AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಮಿಲನಾ ಹೊಡೆದರೆ ನನ್ನ ಸಿನಿಮಾ ಹಿಟ್ ಆಗುತ್ತೆ: ಡಾರ್ಲಿಂಗ್ ಕೃಷ್ಣ

Kausalya Supraja Rama: ಡಾರ್ಲಿಂಗ್ ಕೃಷ್ಣ ನಟನೆಯ ಕೌಸಲ್ಯ ಸುಪ್ರಜಾ ರಾಮ ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪತ್ನಿ ಮಿಲನಾ ಹೊಡೆದರೆ ನನ್ನ ಸಿನಿಮಾ ಹಿಟ್ ಆಗುತ್ತೆ: ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ
Follow us
ಮಂಜುನಾಥ ಸಿ.
|

Updated on: Jul 28, 2023 | 10:44 PM

ಡಾರ್ಲಿಂಗ್ ಕೃಷ್ಣ (Darling Krishna), ಬೃಂದಾ ಆಚಾರ್ಯ (Brinda Acharya), ಮಿಲನಾ ನಾಗರಾಜ್ (Milana Nagaraj) ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಇಂದು (ಜುಲೈ 28) ಬಿಡುಗಡೆ ಆಗಿದೆ. ಪವನ್ ಕಲ್ಯಾಣ್​ರ ‘ಬ್ರೋ’ ಸಿನಿಮಾದ ಅಬ್ಬರದ ನಡುವೆಯೂ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರೂ ಸಹ ಸಿನಿಮಾದ ಬಗ್ಗೆ, ಸಿನಿಮಾ ನೀಡುತ್ತಿರುವ ಸಂದೇಶದ ಬಗ್ಗೆ ಖುಷಿ ವ್ಯಕ್ತಪಡಿಸಿರುವುದು ಚಿತ್ರತಂಡದ ಜೋಷ್ ಹೆಚ್ಚಿಸಿದೆ. ಸಿನಿಮಾಕ್ಕೆ ಉತ್ತಮ ಆರಂಭ ಸಿಕ್ಕ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

”ಇದು ನನ್ನ ಕರಿಯರ್​ನಲ್ಲಿಯೇ ಬೆಸ್ಟ್ ಸಿನಿಮಾ. ಭಿನ್ನವಾದ ಸಂದೇಶವನ್ನು ನಾವು ಸಿನಿಮಾದಲ್ಲಿ ನೀಡಿದ್ದೀವಿ. ಸಿನಿಮಾ ನೋಡುತ್ತಿರುವವರು ಎರಡನೇ ಅರ್ಧದಲ್ಲಿ ಬಹಳ ಎಮೋಷನಲ್ ಆಗುತ್ತಿದ್ದುದನ್ನು ನಾನು ಗಮನಿಸಿದೆ. ಸಿನಿಮಾ ನೋಡುವವರನ್ನು ಭಾವುಕರನ್ನಾಗಿಸುವಂಥಹಾ ಕತೆಯನ್ನು ನಾವು ಹೇಳಿದ್ದೇವೆ. ಈ ರೀತಿಯ ಸಿನಿಮಾವನ್ನು ನಾವು ಈ ಹಿಂದಿನ ವರೆಗೆ ನಾನು ಮಾಡಿರಲಿಲ್ಲ” ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

ಸಿನಿಮಾದಲ್ಲಿ ಮಿಲನಾ ನಾಗರಾಜ್ ಸಹ ನಟಿಸಿದ್ದು, ಲವ್ ಮಾಕ್ಟೆಲ್ ಸಿನಿಮಾದಲ್ಲಿ ಮಿಲನಾ, ನನ್ನನ್ನು ಒದ್ದಿದ್ದರು, ಈ ಸಿನಿಮಾದಲ್ಲಿ ಹೊಡೆದಿದ್ದಾರೆ. ಅವರು ನನ್ನನ್ನು ಹೊಡೆದರೆ ಅಥವಾ ಒದ್ದರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಅದು ಈ ಸಿನಿಮಾ ಮೂಲಕವೂ ಮುಂದುವರೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ:ತಾರಾ ಜೋಡಿಯಾಗಿ ತಾವೆದುರಿಸುತ್ತಿರುವ ಸಮಸ್ಯೆಯ ಬಗ್ಗೆ ನಟಿ ಮಿಲನಾ ನಾಗರಾಜ್ ಬಿಚ್ಚು ಮಾತು

ಸಿನಿಮಾ ಬಗ್ಗೆ ಮಾತು ಹೊರಳಿಸಿದ ಡಾರ್ಲಿಂಗ್ ಕೃಷ್ಣ, ಈ ಸಿನಿಮಾ ಕಾಲೇಜು ವಿದ್ಯಾರ್ಥಿಗಳಿಗೆ, ಮಾಸ್ ಆಡಿಯನ್ಸ್​ಗೆ ಕುಟುಂಬ ಪ್ರೇಕ್ಷಕರು ಎಲ್ಲರಿಗೂ ಇಷ್ಟವಾಗುತ್ತದೆ. ಮೊದಲನೇ ಅರ್ಧದಲ್ಲಿ ನನ್ನ ಪಾತ್ರವನ್ನು ಇಷ್ಟ ಪಡದ ಜನರೇ ಆ ನಂತರ ಆ ಪಾತ್ರ ಬದಲಾಗುವ ರೀತಿ ನೋಡಿ ಖುಷಿ ಪಡುತ್ತಾರೆ. ಮೊದಲಾರ್ಧದಲ್ಲಿರುವ ನನ್ನ ರಗಡ್ ಲುಕ್​ನ ಪಾತ್ರವೂ ಹಲವರಿಗೆ ಇಷ್ಟವಾಗಲಿದೆ” ಎಂದಿದ್ದಾರೆ ಕೃಷ್ಣ.

ಸಿನಿಮಾದಲ್ಲಿ ತಂದೆ-ಮಗನ ಸಂಬಂಧ, ತಾಯಿ-ಮಗನ ಸಂಬಂಧ, ಗಂಡ-ಹೆಂಡತಿ, ಗೆಳೆಯರ ಸಂಬಂಧ ಹೀಗೆ ಹಲವು ಕೋನಗಳಲ್ಲಿ ನಾವು ಕತೆಯನ್ನು ಹೇಳಿದ್ದೇವೆ. ಎಲ್ಲರಿಗೂ ಇಷ್ಟವಾಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನಾವು ಹೇಳಲು ಹೊರಟಿರುವ ವಿಷಯ ಸಹ ಎಲ್ಲರಿಗೂ ತಟ್ಟುವಂಥಹದ್ದು, ಸಮಾಜದಲ್ಲಿ, ಪ್ರತಿ ಮನೆಯಲ್ಲಿಯೂ ಇರುವಂಥಹದ್ದು ಹಾಗಾಗಿ ಈ ಸಿನಿಮಾ ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ, ಅರ್ಥವಾಗುತ್ತದೆ ಎಂದಿದ್ದಾರೆ.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಗಂಡಸಿನ ಅಹಂ ಕುರಿತ ಕತೆಯನ್ನು ನಿರ್ದೇಶಕ ಶಶಾಂಕ್ ಹೇಳಿದ್ದಾರೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ, ಮಿಲನಾ, ನಾಗಭೂಷಣ್, ಸುಧಾ ಬೆಳವಾಡಿ, ರಂಗಾಯಣ ರಘು ಇನ್ನಿತರರು ನಟಿಸಿದ್ದಾರೆ. ಸಿನಿಮಾ ಜುಲೈ 28ಕ್ಕೆ ತೆರೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ