Puneeth Rajkumar: ಕನ್ನಡ ಬಾವುಟದಲ್ಲಿ ಪುನೀತ್​ ಫೋಟೋ ಹಾಕಿದ್ದಕ್ಕೆ ಕಿರಿಕ್​ ಮಾಡಿದ್ದ ಮಹಿಳೆಯಿಂದ ಕ್ಷಮಾಪಣೆ

Puneeth Rajkumar Fans: ‘ಅಭಿಮಾನಿಗಳು ತಪ್ಪಾಗಿ ಭಾವಿಸಿದ್ದರೆ ಮತ್ತು ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ಮಹಿಳೆಯು ಕ್ಷಮೆ ಕೇಳಿದ್ದಾರೆ. ಪುನೀತ್ ರಾಜ್​ಕುಮಾರ್​ ಫೋಟೋಗೆ ನಮಿಸಿದ್ದಾರೆ.

Puneeth Rajkumar: ಕನ್ನಡ ಬಾವುಟದಲ್ಲಿ ಪುನೀತ್​ ಫೋಟೋ ಹಾಕಿದ್ದಕ್ಕೆ ಕಿರಿಕ್​ ಮಾಡಿದ್ದ ಮಹಿಳೆಯಿಂದ ಕ್ಷಮಾಪಣೆ
ಅಪ್ಪು ಫೋಟೋಗೆ ಕೈಮುಗಿದು ಕ್ಷಮೆ ಕೇಳಿದ ಮಹಿಳೆ
Follow us
| Updated By: ಮದನ್​ ಕುಮಾರ್​

Updated on:Nov 06, 2022 | 11:16 PM

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕರ್ನಾಟಕದ ಬಾವುಟದಲ್ಲಿ (Karnataka Flag) ಪುನೀತ್​ ಫೋಟೋ ಹಾಕಿದ್ದು ಸರಿಯಲ್ಲ ಎಂದು ಅವರು ಕೂಗಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಿಳೆಯು ಇಂದು (ನ.6) ಕ್ಷಮಾಪಣೆ ಕೇಳಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ (Puneeth Rajkumar Fans) ಸಮ್ಮುಖದಲ್ಲಿ ಅವರು ಅಪ್ಪು ಫೋಟೋಗೆ ಕೈ ಮುಗಿದು ‘ನನ್ನಿಂದ ತಪ್ಪಾಗಿದೆ’ ಎಂದು ಕ್ಷಮೆ ಕೇಳಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ಮಹಿಳೆ ಹೇಳಿದ್ದೇನು?

‘ನಾನು ಕನ್ನಡಿಗಳು. ನನಗೂ ಕರ್ನಾಟಕದ ಬಗ್ಗೆ ಹೆಮ್ಮೆ ಇದೆ. ನಾವು ಕನ್ನಡದ ಅಭಿವೃದ್ಧಿ ಕೈಗೂಡಿದ್ದೇವೆ. ನಾನು ಡಾ. ರಾಜ್​ಕುಮಾರ್​ ಅಭಿಮಾನಿ. ಪುನೀತ್​ ರಾಜ್​ಕುಮಾರ್​ ಬಗ್ಗೆ ನಾನು ತಪ್ಪು ಅಭಿಪ್ರಾಯ ಹೇಳಿಲ್ಲ. ಕನ್ನಡದ ಬಾವುಟ ವ್ಯಕ್ತಿಗತ ಆಗಬಾರದು ಅಂತ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಆದರೆ ಬಾವುಟದಲ್ಲಿ ಪುನೀತ್​ ಭಾವಚಿತ್ರ ಇದ್ದಿದ್ದಕ್ಕೆ ಅವರ ಹೆಸರು ಬಂತು. ಅಭಿಮಾನಿಗಳು ತಪ್ಪಾಗಿ ಭಾವಿಸಿದ್ದರೆ ಅಥವಾ ಯಾರಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಇದೇ ಎನರ್ಜಿಯನ್ನು ಕರ್ನಾಟಕದ ಅಭಿವೃದ್ಧಿಗೆ ತೊಡಗಿಸಿ ಎಂಬುದು ನಮ್ಮ ಆಶಯ’ ಎಂದು ಆ ಮಹಿಳೆಯು ಎಲ್ಲರ ಎದುರು ಓದಿ ಹೇಳಿದ್ದಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ವಿವಾದ ಆಗಿದ್ದು ಹೇಗೆ?

ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ಇರುವ ಕನ್ನಡದ ಬಾವುಟ ಹಲವು ಕಡೆಗಳಲ್ಲಿ ಹಾರಾಡುತ್ತಿದೆ. ಆ ಮೂಲಕ ಅಭಿಮಾನಿಗಳು ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಆದರೆ ಇದರ ವಿರುದ್ಧ ನವೆಂಬರ್​ 3ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಹಿಳೆ ಕಿರಿಕ್​ ಮಾಡಿದ್ದರು. ‘ನಾವು ಕೂಡ ಕನ್ನಡವರೇ. ನಮ್ಮ ಫೋಟೋ ಬಾವುಟದಲ್ಲಿ ಯಾಕೆ ಇಲ್ಲ? ಪುನೀತ್​ ಅಂದ್ರೆ ಕನ್ನಡಾಂಬೆ ಅಲ್ಲ. ಪುನೀತ್​ ಚಿತ್ರ ಬಾವುಟದಲ್ಲಿ ಬರಬಾರದು’ ಎಂದು ಮಹಿಳೆಯು ಕೂಗಾಡಿದ್ದರು. ಈ ಘಟನೆಯನ್ನು ಅಪ್ಪು ಅಭಿಮಾನಿಗಳು ಖಂಡಿಸಿದ್ದರು. ಮಹಿಳೆ ಹೇಳಿದ ಮಾತುಗಳನ್ನು ಸ್ಥಳದಲ್ಲೇ ಇದ್ದ ಆಟೋ ಚಾಲಕರು ವಿರೋಧಿಸಿದ್ದರು. ಆ ಸಂದರ್ಭದ ವಿಡಿಯೋ ವೈರಲ್​ ಆಗಿತ್ತು.

ಆ ಘಟನೆ ಕುರಿತು ಅಪ್ಪು ಅಭಿಮಾನಿಯೊಬ್ಬರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದರು. ‘ಆಕೆ ಕ್ಷಮೆ ಕೇಳಬೇಕು. ಪ್ರತಿ ಮನೆಯಲ್ಲೂ ಪುನೀತ್ ರಾಜ್​ಕುಮಾರ್​ ಅವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಅಂಥವರ ಬಗ್ಗೆ ಈ ರೀತಿ ಮಾತಾಡಿದ್ದು ಸರಿಯಲ್ಲ. ಬಾವುಟದಲ್ಲಿ ಅಪ್ಪು ಫೋಟೋ ಹಾಕಿದ್ದಕ್ಕೆ ಸರ್ಕಾರವೇ ಆಕ್ಷೇಪಿಸಿಲ್ಲ. ನಿಧನರಾದ ವ್ಯಕ್ತಿ ಬಗ್ಗೆ ಈ ಮಹಿಳೆ ಈ ರೀತಿ ಮಾತನಾಡಿದ್ದು ತಪ್ಪು. ಲೈವ್​ನಲ್ಲಿ ಬಂದು ಅವರು ಕ್ಷಮೆ ಕೇಳಬೇಕು’ ಎಂದು ಪುನೀತ್​ ಅಭಿಮಾನಿ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:16 pm, Sun, 6 November 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ