AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

ಪುನೀತ್​ ರಾಜ್​ಕುಮಾರ್​ ಅವರ ಹೃದಯಾಘಾತಕ್ಕೆ ಜಿಮ್ ವರ್ಕೌಟ್ ಕಾರಣ ಎಂಬ ಭಾವನೆ ಹಲವರಲ್ಲಿ ಬೇರೂರಿದೆ. ಹಾಗಾಗಿ ಜಿಮ್​ಗೆ ತೆರಳಲು ಅನೇಕರು ಹಿಂದೇಡು ಹಾಕುತ್ತಿದ್ದಾರೆ.

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ
ಪುನೀತ್​ ರಾಜ್​ಕುಮಾರ್
TV9 Web
| Updated By: ಮದನ್​ ಕುಮಾರ್​|

Updated on:Nov 11, 2021 | 10:09 AM

Share

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಪ್ಪು ವರ್ಕೌಟ್​ ಮಾಡುವ ವಿಡಿಯೋಗಳು (Puneeth Rajkumar workout video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಅಷ್ಟೊಂದು ಫಿಟ್​ ಆಗಿದ್ದವರು ಹೃದಯಾಘಾತದಿಂದ (Heart Attack) ಮೃತಪಟ್ಟಿರುವುದನ್ನು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಜಿಮ್​ನಲ್ಲಿ ವರ್ಕೌಟ್​ ಮಾಡುವುದಕ್ಕೂ ಹೃದಯಾಘಾತಕ್ಕೂ ಸಂಬಂಧ ಇದೆ ಎಂಬ ಭಾವನೆ ಅನೇಕರಲ್ಲಿ ಮೂಡಿದೆ. ಹಾಗಾಗಿ ಅಪ್ಪು ನಿಧನದ ಬಳಿಕ ಜಿಮ್​ಗೆ ಬರುವವರ ಸಂಖ್ಯೆಗಳಲ್ಲಿ ಗಣನೀಯ ಇಳಿಕೆ ಆಗಿದೆ. ಜಿಮ್ (Gym) ಮಾಡುವ ಯುವಕರಿಗೆ ಅಪ್ಪು ನಿಧನದ ಸುದ್ದಿ ಬಿಗ್ ಶಾಕ್ ಆಗಿದೆ. ಫಿಟ್ನೆಸ್ ಪ್ರಿಯರು ಕಳೆದ 2 ವಾರದಿಂದ ಜಿಮ್ ಕಡೆ ಮುಖ ಮಾಡುತ್ತಿಲ್ಲ. ಇದು ಜಿಮ್​ ಮಾಲೀಕರ ಆತಂಕಕ್ಕೆ ಕಾರಣ ಆಗಿದೆ.

ಪುನೀತ್​ ರಾಜ್​ಕುಮಾರ್​ ನಿಧನ ಬಳಿಕ ಎರಡು ದಿನ ಹಲವೆಡೆ ಜಿಮ್ ಬಂದ್ ಮಾಡಿ ಸಂತಾಪ ಸೂಚಿಸಲಾಗಿತ್ತು. ಇದೀಗ ಜಿಮ್​ ಓಪನ್ ಆಗಿದ್ದರೂ ಕೂಡ ಜನರು ವರ್ಕೌಟ್​ ಮಾಡಲು ಹೋಗುತ್ತಿಲ್ಲ. ರಾಜ್ಯಾದ್ಯಂತ ಜಿಮ್ ಬಗ್ಗೆ ಯುವಕರ ನಿರ್ಲಕ್ಷ್ಯದ ಮಾತು ಕೇಳಿಬರುತ್ತಿದೆ. ಪೋಷಕರು ಕೂಡ ಜಿಮ್​ಗೆ ಹೋಗದಂತೆ ಮಕ್ಕಳನ್ನು ತಡೆಯುತ್ತಿದ್ದಾರೆ. ಔಟ್ ಡೋರ್ ಫಿಟ್ನೆಸ್​ಗೆ ಆದ್ಯತೆ ಕೊಡವಂತೆ ಸಲಹೆ ನೀಡುತ್ತಿದ್ದಾರೆ.

ರಾಜ್ಯದ್ಯಂತ ಶೇ.50ರಷ್ಟು ಮಂದಿ ಜಿಮ್‌ ಹೋಗಲು ಒಲವು ತೋರುತ್ತಿಲ್ಲ. ಬೆಂಗಳೂರಿನಲ್ಲಿ ಶೇ.60ರಷ್ಟು ಜನರು ಜಿಮ್​ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪುನೀತ್​ ಅವರ ಹೃದಯಾಘಾತಕ್ಕೆ ಜಿಮ್ ವರ್ಕೌಟ್ ಕಾರಣ ಎಂಬ ಭಾವನೆ ಹಲವರಲ್ಲಿ ಬೇರೂರಿದೆ. ‘ಪ್ರತಿ ದಿನ 130 ಯುವಕ-ಯುವತಿಯರು ಜಿಮ್​ಗೆ ಬರುತಿದ್ದರು. ಆದರೆ ಈಗ 50ರಿಂದ 70 ಜನರು ಮಾತ್ರ ಬರುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದ ಈಗಷ್ಟೇ ಹೊರ ಬರುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ಮತ್ತೆ ತೊಂದರೆಯಾಗುತ್ತಿದೆ’ ಎಂದಿದ್ದಾರೆ ಕತ್ತರಿಗುಪ್ಪೆಯ ಜಿಮ್ ಟ್ರೈನರ್ ಸುರೇಶ್.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಜಿಮ್​ ಪರಿಸ್ಥಿತಿ ಇದೇ ರೀತಿ ಆಗಿದೆ. ಕಲಬುರಗಿ ನಗರದಲ್ಲಿ ಪ್ರತಿ ದಿನ ತುಂಬಿರುತ್ತಿದ್ದ ಜಿಮ್​ಗಳು ಇದೀಗ ಖಾಲಿ ಹೊಡೆಯುತ್ತಿವೆ. ಒಂದು ಶಿಫ್ಟ್​ನಲ್ಲಿ ನಲವತ್ತು ಜನರು ಮೊದಲು ಬರುತ್ತಿದ್ದರು. ಇದೀಗ ಹತ್ತು ಜನ ಬರುತ್ತಿದ್ದಾರೆ. ಹೀಗಾಗಿ ಬಾಡಿಗೆ ಕಟ್ಟೋದು ಹೇಗೆ ಅನ್ನೋ ಚಿಂತೆ ಜಿಮ್ ಮಾಲೀಕರನ್ನು ಕಾಡುತ್ತಿದೆ.

ಸರಿಯಾದ ಕ್ರಮದಲ್ಲಿ ವರ್ಕೌಟ್​ ಮಾಡಿದರೆ ಯಾವುದೇ ತೊಂದರೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ಜಿಮ್​​ಗೆ ತೆರಳುವ ಮುನ್ನ ಹೃದಯಕ್ಕೆ ಸಂಬಂಧಿಸಿದ ಒಂದಷ್ಟು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ವೈದ್ಯರಿಂದ ಕೇಳಿಬರುತ್ತದೆ.

ಇದನ್ನೂ ಓದಿ

‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

ಸಕ್ರೆಬೈಲು ಆನೆ ಮರಿಗೆ ಪುನೀತ್​ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ

Published On - 9:59 am, Thu, 11 November 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ