AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ ಮನೆಯಲ್ಲಿ ಸ್ಪೆಷಲ್ ಟಾಸ್ಕ್; ಎರಡು ತಂಡಗಳ ಮಧ್ಯೆ ಗೆದ್ದವರು ಯಾರು?

ಮೊದಲು ಸ್ಪರ್ಧೆಗೆ ಇಳಿದಿದ್ದು ರಣಶಕ್ತಿ ಟೀಂನ ಸಂಗೀತಾ ಶೃಂಗೇರಿ. ಅವರ ಕಣ್ಣಿಗೆ ಪಟ್ಟಿಕಟ್ಟಿದ್ದು ವಿನಯ್. ಸಂಗೀತಾಗೆ ಮಾರ್ಗದರ್ಶನ ನೀಡಿದ್ದು ತನಿಷಾ. ಸಂಗೀತಾ ಬಾಲ ಬಿಡಿಸಿದರು. ಆ ಬಳಿಕ ಮಾಣಿಕ್ಯ ತಂಡದಿಂದ ನಮ್ರತಾ ಅಖಾಡಕ್ಕೆ ಇಳಿದರು. ಅವರು ಕೂಡ ಕಷ್ಟಪಟ್ಟು ಬಾಲ ಬಿಡಿಸಿದರು.

‘ಬಿಗ್ ಬಾಸ್’ ಮನೆಯಲ್ಲಿ ಸ್ಪೆಷಲ್ ಟಾಸ್ಕ್; ಎರಡು ತಂಡಗಳ ಮಧ್ಯೆ ಗೆದ್ದವರು ಯಾರು?
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Oct 22, 2023 | 1:30 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಟಾಸ್ಕ್ ನೀಡಲಾಗುತ್ತದೆ. ಪ್ರತಿ ಟಾಸ್ಕ್​ಗಳೂ ವಿಶೇಷವಾಗಿರುತ್ತವೆ. ಬಿಗ್ ಬಾಸ್ ಮನೆಯಲ್ಲಿ ರಣಶಕ್ತಿ ಮತ್ತು ಮಾಣಿಕ್ಯ ಹೆಸರಿನ ತಂಡಗಳಿವೆ. ಇಬ್ಬರಿಗೂ ಒಂದು ಸ್ಪೆಷಲ್ ಟಾಸ್ಕ್ ನೀಡಲಾಗಿತ್ತು. ಬಿಗ್‌ಬಾಸ್‌ ಹಾಗೂ ಜಿಯೋ ಸಿನಿಮಾ ಕಡೆಯಿಂದ ಈ ಟಾಸ್ಕ್‌ ಕೊಡಲಾಗಿತ್ತು. ‘ಹೂಂ ಅಂತಿಯಾ ಊಹೂಂ ಅಂತಿಯಾ?’ ಎಂಬುದು ಈ ಟಾಸ್ಕ್​ನ ಹೆಸರು.

ಆಟದ ಸ್ವರೂಪ ಹಾಗೂ ನಿಯಮಗಳನ್ನು ಬಿಗ್ ಬಾಸ್ ನೀಡಿದ್ದರು. ಆಡುವ ಪ್ರತಿ ಸದಸ್ಯರು ಕಣ್ಣಿಗೆ ಪಟ್ಟಿಕೊಳ್ಳಬೇಕು. ಆರಂಭದಿಂದ ಅಂತಿಮ ಸ್ಥಾನಕ್ಕೆ ಬಂದು ಆನೆಯ ಚಿತ್ರಕ್ಕೆ ಬಾಲ ಬಿಡಿಸಬೇಕು. ಆಡುವ ಸದಸ್ಯ ಸಾಗುತ್ತಿರುವ ಹಾದಿ ಸರಿಯಾಗಿ ಇದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಂಡದವರು ವಿವರಿಸಬೇಕು. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ಬಾರಿ ಸರಿಯಾಗಿ ಬಾಲ ಬಿಡಿಸಿದ ತಂಡ ಈ ಟಾಸ್ಕ್ ಗೆಲ್ಲುತ್ತದೆ.

ಮೊದಲು ಸ್ಪರ್ಧೆಗೆ ಇಳಿದಿದ್ದು ರಣಶಕ್ತಿ ಟೀಂನ ಸಂಗೀತಾ ಶೃಂಗೇರಿ. ಅವರ ಕಣ್ಣಿಗೆ ಪಟ್ಟಿಕಟ್ಟಿದ್ದು ವಿನಯ್. ಸಂಗೀತಾಗೆ ಮಾರ್ಗದರ್ಶನ ನೀಡಿದ್ದು ತನಿಷಾ. ಸಂಗೀತಾ ಬಾಲ ಬಿಡಿಸಿದರು. ಆ ಬಳಿಕ ಮಾಣಿಕ್ಯ ತಂಡದಿಂದ ನಮ್ರತಾ ಅಖಾಡಕ್ಕೆ ಇಳಿದರು. ಅವರು ಕೂಡ ಕಷ್ಟಪಟ್ಟು ಬಾಲ ಬಿಡಿಸಿದರು. ನಂತರ ರಣಶಕ್ತಿ ಮತ್ತು ಮಾಣಿಕ್ಯ ತಂಡದ ನೀತು, ಇಶಾನಿ, ವರ್ತೂರು ಸಂತೋಷ್, ಸಿರಿ ಯಶಸ್ವಿಯಾಗಿ ಬಾಲ ಬಿಡಿಸಿದರು. ತುಕಾಲಿ ಸಂತೋಷ್, ಭಾಗ್ಯಶ್ರಿ, ಬುಲೆಟ್ ರಕ್ಷಕ್ ದಾರಿ ತಪ್ಪಿದರೂ ನಂತರ ಸರಿಯಾಗಿ ಬಾಲ ಬಿಡಿಸಿದರು.

ಇದನ್ನೂ ಓದಿ: ‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ

ಹಲವಾರು ಫನ್ ಮೂಮೆಂಟ್​ಗೆ ಈ ಟಾಸ್ಕ್​ ಸಾಕ್ಷಿ ಆಯಿತು. ಸ್ಪರ್ಧಿಗಳೂ ಈ ಆಟವನ್ನು ಎಂಜಾಯ್ ಮಾಡಿದರು. ಈ ಸ್ಪರ್ಧೆಯಲ್ಲಿ ರಣಶಕ್ತಿ ತಂಡ ಗೆದ್ದಿದೆ. ಈ ರೀತಿಯ ಫನ್ ಗೇಮ್‌ನ ಜಿಯೋ ಸಿನಿಮಾದ ಫನ್ ಫ್ರೈಡೇ ಸೆಗ್ಮೆಂಟ್‌ನಲ್ಲಿ ವೀಕ್ಷಿಸಬಹುದು.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ