AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು

Karnataka Rajyothsava 2021: ಕನ್ನಡ ಚಿತ್ರಗಳಲ್ಲಿ ಕನ್ನಡದ ಹಿರಿಮೆ ಗರಿಮೆ ಸಾರುವ, ಈ ಮಣ್ಣಿನ ಪರಂಪರೆಯನ್ನು ಬಿಂಬಿಸುವ ಅನೇಕ ಗೀತೆಗಳು ಬಂದಿವೆ. 66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂತಹ ಕೆಲವು ಗೀತೆಗಳ ಪಟ್ಟಿ ಇಲ್ಲಿದೆ.

ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು
ಡಾ.ವಿಷ್ಣುವರ್ಧನ್, ಡಾ.ರಾಜಕುಮಾರ್, ಅಂಬರೀಶ್
TV9 Web
| Updated By: Digi Tech Desk|

Updated on:Nov 01, 2021 | 9:29 AM

Share

ನವೆಂಬರ್ ತಿಂಗಳು ಬಂತೆಂದರೆ ಪ್ರತಿಯೊಬ್ಬ ಕನ್ನಡಿಗನ ಮನಸ್ಸು ಪುಳಕಿತಗೊಳ್ಳುತ್ತದೆ, ಸಂತಸದಿಂದ ಅರಳುತ್ತದೆ. ಸಂಪೂರ್ಣ ನವೆಂಬರ್ ಮಾಸವನ್ನು ಕನ್ನಡ ಮಾಸವನ್ನಾಗಿ ಆಚರಿಸುತ್ತಾ, ವಿವಿಧ ಕನ್ನಡ ಪರ ಚಟುವಟಿಕೆಗಳಲ್ಲಿ ಜನರು ತೊಡಗಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಕನ್ನಡ ಗೀತೆಗಳು ಮೊಳಗುತ್ತವೆ. ಭಾಷೆ, ನಾಡು, ನುಡಿಗೆ ಸಂಬಂಧಿಸಿದಂತೆ ಅನೇಕ ಖ್ಯಾತ ನಾಮರು ಕಾಣಿಕೆಯಾಗಿ ನೀಡಿದ  ಅದ್ಭುತವಾದ ಗೀತೆಗಳನ್ನು ಜನರು ಸ್ಮರಿಸಿಕೊಳ್ಳುತ್ತಾರೆ. ಹಾಗೆಯೇ ಕನ್ನಡ ಚಿತ್ರರಂಗದ ಪ್ರತಿಭಾಶ್ರೇಷ್ಠರು ರಚಿಸಿರುವ ಹಲವು ಕನ್ನಡ ಗೀತೆಗಳು ಜನಮಾನಸದಲ್ಲಿ ಅಚ್ಚಳಿಯದೆ ಕೂತುಬಿಟ್ಟಿವೆ. ರಾಜ್ಯೋತ್ಸವ ಸೇರಿದಂತೆ ಕನ್ನಡಿಗರ ನಿತ್ಯಜೀವನದಲ್ಲೂ ಈ ಗೀತೆಗಳು ಹಾಸುಹೊಕ್ಕಾಗಿವೆ. 66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂತಹ ಕೆಲವು ಅದ್ಭುತ ಗೀತೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

1. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು: ಡಾ.ರಾಜಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ ಈ ಹಾಡಿಗೆ ಸಂಗೀತ ಹಾಗೂ ಸಾಹಿತ್ಯ ನೀಡಿದವರು ಹಂಸಲೇಖ. ಕನ್ನಡ ನಾಡಿನ ಪ್ರೀತಿಯನ್ನು ಸಾರುವ ಈ ಗೀತೆಯನ್ನು ಹಾಡಿದವರು ಡಾ.ರಾಜ್.

2. ಜೇನಿನ ಹೊಳೆಯೋ: ‘ಚಲಿಸುವ ಮೋಡಗಳು’ ಚಿತ್ರದ ಈ ಹಾಡಿಗೆ ಸಂಗೀತ ನೀಡಿದವರು ರಾಜನ್​ ನಾಗೇಂದ್ರ. ಸಾಹಿತ್ಯ ರಚಿಸಿದವರು ಚಿ.ಉದಯಶಂಕರ್. ಮೂಲ ಗಾಯಕರು ಡಾ.ರಾಜಕುಮಾರ್ ಹಾಗೂ ಎಸ್.ಜಾನಕಿ.

3. ಕಲ್ಲಾದರೆ ನಾನು: ವಿಷ್ಣುವರ್ಧನ್ ನಟನೆಯ ‘ಸಿಂಹಾದ್ರಿಯ ಸಿಂಹ’ ಚಿತ್ರದ ಈ ಹಾಡು ಕನ್ನಡದ ಸಾರ್ವಕಾಲಿಕ ಗೀತೆಗಳಲ್ಲೊಂದು. ಎಸ್.ನಾರಾಯಣ್ ಬರೆದ ಸಾಹಿತ್ಯಕ್ಕೆ ದೇವ ಸಂಗೀತ ನೀಡಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ದನಿಯಾಗಿದ್ದಾರೆ.

4. ಕರುನಾಡ ತಾಯಿ: ಹಂಸಲೇಖ ಬರೆದ ಸಾಹಿತ್ಯಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ದನಿಯಾಗಿರುವ ಈ ಹಾಡು ರವಿಚಂದ್ರನ್ ನಟನೆಯ ‘ನಾನು ನನ್ನ ಹೆಂಡ್ತಿ’ ಚಿತ್ರದ್ದು. ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನೀಡಿದ್ದಾರೆ.

5. ಕನ್ನಡ ಮಣ್ಣನು ಮರೀಬೇಡ ಓ ಅಭಿಮಾನಿ: ಅಂಬರೀಶ್ ನಟನೆಯ ‘ಸೋಲಿಲ್ಲದ ಸರದಾರ’ ಚಿತ್ರದ ಈ ಹಾಡಿಗೆ ಸಂಗೀತ ಹಾಗೂ ಸಾಹಿಯತ್ಯ ನೀಡಿದವರು ಹಂಸಲೇಖ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಈ ಹಾಡು ಕನ್ನಡ ನಾಡಿನ ಪರಂಪರೆಯನ್ನು ನೆನಪಿಸುತ್ತಾ, ಅದನ್ನು ಗೌರವಿಸುವುದರ ಕುರಿತಾಗಿದೆ.

6. ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು: ‘ವಿಜಯನಗರ ವೀರಪುತ್ರ’ ಚಿತ್ರದ ಈ ಹಾಡಿಗೆ ಸಾಹಿತ್ಯ ನೀಡಿರುವವರು ಆರ್.ಎನ್ ಜಯಗೋಪಾಲ್ ಹಾಗೂ ಹಾಡಿದವರು ಪಿ.ಬಿ. ಶ್ರೀನಿವಾಸ್.

7. ಅವ್ವ ಕಣೋ ಕನ್ನಡ: ಪ್ರೇಮ್ ನಟನೆಯ ‘ಪಲ್ಲಕ್ಕಿ’ ಚಿತ್ರದ ಈ ಹಾಡನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

8. ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ: ಅಂಬರೀಶ್ ನಟನೆಯ ‘ತಿರುಗು ಬಾಣ’ ಚಿತ್ರದ ಈ ಹಾಡಿಗೆ ದನಿ ನೀಡಿದವರು ಎಸ್.ಪಿ.ಬಾಲಸುಬ್ರಮಣ್ಯಂ. ಆರ್.ಎನ್ ಜಯಗೋಪಾಲ್ ರಚಿಸಿದ ಸಾಹಿತ್ಯಕ್ಕೆ ಸಂಗೀತ ನೀಡಿದವರು ಸತ್ಯಂರವರು.

9. ನನ್ನ ಮಣ್ಣಿದು: ಎಸ್.ನಾರಾಯಣ್ ಸಾಹಿತ್ಯ ರಚಿಸಿರುವ ‘ವೀರ ಪರಂಪರೆ’ ಚಿತ್ರದ ಈ ಹಾಡು ಕನ್ನಡಿಗರ ನೆಚ್ಚಿನ ಗೀತೆಗಳಲ್ಲೊಂದು. ಶಂಕರ್ ಮಹದೇವನ್ ಈ ಹಾಡಿಗೆ ದನಿಯಾಗಿದ್ದಾರೆ. ಸುದೀಪ್ ಹಾಗೂ ಅಂಬರೀಷ್ ಜೋಡಿ ಈ ಚಿತ್ರದಲ್ಲಿ ಮೋಡಿ ಮಾಡಿತ್ತು.

10. ಜೀವ ಕನ್ನಡ: ‘ವೀರ ಕನ್ನಡಿಗ’ ಚಿತ್ರದ ಈ ಹಾಡಿಗೆ ಸಾಹಿತ್ಯ ರಚಿಸಿದವರು ಹಂಸಲೇಖ. ಚಕ್ರಿಯವರು ಸಂಗೀತ ನೀಡಿ ಹಾಡಿದ್ದಾರೆ. ಅವರಿಗೆ ಕೌಸಲ್ಯ ಜೊತೆಯಾಗಿದ್ದಾರೆ. ಪುನೀತ್ ರಾಜಕುಮಾರ್ ಹಾಗೂ ಅನಿತಾ ನಟಿಸಿದ್ದಾರೆ.

ಈ ಗೀತೆಗಳಲ್ಲದೇ ಇನ್ನೂ ಅನೇಕ ಗೀತೆಗಳು ಕನ್ನಡದ ಪರಂಪರೆಯನ್ನು, ಈ ಮಣ್ಣಿನ ಶ್ರೇಷ್ಠತೆಯನ್ನು ಬಹಳ ಸುಂದರವಾಗಿ ಬಿಂಬಿಸುತ್ತವೆ. ಇತ್ತೀಚಿನ ಚಿತ್ರಗಳಲ್ಲೂ ಹೊಸ ಬಗೆಯಲ್ಲಿ ಕನ್ನಡದ ಕಂಪನ್ನು ಸಾರುವ ಪ್ರಯತ್ನಗಳು ನಡೆಯುತ್ತಿವೆ. ಅಂತಹ ಪ್ರಯತ್ನಗಳನ್ನು ಕನ್ನಡಿಗರು ತುಂಬು ಹೃದಯದಿಂದ ಸ್ವಾಗತಿಸುತ್ತಲೇ ಇದ್ದಾರೆ.

ಇದನ್ನೂ ಓದಿ:

ನಟನೆಯಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ‘ಕನ್ನಡತಿ’, ಇಲ್ಲಿದೆ ರಂಜನಿ ರಾಘವನ್ ಅವರ ಮನದಾಳದ ಮಾತು

Kannada Rajyotsava: 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವರ ಇಲ್ಲಿದೆ

Published On - 8:12 am, Mon, 1 November 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ