AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹ್ಯಾಪಿ ಆಗಿದೆ..’ ಎಂದು ಕನ್ನಡ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು; ಕಡುಕಷ್ಟದಲ್ಲೂ ಆಲ್​ ಓಕೆ

ಕಷ್ಟದ ಸಮಯದಲ್ಲಿ ಬೇಸರ ಮಾಡಿಕೊಂಡರೆ ಅದರಿಂದ ಏನೂ ಉಪಯೋಗ ಇಲ್ಲ. ಎಲ್ಲರಿಗೂ ಒಳ್ಳೆಯ ಕಾಲ ಬಂದೇಬರುತ್ತದೆ ಎನ್ನುವ ಸಂದೇಶವನ್ನು ಸಿಂಪಲ್​ ಸಾಹಿತ್ಯದ ಮೂಲಕ ‘ಹ್ಯಾಪಿ ಆಗಿದೆ..’ ಹಾಡು ವಿವರಿಸುತ್ತದೆ.

‘ಹ್ಯಾಪಿ ಆಗಿದೆ..’ ಎಂದು ಕನ್ನಡ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು; ಕಡುಕಷ್ಟದಲ್ಲೂ ಆಲ್​ ಓಕೆ
ಗಾಯಕ ಆಲ್​ ಓಕೆ - ಹ್ಯಾಪಿ ಆಗಿದೆ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು
ಮದನ್​ ಕುಮಾರ್​
|

Updated on: May 24, 2021 | 11:25 AM

Share

ಕೊರೊನಾ ವೈರಸ್​ ಎರಡನೇ ಅಲೆಯ ಅಬ್ಬರಕ್ಕೆ ದೇಶದ ಜನರು ತತ್ತರಿಸಿದ್ದಾರೆ. ಸೂಕ್ತ ವೈದ್ಯಕೀಯ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗದ ಕಾರಣ ಅನೇಕರು ಅಸುನೀಗಿದ್ದಾರೆ. ಹಾಗಾಗಿ ಕೊರೊನಾ ಪಾಸಿಟಿವ್​ ಎಂಬ ಪದವೇ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಒಮ್ಮೆ ಕೊವಿಡ್​ ಸೋಂಕು ತಗುಲಿದರೆ ಆ ವ್ಯಕ್ತಿಯ ಧೈರ್ಯ ಕುಸಿಯುವಂತಹ ವಾತಾವರಣ ನಿರ್ಮಾಣ ಆಗಿದೆ. ಇಂಥ ಸಂದರ್ಭದಲ್ಲಿ ಸೋಂಕಿತರ ಮನೋಬಲ ಹೆಚ್ಚಿಸುವ ಕೆಲಸ ಆಗಬೇಕಿರುವುದು ಅಗತ್ಯ. ಅದಕ್ಕಾಗಿ ಕೆಲವು ವೈದ್ಯಕೀಯ ಸಿಬ್ಬಂದಿ ಹಾಡುಗಳ ಮೊರೆಹೋಗುತ್ತಿದ್ದಾರೆ. ಇತ್ತೀಚೆಗೆ ಕನ್ನಡದ ಜನಪ್ರಿಯ ‘ಹ್ಯಾಪಿ ಆಗಿದೆ..’ ಹಾಡಿನ ಮೂಲಕ ಸೋಂಕಿತರ ಮೊಗದಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಕನ್ನಡದ ಖ್ಯಾತ ಗಾಯಕ, ಸಂಗೀತ ಸಂಯೋಜಕ ಆಲ್​ ಓಕೆ (ಅಲೋಕ್​ ಬಾಬು) ಅವರ ‘ಹ್ಯಾಪಿ ಆಗಿದೆ..’ ಹಾಡನ್ನು ಪ್ಲೇ ಮಾಡುವ ಮೂಲಕ ಕೆಲವು ಆಸ್ಪತ್ರೆಯಲ್ಲಿ ಕೊವಿಡ್​ ಸೋಂಕಿತರನ್ನು ರಂಜಿಸುವ ಪ್ರಯತ್ನ ಮಾಡಲಾಗಿದೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದಹಾಗೆ, ಈ ಹಾಡಿನ ಸಾಹಿತ್ಯವು ಎಂಥವರಿಗಾದರೂ ಹೊಸ ಚೈತನ್ಯ ಮೂಡಿಸುವಂತಿದೆ. ಜೀವನದಲ್ಲಿ ನಾವು ಯಾವುದೇ ಕಷ್ಟದ ಸಂದರ್ಭದಲ್ಲಿ ಇದ್ದರೂ ಕೂಡ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಸುಮ್ಮನೇ ಬೇಸರ ಮಾಡಿಕೊಂಡರೆ ಅದರಿಂದ ಏನೂ ಉಪಯೋಗ ಇಲ್ಲ. ಎಲ್ಲರಿಗೂ ಒಳ್ಳೆಯ ಕಾಲ ಬಂದೇಬರುತ್ತದೆ ಎನ್ನುವ ಸಂದೇಶವನ್ನು ಸಿಂಪಲ್​ ಸಾಹಿತ್ಯದ ಮೂಲಕ ‘ಹ್ಯಾಪಿ ಆಗಿದೆ..’ ಹಾಡು ವಿವರಿಸುತ್ತದೆ. ತಮ್ಮ ಹಾಡಿನ ಮೂಲಕ ಕೊವಿಡ್ ರೋಗಿಗಳ ಮನದಲ್ಲಿ ಚೈತನ್ಯ ಮೂಡುವಂತಾಗಿರುವುದಕ್ಕೆ ಅಲೋಕ್​ ಸಂತಸ ವ್ಯಕ್ತಪಡಿಸಿದ್ದಾರೆ.

‘ನನಗೆ ಹಾಡಿನ ವೀವ್ಸ್​ ಮತ್ತು ಲೈಕ್ಸ್​ ಸಂಖ್ಯೆ ಮುಖ್ಯವಾಗುವುದಿಲ್ಲ. ಜನರನ್ನು ಕೆಟ್ಟ ಘಟನೆಯಿಂದ ಹೊರಬರುವಂತೆ ಮಾಡಿ, ಅವರೊಳಗೆ ಪಾಸಿಟಿವಿಟಿ ತುಂಬುವಲ್ಲಿ ನನ್ನ ಹಾಡು ಯಶಸ್ವಿಯಾದರೆ ಅದರಿಂದ ನನಗೆ ಇನ್ನಷ್ಟು ಸ್ಫೂರ್ತಿ ಸಿಗುತ್ತದೆ. ಇದರಿಂದ ತೃಪ್ತಿ, ಖುಷಿ ಸಿಗುತ್ತದೆ. ಇದೇ ನನ್ನ ಪ್ರಶಸ್ತಿ. ವೈದ್ಯರು, ಕೊರೊನಾ ವಾರಿಯರ್​ಗಳು ಹಾಗೂ ಫ್ರಂಟ್​ಲೈನ್​ನಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೆ ಹ್ಯಾಟ್ಸಾಫ್​. ಈ ವಿಡಿಯೋ ನೋಡಿ ನಾನು ಭಾವುಕನಾದೆ’ ಎಂದು ಅಲೋಕ್​ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

(ಯೂಟ್ಯೂಬ್​ನಲ್ಲಿ ಹ್ಯಾಪಿ ಆಗಿದೆ ಸಾಂಗ್​ )

ಇದನ್ನೂ ಓದಿ:

ಪಬ್​ಗಳಲ್ಲಿ ಕನ್ನಡ ಹಾಡು ಹಾಕಿ ಅಂದಿದ್ದಕ್ಕೆ ಸಪೋರ್ಟ್​ ಮಾಡಿದ್ದು ಎಷ್ಟು ಸಾವಿರ ಜನ? ಪಕ್ಕಾ ಲೆಕ್ಕ ಇಲ್ಲಿದೆ!

ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ

Follow Us
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ಕಬ್ಬನ್ ಪಾರ್ಕಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಜನರು
ಕಬ್ಬನ್ ಪಾರ್ಕಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಜನರು
ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ?
ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ?
ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ!
ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ!