ 11) ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ದರ್ಶನ್​ (Darshan) ಬದುಕಿನಲ್ಲಿ ಈ ಪ್ರಕರಣ ಕಪ್ಪು ಚುಕ್ಕಿ ಆಗಿದೆ. ಈಗ ದರ್ಶನ್​ ಜೈಲುಪಾಲಾಗುವ ಸಾಧ್ಯತೆ ದಟ್ಟವಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆಲ್ಲ ಶಾಕಿಂಗ್​ ವಿಚಾರಗಳು ಬಹಿರಂಗ ಆಗುತ್ತಿವೆ. ದರ್ಶನ್​, ಪವಿತ್ರಾ ಗೌಡ ಹಾಗೂ ಅವರ ಸಹಚರರ ವಿರುದ್ಧ ಅನೇಕ ಸಾಕ್ಷಿಗಳು ಸಿಗುತ್ತಿವೆ. ಕೊಲೆ ನಡೆದ ಶೆಡ್​ಗೆ ಅದೇ ರಾತ್ರಿ ದರ್ಶನ್​ ಕಾರು ಬಂದಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಪ್ರಾಥಮಿಕ ತನಿಖೆ ನಡೆದಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸ್​ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಸೇರಿ 13 ಜನರ ಬಂಧನ; ಇಲ್ಲಿದೆ ಎಲ್ಲರ ವಿವರ

ರೇಣುಕಾ ಸ್ವಾಮಿ ಅವರ ಮೃತ ದೇಹ ಸಿಕ್ಕ ನಂತರ ಪೊಲೀಸರು ತನಿಖೆ ಶುರು ಮಾಡಿದರು. ಆ ವೇಳೆ ದರ್ಶನ್​ ಹೆಸರು ಹೊರಬಂದಿತ್ತು. ಕೂಡಲೇ ದರ್ಶನ್​ರನ್ನು ಮೈಸೂರಲ್ಲಿ ಪೊಲೀಸರು ಅರೆಸ್ಟ್​ ಮಾಡಿದರು. ಬಳಿಕ ಅವರನ್ನು ಬೆಂಗಳೂರಿಗೆ ಕರೆದುಕೊಂಡು ತನಿಖೆ ಚುರುಕುಗೊಳಿಸಲಾಯಿತು. ನಂತರ ಬೌರಿಂಗ್​ ಆಸ್ಪತ್ರೆಯಲ್ಲಿ ಪವಿತ್ರಾ ಗೌಡ, ದರ್ಶನ್​, ಕೆ. ಪವನ್​ ಸೇರಿದಂತೆ ಎಲ್ಲ 13 ಆರೋಪಿಗಳನ್ನು ಮೆಡಿಕಲ್​ ಟೆಸ್ಟ್​ಗೆ ಒಳಪಡಿಸಲಾಯಿತು. ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:28 pm, Tue, 11 June 24