‘ನಂಬಿಕೆ ದ್ರೋಹದ ಕಾಲಮಾನ’; ಫೋಟೋ ತೋರಿಸಿ ಜಗ್ಗೇಶ್​ ಹೇಳಿದ್ದಿಷ್ಟು..

ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ‘ರಂಗನಾಯಕ’ ಸಿನಿಮಾವನ್ನು ಟ್ರೋಲ್​ ಮಾಡಲಾಯಿತು. ಬಳಿಕ ಜಗ್ಗೇಶ್​ ಅವರು ರಾಯರ ಸನ್ನಿಧಿಯಲ್ಲಿ ನಿಂತು ಜನರ ಬಳಿ ಕ್ಷಮೆ ಕೇಳಿದರು. ಈಗ ಅವರು ದೀರ್ಘವಾದ ಬರಹ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಕೆಲವು ಅಪರೂಪದ ಫೋಟೋಗಳನ್ನು ಕೂಡ ಅಪ್​ಲೋಡ್​ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ನಂಬಿಕೆ ದ್ರೋಹದ ಕಾಲಮಾನ’; ಫೋಟೋ ತೋರಿಸಿ ಜಗ್ಗೇಶ್​ ಹೇಳಿದ್ದಿಷ್ಟು..
ಜಗ್ಗೇಶ್​
Follow us
|

Updated on: Mar 21, 2024 | 4:38 PM

ನಟ ಜಗ್ಗೇಶ್ (Jaggesh) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿರುವ ಅವರು ರಾಯರ ಭಕ್ತರು ಕೂಡ ಹೌದು. ಬಡತನದ ಕುಟುಂಬದಿಂದ ಬಂದ ಅವರು ನಂತರ ಸ್ಟಾರ್​ ನಟನಾಗಿ ಬೆಳೆದರು. ಈಗಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ‘ರಂಗನಾಯಕ’ (Ranganayaka) ಸಿನಿಮಾ ಬಿಡುಗಡೆಯಾಗಿ ಮುಗ್ಗರಿಸಿತು. ಆ ಚಿತ್ರದ ಕೆಲವು ದೃಶ್ಯ ಮತ್ತು ಡೈಲಾಗ್​ಗಳನ್ನು ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಯಿತು. ಬಳಿಕ ಜಗ್ಗೇಶ್​ ಅವರು ಮಂತ್ರಾಲಯದಲ್ಲಿ ಜನರ ಕ್ಷಮೆ ಕೇಳಿದರು. ಈ ಘಟನೆಗಳ ಬೆನ್ನಲ್ಲೇ ಅವರು ಹೊಸ ಪೋಸ್ಟ್​ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ತೋರಿಸಿ, ತಮ್ಮ ಜೀವನದ ನೆನಪಿನ ಪುಟಗಳನ್ನು ಅವರು ತೆರೆದಿದ್ದಾರೆ. ಜಗ್ಗೇಶ್ ಹಂಚಿಕೊಂಡ ಬರಹ ಇಲ್ಲಿದೆ..

‘ಹಳ್ಳಿ ಹುಡುಗನ ಕನಸು. ಈ ಚಿತ್ರಗಳ ಮೆಲುಕು ಹಾಕಿ ಮತ್ತೊಮ್ಮೆ ನೋಡಿ ನನಗನ್ನಿಸಿದ್ದು ಇವನು ಇಲ್ಲಿಂದ ಬೆಳೆದವ ಎಂದರೆ ಸಿನಿಮಾ ಕಥೆ ಓಕೆ, ಆದರೆ ನಿಜಜೀವನದಲ್ಲಿ ಯಾರು ನಂಬರು. ಬೇರೆಯವರು ಯಾಕೆ? ನನಗೇ ಅನುಮಾನ ಬಂತು! ನಾನು ಹುಟ್ಟಿದ್ದು ಸಣ್ಣ ಕುಟುಂಬ, ಆದರೆ ದೊಡ್ಡ ಕನಸು. ನಟನಾಗಬೇಕು, ಅದು ಅತಿರಥರ 1980ರ ಕಾಲದಲ್ಲಿ! ನೀವೇ ಹೇಳಿ.. ಮಗನ ಈ ಕನಸನ್ನು ಯಾವ ಅಪ್ಪ ಒಪ್ಪುತ್ತಾನೆ? ಹಾಗಾಗಿ ಬೂಟಿನ ಏಟು ಬಾಲ್ಯದ ನಿತ್ಯ ಪೂಜೆಯಾಗಿತ್ತು. ಅಮ್ಮನ ಕಣ್ಣೀರು ನಿತ್ಯದ ಅಭಿಷೇಕವಾಗಿತ್ತು’ ಎಂದು ಜಗ್ಗೇಶ್​ ಬರಹ ಆರಂಭಿಸಿದ್ದಾರೆ.

‘ಸಿಟ್ಟು, ರೋಷ, ದ್ವೇಷ ನನ್ನದಾಗಿತ್ತು. ಇದು ನನ್ನ ಬದುಕಾಗಿತ್ತು! ಈಗ ನೆನೆದರೆ ನನ್ನ ಬಗ್ಗೆ ಅನುಮಾನ. ನಾನು ಇಷ್ಟು ದೂರ ನಡೆದುಬಂದನೆ ಎಂದು? ಸಾಧಿಸುವವರಿಗೆ, ದಾರಿ ಕಾಣದವರಿಗೆ, ಅಸಹಾಯಕರಾದವರಿಗೆ, ಕೊನೆಯ ಘಟ್ಟ ಎಂದುಕೊಂಡವರಿಗೆ ನನ್ನ ಬದುಕಿನಿಂದ ಸಣ್ಣ ಧೈರ್ಯದ ಚಿಲುಮೆ ಚಿಮ್ಮಲಿ. ಅವರ ಮನ ನನ್ನ ನೋಡಿ ಎಲ್ಲವೂ ಸಾಧ್ಯ, ಯಾವುದೂ ಅಸಾಧ್ಯವಲ್ಲ ಎಂದುಕೊಳ್ಳಲಿ. ಶ್ರೇಷ್ಟ ಚಿಂತನೆಯ ಮನಸಿದ್ದರೆ ಮಾರ್ಗ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಂಗನಾಯಕ ಚಿತ್ರಕ್ಕೂ ನನಗೂ ಸಂಬಂಧವಿಲ್ಲ, ಅದು ನನ್ನ ಚಿತ್ರವಲ್ಲ’: ಜಗ್ಗೇಶ್

‘ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ. ಅಂದು ಹಠಮಾಡಿದ ಮಗ ಈಗ ಸಾಧಿಸಿದ್ದಾನೆ. ನೋಡಲು ಅಪ್ಪ-ಅಮ್ಮ ಇಲ್ಲ. ಇಂದಿನ ಸಮಯಕ್ಕೆ ಸಾಧನೆ ಶ್ರಮ ತಪಸ್ಸು ಯಶಸ್ಸು ಕಾಮಿಡಿ ಪೀಸು ಅಂದರೆ ಫಾರ್​ ಗ್ರ್ಯಾಂಟೆಡ್​. ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ. ಮನಸ್ಸು ಎಂಬ ಮೊಸರನ್ನು ರಾಯರು ಎಂಬ ಕಡೆಗೋಲಿನಿಂದ ಕಡೆದು ತಿಳಿಯಾದ ಮಜ್ಜಿಗೆ ಮಾಡಿಕೊಂಡು ಪ್ರಶಾಂತವೆಂಬ ಸರೋವರ ಮಾಡಿಕೊಂಡಿರುವೆ ಚಂಚಲ ಮನಸ್ಸನ್ನು. ಇಂಥ ಶ್ರಮದ ಬದುಕು ಕಟ್ಟಿಕೊಂಡವ ನಾನು. ನನ್ನಂತೆ ಎಲ್ಲರೂ ಬೆಳೆಯಿರಿ ಎಂದು ಅಪ್ಪಿದರೆ, ಮುತ್ತಿಡುವಂತೆ ನಟಿಸಿ ವಿಷ ಇಟ್ಟು ಕೊಂದು ಸಂಭ್ರಮಿಸುವರು. ಇದರ ಮತ್ತೊಂದು ಹೆಸರೇ ನಂಬಿಕೆ ದ್ರೋಹದ ಕಾಲಮಾನ’ ಎಂದು ಜಗ್ಗೇಶ್​ ಪೋಸ್ಟ್​ ಮಾಡಿದ್ದಾರೆ.

ಜಗ್ಗೇಶ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

‘ಇಂದು ಶ್ರಮಕ್ಕೆ ಬೆಲೆಯಿಲ್ಲ. ಬೆಳಿಗ್ಗೆ ಹುಟ್ಟಿ ಮಧ್ಯಾಹ್ನ ಬೆಳೆದು ರಾತ್ರಿ ಸಾಯುವ ಕಾಲಘಟ್ಟ. ಬೆವರು ಸುರಿಸದೇ ಬೆಳೆಯದೇ ಅನುಭವ ಹಂಚುವ ಜಗತ್ತು. ನನ್ನ 40 ವರ್ಷದ ಬೆಳವಣಿಗೆ ಬಳಕೆಗೆ ಉಪಯುಕ್ತ ಅನ್ನಿಸಿದರೆ ಅನುಸರಿಸಿ, ಬೆಳೆಯಿರಿ, ಉಳಿಯಿರಿ. ಜನ್ಮಕೊಟ್ಟವರ ಸಮಾಜದ ಮುತ್ತು, ರತ್ನ, ಹವಳ, ಪಚ್ಚೆ, ವಜ್ರವಾಗಿ. ಹಳ್ಳಿಯಿಂದ ಡೆಲ್ಲಿಯ ಬೆವರಿನ ಪ್ರಯಾಣದ ನಿಮ್ಮ ಮನೆಯ ಬಂಧುವಿಗೆ ಹರಸುತ್ತಿರಿ’ ಎಂದು ಜಗ್ಗೇಶ್​ ಅವರು ಬರಹ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?