AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCL 2023: ರೋಚಕ ಪಂದ್ಯದಲ್ಲಿ ತೆಲುಗು ವಾರಿಯರ್ಸ್​ಗೆ ಮಣಿದ ಕರ್ನಾಟಕ ಬುಲ್ಡೋಜರ್ಸ್

CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ರ ಸೆಮಿಫೈನಲ್ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವೆ ವಿಶಾಖಪಟ್ಟಣಂ ನಲ್ಲಿ ನಡೆಯಿತು.

CCL 2023: ರೋಚಕ ಪಂದ್ಯದಲ್ಲಿ ತೆಲುಗು ವಾರಿಯರ್ಸ್​ಗೆ ಮಣಿದ ಕರ್ನಾಟಕ ಬುಲ್ಡೋಜರ್ಸ್
ಕರ್ನಾಟಕ ಬುಲ್ಡೋಜರ್ಸ್ -ತೆಲುಗು ವಾರಿಯರ್ಸ್
ಮಂಜುನಾಥ ಸಿ.
|

Updated on: Mar 25, 2023 | 7:33 AM

Share

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ 2023 (CCL 2023) ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಇಂದು ಆಂಧ್ರದ ವಿಶಾಖಪಟ್ಟಣಂ ನಲ್ಲಿ ನಡೆದಿದ್ದು, ಕರ್ನಾಟಕ ಸಿನಿಮಾ ಸೆಲೆಬ್ರಿಟಿಗಳ ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ತಂಡವು ತೆಲುಗು ಸಿನಿಮಾ ರಂಗದ ತೆಲುಗು ವಾರಿಯರ್ಸ್​ (Telugu Warriors) ಅನ್ನು ಎದುರಿಸಿತು. ರೋಚಕ ಹಣಾ-ಹಣಿಯಿದ್ದ ಈ ಎರಡನೇ ಸೆಮಿಫೈನಲ್ ಪಂದ್ಯದ ಕೊನೆಯವರೆಗೆ ಚಂಚಲೆಯಾಗಿದ್ದ ವಿಜಯಲಕ್ಷ್ಮಿ ಕೊನೆಯ ಎರಡು ಎಸೆತ ಬಾಕಿ ಇದ್ದಾಗ ತೆಲುಗು ವಾರಿಯರ್ಸ್ ಪರವಾದಳು.

ಮೊದಲ ಇನ್ನಿಂಗ್ಸ್ ಆಡಿದ ಕರ್ನಾಟಕ ತಂಡ ನಾಯಕ ಪ್ರದೀಪ್ ಅವರ ಅರ್ಧಶಕತದ ನೆರವಿನಿಂದ 10 ಓವರ್​ಗಳಲ್ಲಿ 99 ರನ್ ಗಳಿಸಿತು. ಡಾರ್ಲಿಂಗ್ ಕೃಷ್ಣ ಸಹ ಉತ್ತಮವಾಗಿ ಬ್ಯಾಟ್ ಬೀಸಿ 30 ರನ್ ಗಳಿಸಿದರು. ನಂತರ ಬ್ಯಾಟಿಂಗ್​ಗೆ ಇಳಿದ ತೆಲುಗು ವಾರಿಯರ್ಸ್ ಸಹ ಚೆನ್ನಾಗಿಯೇ ಬ್ಯಾಟಿಂಗ್ ಮಾಡಿ 10 ಓವರ್​ಗಳಿಗೆ 95 ರನ್ ಗಳಿಸಿ ಕೇವಲ ನಾಲ್ಕು ರನ್​ಗಳಿಂದಷ್ಟೆ ಹಿಂದುಳಿಯಿತು. ತೆಲುಗು ವಾರಿಯರ್ಸ್ ಪರವಾಗಿ ಅಶ್ವಿನ್ ಬಾಬು ಉತ್ತಮವಾಗಿ ಆಡಿ 36 ರನ್ ಗಳಿಸಿದರು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ನಿಧಾನದ ಆರಂಭ ಪಡೆಯಿತು. ಓಪನಿಂಗ್ ಬ್ಯಾಟ್ಸ್​ಮ್ಯಾನ್ ಆಗಿ ಸ್ಕ್ರೀಜ್​ಗೆ ಬಂದ ಸುದೀಪ್ ಬಹುಬೇಗನೆ ರನ್ ಔಟ್ ಆಗಿ ಮರಳಿದರು. ಆ ಬಳಿಕ ರಾಜೀವ್ ಹಾಗೂ ಜೆಕೆ ಉತ್ತಮವಾಗಿ ಆಡಿ ಉತ್ತಮ ಮೊತ್ತ ಕಲೆಹಾಕುವತ್ತ ದಾಪುಗಾಲು ಹಾಕಿದರು ಆದರೆ ರಾಜೀವ್ ಹಾಗೂ ಜೆಕೆ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್​ಗೆ ಮರಳಿದರು. ಎಂಟು ಓವರ್​ಗೆ ಕರ್ನಾಟಕ ತಂಡದ ಮೊತ್ತ 70 ಆಗಿತ್ತು ನಾಲ್ಕು ವಿಕೆಟ್ ಉರುಳಿದ್ದವು. ಅದೇ ಸಮಯದಲ್ಲಿ ಸ್ಕ್ರೀಜ್​ಗೆ ಬಂದ ಬಚ್ಚನ್ ಹಾಗೂ ಡಾರ್ಲಿಂಗ್ ಕೃಷ್ಣ ಅದ್ಭುತವಾಗಿ ಆಡಿ ಕೇವಲ ಎರಡು ಓವರ್​ನಲ್ಲಿ 28 ರನ್ ಭಾರಿಸಿ ತಂಡದ ಮೊತ್ತವನ್ನು 98 ರನ್​ಗಳಿಗೆ ಕೊಂಡೊಯ್ದರು. ಮೊದಲ ಇನ್ನಿಂಗ್ಸ್​ನ ನಾಲ್ಕು ರನ್ ಸೇರಿಸಿ 102 ರನ್​ಗಳ ಬೃಹತ್ ಮೊತ್ತವನ್ನು ತೆಲುಗು ವಾರಿಯರ್ಸ್ ಮುಂದಿಟ್ಟಿತು ಕರ್ನಾಟಕ ಬುಲ್ಡೋಜರ್ಸ್ ತಂಡ.

ಚೇಸಿಂಗ್ ಆರಂಭಿಸಿದ ತೆಲುಗು ವಾರಿಯರ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಸರಾಸರಿ ಕಾಯ್ದುಕೊಂಡು ಕೊನೆಯ ಓವರ್ ವರೆಗೆ ಪಂದ್ಯವನ್ನು ಎಳೆದು ತಂದಿತು. ಎರಡು ಓವರ್​ಗೆ 28 ರನ್​ಗಳ ಅವಶ್ಯಕತೆ ಇದ್ದಾಗ ಸ್ಕ್ರೀಜ್​ನಲ್ಲಿದ್ದ ಸಂಗೀತ ನಿರ್ದೇಶಕ ತಮನ್ ಹಾಗೂ ನಟ ಪ್ರಿನ್ಸ್ ಅವರುಗಳು ಭರ್ಜರಿ ಬ್ಯಾಟಿಂಗ್ ಮಾಡಿ ಕೊನೆಯ ಒಂದು ಓವರ್​ಗೆ ಕೇವಲ ಎಂಟು ರನ್​ ಗಳಷ್ಟೆ ಬೇಕಾಗುವಂತೆ ಮಾಡಿದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಸುನಿಲ್ ರಾವ್ ರ ಮೊದಲ ಬಾಲಿನಲ್ಲೇ ಬೌಂಡರಿ ಭಾರಿಸಿದ ತಮನ್ ಗೆಲುವನ್ನು ಬಹಳ ಸರಳ ಮಾಡಿಬಿಟ್ಟರು. ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ತೆಲುಗು ವಾರಿಯರ್ಸ್ ಪಂದ್ಯವನ್ನು ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್​ನಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಭೋಜ್​ಪುರಿ ತಂಡ ಎದುರಿಸಲಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿತಾದರೂ ಮೈದಾನದಲ್ಲಿ ಮಾಡಿದ ಸಣ್ಣ-ಸಣ್ಣ ತಪ್ಪುಗಳಿಂದಾಗಿ ಪಂದ್ಯ ಸೋಲಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ