ರಾಬರ್ಟ್ ಸಿನಿಮಾ ಶೂಟಿಂಗ್ಗೆ ಉತ್ತರ ಪ್ರದೇಶಕ್ಕೆ ಹೋದಾಗ ಸೌರವ್ ಸಿಕ್ಕಿದ್ದ. ನಾನು ಹೋಗಿ ನೋಡಿದರೆ ಅಚ್ಚರಿಗೊಂಡಿದ್ದೆ. ಏಕೆಂದರೆ, ಆತನ ಕಾರಿನ ಹಿಂದೆ ನಾಲ್ಕೈದು ಗನ್ಮೆನ್ಗಳನ್ನು ಕರೆದುಕೊಂಡು ಬಂದಿದ್ದ. ನಾನು ಇದೆಲ್ಲ ಏಕೆ ಎಂದು ಕೇಳಿದ್ದೆ. ನೀನು ಮೈಸೂರು ಮಹಾರಾಜ. ನಿನಗೆ ಇಷ್ಟೂ ಮಾಡದಿದ್ದರೆ ಹೇಗೆ ಎಂದು ಮರು ಪ್ರಶ್ನೆ ಹಾಕಿದ್ದ. ಕೊನೆಗೆ ಲಖನೌ ಬಿರಿಯಾನಿ ತಿನ್ನೋಣ ಎಂದಿದ್ದೆ. ಒಂದು ಹೋಟೆಲ್ಗೆ ಹೋಗಿದ್ದೆವು. ಅಲ್ಲಿ, ಹೋಗುತ್ತಿದ್ದಂತೆ ಗನ್ಮೆನ್ಗಳು ಎಲ್ಲ ಗ್ರಾಹಕರನ್ನು ಹೊಟೆಲ್ನಿಂದ ಹೊರ ಹಾಕಿದ್ದರು. ನಂತರ ನಾವು ಕೂತು ಬಿರಿಯಾನಿ ತಿಂದೆವು. ನಂಗೆ ಹೋಟೆಲ್ನವರು ಬೈದರೆ ಎನ್ನುವ ಭಯ ಕಾಡುತ್ತಿತ್ತು ಎಂದು ದರ್ಶನ್ ಹೇಳಿದ್ದಾರೆ.
ಕೊನೆಗೆ ಲಸ್ಸಿ ಕುಡಿಯೋಣ ಎಂದಿದ್ದೆ. ಹೊರಗೆ ಹೋದಾಗ ನಮ್ಮನ್ನು ಗನ್ಮೆನ್ಗಳು ಸುತ್ತುವರಿದು ಕಾಯುತ್ತಾ ನಿಂತಿದ್ದರು. ಅಲ್ಲಿದ್ದ ಜನರೆಲ್ಲ ನಮ್ಮನ್ನೇ ನೋಡುತ್ತಿದ್ದರು. ಒಂದು ಲಸ್ಸಿಗೆ 20 ರೂಪಾಯಿ ಇತ್ತು. ನಮ್ಮ ಹತ್ತಿರ ಚಿಲ್ಲರೆ ಇರಲಿಲ್ಲ. ಹೀಗಾಗಿ 2 ಸಾವಿರ ಕೊಟ್ಟು, ಚಿಲ್ಲರೆ ನೀನೆ ಇಟ್ಕೊಳಪ್ಪ ಎಂದು ಹೇಳಿ ನಾವು ವಾಪಾಸು ಬಂದಿದ್ದವು. ಅಲ್ಲಿದ್ದ ಜನರು ನಮ್ಮನ್ನು ನೋಡುತ್ತಿರುವುದನ್ನು ನೋಡಿ ನನಗೆ ಯಾವಾಗ ಇಲ್ಲಿಂದ ಜಾಗ ಖಾಲಿ ಮಾಡುತ್ತೇನೋ ಎನ್ನಿಸಿಬಿಟ್ಟಿತ್ತು ಎಂದಿದ್ದಾರೆ ದರ್ಶನ್.
ಇದನ್ನೂ ಓದಿ: ಅಭಿಮಾನಿ ಮುಂದೆ ದಾಸನಾದ ದರ್ಶನ್: ಕಾರು ಫಾಲೋ ಮಾಡಿದವರ ಜತೆ ರಸ್ತೆಯಲ್ಲೇ ಕುಳಿತು ಮಾತನಾಡಿದ ಡಿ ಬಾಸ್