ಬೆಳ್ಳುಳ್ಳಿ ಕಬಾಬ್ ಚಂದ್ರುಗೆ ಚಿತ್ರರಂಗದ ನಂಟು ಬಹಳ ಹಳೆಯದ್ದು

Bellulli Kabab: ಬೆಳ್ಳುಳ್ಳಿ ಕಬಾಬ್ ರೆಸಿಪಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ಹೋಟೆಲ್ ಉದ್ಯಮಿ ಚಂದ್ರುಗೆ ಚಿತ್ರರಂಗದೊಟ್ಟಿಗೆ ಬಹಳ ಹಳೆಯ ನಂಟಿದೆ.

ಬೆಳ್ಳುಳ್ಳಿ ಕಬಾಬ್ ಚಂದ್ರುಗೆ ಚಿತ್ರರಂಗದ ನಂಟು ಬಹಳ ಹಳೆಯದ್ದು
ಬೆಳ್ಳುಳ್ಳಿ ಕಬಾಬ್
Follow us
|

Updated on: Feb 10, 2024 | 9:49 PM

ಬೆಳ್ಳುಳ್ಳಿ ಕಬಾಬ್ (Bellulli Kabab) ಮೂಲಕ ರಾಜ್ಯದ ಜನರಿಗೆ ಚಿರಪರಿಚಿತರಾಗಿದ್ದಾರೆ ಹೊಟೆಲ್ ಉದ್ಯಮಿ ಚಂದ್ರು. ಅವರ ಅಡುಗೆ ಮಾಡುವ ಶೈಲಿ, ಮಾತಿನ ಶೈಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅವರು ಮಾತ್ರವೇ ಅಲ್ಲದೆ ಅವರ ಅಸಿಸ್ಟೆಂಟ್ ರಾಹುಲ್ಲ ಸಹ ಸಖತ್ ಜನಪ್ರಿಯತೆ ಗಳಿಸಿದ್ದಾನೆ. ಹೋಟೆಲ್ ಉದ್ಯಮಿಯಾಗಿರುವ ಚಂದ್ರು, ರಸ್ತೆ ಪಕ್ಕ ಹೋಟೆಲ್ ತಳ್ಳುಗಾಡಿಯಿಂದ ಈ ಹೋಟೆಲ್ ಕೆಲಸ ಆರಂಭಿಸಿದವರು. ಆದರೆ ಚಂದ್ರು ರಸ್ತೆ ಬದಿ ತಳ್ಳುಬಂಡಿ ಪ್ರಾರಂಭ ಮಾಡುವ ಮುಂಚಿನಿಂದಲೂ ಅವರಿಗೆ ಚಿತ್ರರಂಗದೊಡನೆ ನಂಟಿತ್ತು. ಹೋಟೆಲ್ ಉದ್ಯಮಿ ಆದ ಬಳಿಕವೂ ಆ ನಂಟು ಮುಂದುವರೆಯಿತು.

ಚಂದ್ರು ಅವರು ಖ್ಯಾತ ನಟಿ ಮಾಲಾಶ್ರೀ ಅವರಿಗೆ ಮೇಕಪ್​ಮ್ಯಾನ್ ಆಗಿದ್ದರಂತೆ. ಮಾಲಾಶ್ರೀ ಅವರು ಪೀಕ್​ನಲ್ಲಿದ್ದಾಗ ಅವರಿಗೆ ಮೇಕಪ್​ ಮಾಡುತ್ತಿದ್ದಿದ್ದು ಚಂದ್ರು. ಮಾಲಾಶ್ರೀ ಅವರೊಟ್ಟಿಗೆ ಬರೋಬ್ಬರಿ 72 ಸಿನಿಮಾಗಳಲ್ಲಿ ಚಂದ್ರು ಅವರ ಮೇಕಪ್​ಮ್ಯಾನ್ ಆಗಿ ಕೆಲಸ ಮಾಡಿದ್ದರಂತೆ. ಅದಾದ ಬಳಿಕ ಒಮ್ಮೆ ಮಾಲಾಶ್ರೀ ಅವರು ಆರೋಗ್ಯ ಸುಧಾರಣೆಗಾಗಿ ಜಿಂದಾಲ್​ಗೆ ಸೇರಿದಾಗ ಚಂದ್ರು ಕೆಲಸ ಬಿಟ್ಟು ರಸ್ತೆ ಬದಿ ಹೋಟೆಲ್ ಆರಂಭ ಮಾಡಿದರಂತೆ. ಅಂದಹಾಗೆ ಚಂದ್ರು ಹೋಟೆಲ್ ಉದ್ಯಮಿ ಆಗಲು ಡಾ ರಾಜ್​ಕುಮಾರ್ ಅವರು ಸಹ ಕಾರಣ.

ಇದನ್ನೂ ಓದಿ:ಸಂಜೆಯ ತಿಂಡಿಗೆ ಸೋಯಾ ಕಬಾಬ್ ಸೂಪರ್, ಇದು ಆರೋಗ್ಯಕ್ಕೂ ಉತ್ತಮ

ಕೆಸಿಎನ್ ಅವರ ಮನೆಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತಂತೆ. ಆಗ ಚಂದ್ರು ಅವರು ಶೂಟಿಂಗ್​ನಲ್ಲಿದ್ದ ಕೆಲವರನ್ನು ತಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರಂತೆ. ಊಟ ಮುಗಿಸಿಕೊಂಡು ವಾಪಸ್ ಬಂದ ಮೇಲೆ ರಾಜ್​ಕುಮಾರ್ ಅವರು ಎಲ್ಲ ಎಲ್ಲಿ ಹೋಗಿದ್ದಿರಿ ಎಂದು ಕೇಳಿದ್ದಾರೆ. ಆಗ ಅಲ್ಲಿದ್ದವರು, ಚಂದ್ರು ತಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದ ಬಹಳ ಚೆನ್ನಾಗಿ ಅಡುಗೆ ಮಾಡಿದ್ದ ಎಂದರಂತೆ. ಆಗ ಅಣ್ಣಾವ್ರು, ಬಾಲಣ್ಣನಿಗೆ ಬೋಟಿ ಅಂದರೆ ಬಹಳ ಇಷ್ಟ ಮಾಡಿಕೊಂಡು ಬಾ ಅಂದರಂತೆ. ಅದರಂತೆ ಚಂದ್ರು ಬೋಟಿ ಮಾಡಿಕೊಂಡು ಹೋಗಿದ್ದರಂತೆ ಅದನ್ನು ಸವಿದ ಬಾಲಣ್ಣ ಹಾಗೂ ಅಣ್ಣಾವ್ರು ಇಬ್ಬರೂ ಬಹಳ ಮೆಚ್ಚಿದರಂತೆ. ಆಗಲೇ ಅಂತೆ ಚಂದ್ರುಗೆ ಅನಿಸಿದ್ದು ನಾನು ಚೆನ್ನಾಗಿ ಅಡುಗೆ ಮಾಡಬಲ್ಲೆ ಎಂದು.

ಚಂದ್ರು ಅವರಿಗೆ ನಲವತ್ತು ವರ್ಷಗಳಿಂದಲೂ ದೊಡ್ಮನೆಯೊಟ್ಟಿಗೆ ನಂಟು ಇದೆ. ಪುನೀತ್ ರಾಜ್​ಕುಮಾರ್ ಅವರೊಟ್ಟಿಗೆ ಆಪ್ತ ಬಂಧವೇ ಚಂದ್ರುಗೆ ಇತ್ತು. ಪುನೀತ್ ಅವರು ಆಗಾಗ್ಗೆ ಚಂದ್ರುಗೆ ಕಾಲ್ ಮಾಡಿ ರೆಸಿಪಿಗಳನ್ನು ಕೇಳುತ್ತಿದ್ದರು. ಚಂದ್ರು, ಅಪ್ಪು ಅವರಿಗೆ ತಮ್ಮ ಅಡುಗೆ ವಿಡಿಯೋಗಳನ್ನು ಕಳಿಸುತ್ತಿದ್ದರಂತೆ. ಪುನೀತ್ ಅವರು ಕಾಶ್ಮೀರದಿಂದ ಚಂದ್ರುಗೆ ಕರೆ ಮಾಡಿ ರೆಸಿಪಿ ಕೇಳಿ ಪಡೆದಿದ್ದ ಆಡಿಯೋ ಒಂದು ಸಹ ಈ ಹಿಂದೆ ವೈರಲ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ