AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿಯ ಹೆಸರನ್ನೇ ಮಗಳಿಗೆ ಇಟ್ಟ ಭಾವನಾ ರಾಮಣ್ಣ; ಅದಕ್ಕಿದೆ ವಿಶೇಷ ಕಾರಣ

ಭಾವನಾ ರಾಮಣ್ಣ ಹಾಗೂ ಭಾವನ ಬೆಳಗೆರೆ ಮಧ್ಯೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ, ಭಾವನಾ ಅವರು ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ ಇತ್ತೀಚೆಗೆ ಭಾವನಾ ಬೆಳಗೆರೆ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಪ್ರೀತಿಯಿಂದ ಮಾತನಾಡಿದ್ದಾರೆ. ಜೊತೆಗೆ ಮಗಳಿಗೆ ರುಕ್ಮಿಣಿ ಹೆಸರು ಇಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಅಜ್ಜಿಯ ಹೆಸರನ್ನೇ ಮಗಳಿಗೆ ಇಟ್ಟ ಭಾವನಾ ರಾಮಣ್ಣ; ಅದಕ್ಕಿದೆ ವಿಶೇಷ ಕಾರಣ
ಭಾವನಾ
ರಾಜೇಶ್ ದುಗ್ಗುಮನೆ
|

Updated on: Nov 29, 2025 | 10:38 AM

Share

ನಟಿ ಭಾವನಾ ರಾಮಣ್ಣ (Bhavana Ramanna) ಅವರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಅವರು ಐವಿಎಫ್ ತಂತ್ರಜ್ಞಾನದಿಂದ ತಾಯಿ ಆಗಿದ್ದಾರೆ. ಅವರಿಗೆ ಅವಳಿ ಮಕ್ಕಳು  ಜನಿಸಬೇಕಿತ್ತು. ಆದರೆ, ಒಂದು ಮಗು ಹುಟ್ಟುವ ಮೊದಲೇ ನಿಧನ ಹೊಂದಿತ್ತು. ಈಗ ಭಾವನಾ ಅವರು ಮಗಳಿಗೆ ರುಕ್ಮಿಣಿ ಎಂದು ಹೆಸರು ಇಟ್ಟಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಭಾವನಾ ರಾಮಣ್ಣ ಗೆಳತಿ ಭಾವನಾ ಬೆಳಗೆರೆ ಅವರು ವಿವರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಭಾವನಾ ರಾಮಣ್ಣ ಹಾಗೂ ಭಾವನ ಬೆಳಗೆರೆ ಮಧ್ಯೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ, ಭಾವನಾ ಅವರು ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ ಇತ್ತೀಚೆಗೆ ಭಾವನಾ ಬೆಳಗೆರೆ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಪ್ರೀತಿಯಿಂದ ಮಾತನಾಡಿದ್ದಾರೆ. ಜೊತೆಗೆ ಮಗಳಿಗೆ ರುಕ್ಮಿಣಿ ಹೆಸರು ಇಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಭಾವನಾ ರಾಮಣ್ಣಗೆ ಆಘಾತ

‘ಜನ ಯಾರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನನ್ನನ್ನು ಇಷ್ಟಪಟ್ಟವರು ನನಗೆ ಆಶೀರ್ವಾದ ಮಾಡಿದ್ದಾರೆ. ಮಗುವಿಗೆ ತಿಳುವಳಿಕೆ ಬಂದಾಗ ಮಗುವಿಗೆ ಬೋಲ್ಡ್ ಆಗಿ ಹೇಳ್ತೀನಿ. ಐವಿಎಫ್ ಬೇಬಿ ನೀನು ಎಂದು ಅವಳಿಗೆ ಕನ್ವಿನ್ಸ್ ಮಾಡ್ತೀನಿ. ಆ ಧೈರ್ಯ ನನ್ನಲ್ಲಿದೆ. ಅದು ನನ್ನ ಮಗೂನೇ. ನನ್ನ ಅರ್ಧ ರಕ್ತ ಇದೆ. ನಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಬೆಳೆಸಿದ್ದೇನೆ’ ಎಂದು ಭಾವನಾ ರಾಮಣ್ಣ ಅವರು ಭಾವನಾ ಬೆಳಗೆರೆ ಬಳಿ ಹೇಳಿದ್ದರಂತೆ. ‘ಏನು ಹೆಸರಿಡುತ್ತೀಯಾ? ಎಂದಿದ್ದಕ್ಕೆ ರುಕ್ಕಿಣಿ ಅಂದಳು. ಅದ್ಯಾಕೆ ಬೇರೆ ಹೊಸ ಹೆಸರು ಇಡಬಹುದಿತ್ತಲ್ಲಾ ಅಂದರೆ ಇಲ್ಲ, ರುಕ್ಮಿಣಿ ಅನ್ನೋದು ನನ್ನ ಅಜ್ಜಿ ಹೆಸರು. ಅವರು ತುಂಬ ರೆಬೆಲ್ ಆಗಿ, ಬೋಲ್ಡ್ ಆಗಿ ಬೆಳೆದವರು. ನಾನು ಅದೇ ಥರಾ ಅಂತ ನನ್ನನ್ನು ಗೇಲಿ ಮಾಡುತ್ತಿದ್ದರು. ಹಾಗಾಗಿ ನನ್ನ ಮಗಳೂ ಕೂಡ ಅಜ್ಜಿ ಥರ ಧೈರ್ಯವಂತೆ, ಬುದ್ಧಿವಂತೆ ಆಗಲಿ ಅಂತ ಆ ಹೆಸರು ಆಯ್ಕೆ ಮಾಡಿದ್ದಾಳಂತೆ. ಮನೆ ಕೆಲಸಕ್ಕೆ ಜನ ಇಟ್ಟುಕೊಂಡರೂ ಅವಳೇ ಮಗುವಿಗೆ ಮಸಾಜ್ ಮಾಡಿ, ಸ್ನಾನ ಮಾಡಿಸಿ ಆರೈಕೆ ಮಾಡುತ್ತಾಳೆ’ ಎಂದು ಭಾವನಾ ಬೆಳಗೆರೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ