AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCL 2023: ರೋಚಕ ಪಂದ್ಯದಲ್ಲಿ ತೆಲುಗು ವಾರಿಯರ್ಸ್​ಗೆ ಮಣಿದ ಕರ್ನಾಟಕ ಬುಲ್ಡೋಜರ್ಸ್

CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ರ ಸೆಮಿಫೈನಲ್ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವೆ ವಿಶಾಖಪಟ್ಟಣಂ ನಲ್ಲಿ ನಡೆಯಿತು.

CCL 2023: ರೋಚಕ ಪಂದ್ಯದಲ್ಲಿ ತೆಲುಗು ವಾರಿಯರ್ಸ್​ಗೆ ಮಣಿದ ಕರ್ನಾಟಕ ಬುಲ್ಡೋಜರ್ಸ್
ಕರ್ನಾಟಕ ಬುಲ್ಡೋಜರ್ಸ್ -ತೆಲುಗು ವಾರಿಯರ್ಸ್
ಮಂಜುನಾಥ ಸಿ.
|

Updated on: Mar 25, 2023 | 7:33 AM

Share

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ 2023 (CCL 2023) ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಇಂದು ಆಂಧ್ರದ ವಿಶಾಖಪಟ್ಟಣಂ ನಲ್ಲಿ ನಡೆದಿದ್ದು, ಕರ್ನಾಟಕ ಸಿನಿಮಾ ಸೆಲೆಬ್ರಿಟಿಗಳ ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ತಂಡವು ತೆಲುಗು ಸಿನಿಮಾ ರಂಗದ ತೆಲುಗು ವಾರಿಯರ್ಸ್​ (Telugu Warriors) ಅನ್ನು ಎದುರಿಸಿತು. ರೋಚಕ ಹಣಾ-ಹಣಿಯಿದ್ದ ಈ ಎರಡನೇ ಸೆಮಿಫೈನಲ್ ಪಂದ್ಯದ ಕೊನೆಯವರೆಗೆ ಚಂಚಲೆಯಾಗಿದ್ದ ವಿಜಯಲಕ್ಷ್ಮಿ ಕೊನೆಯ ಎರಡು ಎಸೆತ ಬಾಕಿ ಇದ್ದಾಗ ತೆಲುಗು ವಾರಿಯರ್ಸ್ ಪರವಾದಳು.

ಮೊದಲ ಇನ್ನಿಂಗ್ಸ್ ಆಡಿದ ಕರ್ನಾಟಕ ತಂಡ ನಾಯಕ ಪ್ರದೀಪ್ ಅವರ ಅರ್ಧಶಕತದ ನೆರವಿನಿಂದ 10 ಓವರ್​ಗಳಲ್ಲಿ 99 ರನ್ ಗಳಿಸಿತು. ಡಾರ್ಲಿಂಗ್ ಕೃಷ್ಣ ಸಹ ಉತ್ತಮವಾಗಿ ಬ್ಯಾಟ್ ಬೀಸಿ 30 ರನ್ ಗಳಿಸಿದರು. ನಂತರ ಬ್ಯಾಟಿಂಗ್​ಗೆ ಇಳಿದ ತೆಲುಗು ವಾರಿಯರ್ಸ್ ಸಹ ಚೆನ್ನಾಗಿಯೇ ಬ್ಯಾಟಿಂಗ್ ಮಾಡಿ 10 ಓವರ್​ಗಳಿಗೆ 95 ರನ್ ಗಳಿಸಿ ಕೇವಲ ನಾಲ್ಕು ರನ್​ಗಳಿಂದಷ್ಟೆ ಹಿಂದುಳಿಯಿತು. ತೆಲುಗು ವಾರಿಯರ್ಸ್ ಪರವಾಗಿ ಅಶ್ವಿನ್ ಬಾಬು ಉತ್ತಮವಾಗಿ ಆಡಿ 36 ರನ್ ಗಳಿಸಿದರು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ನಿಧಾನದ ಆರಂಭ ಪಡೆಯಿತು. ಓಪನಿಂಗ್ ಬ್ಯಾಟ್ಸ್​ಮ್ಯಾನ್ ಆಗಿ ಸ್ಕ್ರೀಜ್​ಗೆ ಬಂದ ಸುದೀಪ್ ಬಹುಬೇಗನೆ ರನ್ ಔಟ್ ಆಗಿ ಮರಳಿದರು. ಆ ಬಳಿಕ ರಾಜೀವ್ ಹಾಗೂ ಜೆಕೆ ಉತ್ತಮವಾಗಿ ಆಡಿ ಉತ್ತಮ ಮೊತ್ತ ಕಲೆಹಾಕುವತ್ತ ದಾಪುಗಾಲು ಹಾಕಿದರು ಆದರೆ ರಾಜೀವ್ ಹಾಗೂ ಜೆಕೆ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್​ಗೆ ಮರಳಿದರು. ಎಂಟು ಓವರ್​ಗೆ ಕರ್ನಾಟಕ ತಂಡದ ಮೊತ್ತ 70 ಆಗಿತ್ತು ನಾಲ್ಕು ವಿಕೆಟ್ ಉರುಳಿದ್ದವು. ಅದೇ ಸಮಯದಲ್ಲಿ ಸ್ಕ್ರೀಜ್​ಗೆ ಬಂದ ಬಚ್ಚನ್ ಹಾಗೂ ಡಾರ್ಲಿಂಗ್ ಕೃಷ್ಣ ಅದ್ಭುತವಾಗಿ ಆಡಿ ಕೇವಲ ಎರಡು ಓವರ್​ನಲ್ಲಿ 28 ರನ್ ಭಾರಿಸಿ ತಂಡದ ಮೊತ್ತವನ್ನು 98 ರನ್​ಗಳಿಗೆ ಕೊಂಡೊಯ್ದರು. ಮೊದಲ ಇನ್ನಿಂಗ್ಸ್​ನ ನಾಲ್ಕು ರನ್ ಸೇರಿಸಿ 102 ರನ್​ಗಳ ಬೃಹತ್ ಮೊತ್ತವನ್ನು ತೆಲುಗು ವಾರಿಯರ್ಸ್ ಮುಂದಿಟ್ಟಿತು ಕರ್ನಾಟಕ ಬುಲ್ಡೋಜರ್ಸ್ ತಂಡ.

ಚೇಸಿಂಗ್ ಆರಂಭಿಸಿದ ತೆಲುಗು ವಾರಿಯರ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಸರಾಸರಿ ಕಾಯ್ದುಕೊಂಡು ಕೊನೆಯ ಓವರ್ ವರೆಗೆ ಪಂದ್ಯವನ್ನು ಎಳೆದು ತಂದಿತು. ಎರಡು ಓವರ್​ಗೆ 28 ರನ್​ಗಳ ಅವಶ್ಯಕತೆ ಇದ್ದಾಗ ಸ್ಕ್ರೀಜ್​ನಲ್ಲಿದ್ದ ಸಂಗೀತ ನಿರ್ದೇಶಕ ತಮನ್ ಹಾಗೂ ನಟ ಪ್ರಿನ್ಸ್ ಅವರುಗಳು ಭರ್ಜರಿ ಬ್ಯಾಟಿಂಗ್ ಮಾಡಿ ಕೊನೆಯ ಒಂದು ಓವರ್​ಗೆ ಕೇವಲ ಎಂಟು ರನ್​ ಗಳಷ್ಟೆ ಬೇಕಾಗುವಂತೆ ಮಾಡಿದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಸುನಿಲ್ ರಾವ್ ರ ಮೊದಲ ಬಾಲಿನಲ್ಲೇ ಬೌಂಡರಿ ಭಾರಿಸಿದ ತಮನ್ ಗೆಲುವನ್ನು ಬಹಳ ಸರಳ ಮಾಡಿಬಿಟ್ಟರು. ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ತೆಲುಗು ವಾರಿಯರ್ಸ್ ಪಂದ್ಯವನ್ನು ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್​ನಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಭೋಜ್​ಪುರಿ ತಂಡ ಎದುರಿಸಲಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿತಾದರೂ ಮೈದಾನದಲ್ಲಿ ಮಾಡಿದ ಸಣ್ಣ-ಸಣ್ಣ ತಪ್ಪುಗಳಿಂದಾಗಿ ಪಂದ್ಯ ಸೋಲಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು