AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್​ಕುಮಾರ್ ಆಶೀರ್ವಾದ ನಾನೇ ಧನ್ಯ’; ಅಣ್ಣಾವ್ರ ಬಗ್ಗೆ ಅಮಿತಾಭ್ ಬಚ್ಚನ್ ಮೆಚ್ಚುಗೆಯ ಮಾತು

ವರನಟ ಡಾ. ರಾಜ್‌ಕುಮಾರ್ ಸೃಷ್ಟಿಸಿದ ದೊಡ್ಡ ಲೆಗಸಿ ಅಮಿತಾಭ್ ಬಚ್ಚನ್ ಅವರಿಂದ ಸ್ಮರಿಸಲ್ಪಟ್ಟಿದೆ. 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ಮಾತನಾಡುತ್ತಾ, ಅಮಿತಾಭ್ ರಾಜ್‌ಕುಮಾರ್ ಅವರ ಸರಳತೆ ಮತ್ತು ವ್ಯಕ್ತಿತ್ವವನ್ನು ಕೊಂಡಾಡಿದರು. ರಾಜಕುಮಾರ್ ಅವರ ಆಶೀರ್ವಾದ ಪಡೆದ ನಾವೇ ಧನ್ಯ ಎಂದು ಅಮಿತಾಭ್ ಹೇಳಿದರು.

‘ರಾಜ್​ಕುಮಾರ್ ಆಶೀರ್ವಾದ ನಾನೇ ಧನ್ಯ’; ಅಣ್ಣಾವ್ರ ಬಗ್ಗೆ ಅಮಿತಾಭ್ ಬಚ್ಚನ್ ಮೆಚ್ಚುಗೆಯ ಮಾತು
ಅಮಿತಾಭ್-ರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on:Oct 23, 2025 | 11:55 AM

Share

ವರನಟ ಡಾ.ರಾಜ್​ಕುಮಾರ್ ಸೃಷ್ಟಿ ಮಾಡಿ ಹೋದ ಲೆಗಸಿ ತುಂಬಾನೇ ದೊಡ್ಡದು. ಅವರ ನಟನೆಗೆ ಮತ್ತೊಬ್ಬರು ಸರಿಸಾಟಿಯಾಗಿ ನಿಲ್ಲಲು ಸಾಧ್ಯವೇ ಇಲ್ಲ. ಪರಭಾಷಾ ನಟರು ಕೂಡ ರಾಜ್​ಕುಮಾರ್ ನಟನೆ ಹಾಗೂ ಅವರ ವ್ಯಕ್ತಿತ್ವ ಕೊಂಡಾಡಿದ್ದು ಇದೆ. ಅವರು ನಮ್ಮನ್ನು ಅಗಲಿ ಎರಡು ದಶಕ ಕಳೆಯುತ್ತಾ ಬಂದರೂ ಅವರನ್ನು ಈಗಲೂ ನೆನಪಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಅಮಿತಾಭ್ ಬಚ್ಚನ್ (Amitabh Bachchan) ಅವರು ರಾಜ್​ಕುಮಾರ್ ಮಾಡಿದ ಸಾಧನೆ ನೆನೆದರು. ಅವರ ಆಶೀರ್ವಾದ ಪಡೆದ ನಾನೇ ಧನ್ಯ ಎಂದರು.

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ತೆರಳಿದರು. ಅಮಿತಾಭ್ ಬಚ್ಚನ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಅವರು ರಿಷಬ್ ಜೊತೆ ಮಾತನಾಡುವಾಗ ರಾಜ್​ಕುಮಾರ್ ಅವರನ್ನು ಹೊಗಳಿದ್ದಾರೆ. ರಾಜ್​ಕುಮಾರ್ ಮಾಡಿದ ಸಾಧನೆಯನ್ನು ನೆನದು ಹೆಮ್ಮೆ ವ್ಯಕ್ತಪಡಿಸಿದರು.

ಇದನ್ನೂ ಓದಿ
Image
ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ
Image
‘ಕಾಂತಾರ: ಚಾಪ್ಟರ್ 1’ ಅಬ್ಬರ; ಸಾವಿರದ ಕ್ಲಬ್ ಸೇರಲು ಇನ್ನೆಷ್ಟು ಕೋಟಿ ಬೇಕು
Image
ದೀಪಾವಳಿಗೆ ಬಂಪರ್ ಲಾಟರಿ; ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಕಾಂತಾರ’
Image
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

‘ಕರ್ನಾಟಕದಲ್ಲಿ ರಾಜ್​ಕುಮಾರ್ ದೇವರು ಇದ್ದರಂತೆ. ಅವರು ಸಿಂಪಲ್ ವ್ಯಕ್ತಿ. ಸಾಧಾರಣ ಬಟ್ಟೆ ಧರಿಸುತ್ತಿದ್ದರು. ಸಾಧಾರಣ ಮನೆಯಲ್ಲಿ ವಾಸವಾಗುತ್ತಿದ್ದರು. ಅವರ ಜೀವನ ಶೈಲಿ ನೋಡಿದರು ಅವರು ಇಷ್ಟು ದೊಡ್ಡ ನಟ, ಇಷ್ಟೆಲ್ಲ ಹೆಸರು ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ನಾವು ಬೆಂಗಳೂರಿಗೆ ಹೋದಾಗ ಅವರ ಆಶೀರ್ವಾದ ಪಡೆಯುತ್ತಿದ್ದೆವು. ರಾಜ್​ಕುಮಾರ್ ಅಂತಹ ನಟನರಿಂದ ಆಶೀರ್ವಾದ ಪಡೆದ ನಾವೇ ಧನ್ಯ’ ಎಂದು ಅಮಿತಾಭ್ ಹೇಳಿದರು.

ರಾಜ್​ಕುಮಾರ್ ಬಗ್ಗೆ ಅಮಿತಾಭ್ ಮಾತು

ಅಮಿತಾಭ್ ಅವರ ಮಾತನ್ನು ಕೇಳಿ ಅನೇಕರಿಗೆ ಖುಷಿ ಆಗಿದೆ. ಅಮಿತಾಭ್ ಅಂತಹ ಮೇರುನಟರು ರಾಜ್​ಕುಮಾರ್ ಬಗ್ಗೆ ಇಟ್ಟ ಗೌರವ ನೋಡಿ ಅನೇಕರ ಖುಷಿಪಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಅವರು ಕೆಲವು ಬಾರಿ ರಾಜ್​ಕುಮಾರ್​ನ ಭೇಟಿ ಮಾಡಿದ್ದಾರೆ. ರಾಜ್​ಕುಮಾರ್ ಮೇಲೆ ಇರುವಷ್ಟೇ ಗೌರವ ಅವರ ಕುಟುಂಬದ ಮೇಲೂ ಇದೆ.

ಇದನ್ನೂ ಓದಿ: ಕೌನ್ ಬನೇಗಾ ಕರೋಡ್ಪತಿಯಲ್ಲಿ ರಿಷಬ್ ಶೆಟ್ಟಿ ಗೆದ್ದ ಹಣ ಎಷ್ಟು? ಸಿಕ್ಕ ಉಡುಗೊರೆಗಳೇನು?

ಕೆಬಿಸಿಯಲ್ಲಿ ರಿಷಬ್

ರಿಷಬ್ ಶೆಟ್ಟಿ ಅವರು ಕೌನ್ ಬನೇಗಾ ಕರೋಡ್ಪತಿಯಲ್ಲಿ ಬರೋಬ್ಬರಿ 12.5 ಲಕ್ಷ ರೂಪಾಯಿ ಗೆದ್ದಿದ್ದಾರೆ. ರಿಷಬ್ ಅವರು ತಮ್ಮ ‘ರಿಷಬ್ ಫೌಂಡೇಷನ್’ ಮೂಲಕ ಈ ಹಣವನ್ನು ದೈವಾರಾಧಕರು ಹಾಗೂ ಸರ್ಕಾರಿ ಶಾಲಾ ಮಕ್ಕಳ ಏಳ್ಗೆಗೆ ಈ ಹಣ ಬಳಕೆ ಮಾಡೋದಾಗಿ ಹೇಳಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Thu, 23 October 25