AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರು ಬಂದಿಲ್ಲ ಅಂತ ಸುಳ್ಳು ಹೇಳಿದ್ರಾ ರಾಕ್​ಲೈನ್? ಪಬ್​ ಸಿಸಿಟಿವಿಯಲ್ಲಿದೆ ದಾಖಲೆ

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್​ನಲ್ಲಿ ಉಲ್ಲೇಖ ಆಗಿರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ರಾತ್ರಿ 12:40ಕ್ಕೆ ಪಬ್ ಕ್ಲೋಸ್ ಮಾಡಿಸಲು ಹೋಗಿದ್ದರು. ಪೊಲೀಸರು ಎರಡನೇ ಬಾರಿಗೆ ಪಬ್​ಗೆ ಬಂದಿದ್ದು ರಾತ್ರಿ 2:51ಕ್ಕೆ. ಆ ವೇಳೆ ಅಲ್ಲಿ ಜನ ಸೇರಿದ್ದನ್ನು ಕ್ಲಿಯರ್ ಮಾಡಿಸಿದ್ದರು. ಆದರೆ ರಾಕ್​ಲೈನ್​ ವೆಂಕಟೇಶ್​ ಹೇಳಿಕೆ ಬೇರೆ ರೀತಿ ಇದೆ.

ಪೊಲೀಸರು ಬಂದಿಲ್ಲ ಅಂತ ಸುಳ್ಳು ಹೇಳಿದ್ರಾ ರಾಕ್​ಲೈನ್? ಪಬ್​ ಸಿಸಿಟಿವಿಯಲ್ಲಿದೆ ದಾಖಲೆ
ಸಿಸಿಟಿವಿ ದೃಶ್ಯ, ರಾಕ್​ಲೈನ್​ ವೆಂಕಟೇಶ್​, ದರ್ಶನ್​
TV9 Web
| Edited By: |

Updated on: Jan 14, 2024 | 2:15 PM

Share

ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಜೆಟ್​ ಲ್ಯಾಗ್​ ಪಬ್​ನಲ್ಲಿ ‘ಕಾಟೇರ’ (Kaatera) ಚಿತ್ರತಂಡದವರು ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿರುವ ಪ್ರಕರಣ ಈಗ ಹೆಚ್ಚು ಚರ್ಚೆ ಆಗುತ್ತಿದೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ದರ್ಶನ್​ (Darshan) ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಸುಬ್ರಹ್ಮಣ್ಯ ನಗರ ಪೊಲೀಸರು ನೋಟಿಸ್​ ನೀಡಿ ವಿಚಾರಣೆಗೆ ಕರೆಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಅವರು ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ‘ಕಾಟೇರ’ ಚಿತ್ರತಂಡದವರು ಪಬ್​ನಲ್ಲಿ ಇದ್ದಾಗ ಪೊಲೀಸರು ಬಂದಿಲ್ಲ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದ್ದರು. ಆದರೆ ಅಂದು ರಾತ್ರಿ ಎರಡು ಬಾರಿ ಪೊಲೀಸರು ಭೇಟಿ ನೀಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜನವರಿ 3ರಂದು ಜೆಟ್​​ ಲ್ಯಾಗ್​ ಪಬ್​ಗೆ ಪೊಲೀಸರು ಬಂದೇ ಇಲ್ಲ ಎಂದು ರಾಕ್​ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ. ಪೊಲೀಸರ ಮೇಲಿನ ಕೋಪಕ್ಕೆ ಅವರು ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಅಂದು ರಾತ್ರಿ 12:45ಕ್ಕೆ ಭೇಟಿ ನೀಡಿ ರೆಸ್ಟೋಬಾರ್ ಕ್ಲೋಸ್ ಮಾಡಿಸಿ ಹೋಗಿದ್ದರು. ಪೊಲೀಸರು ಜೆಟ್​​ ಲ್ಯಾಗ್​ ಪಬ್​ಗೆ ಬಂದಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್​ನಲ್ಲಿ ಉಲ್ಲೇಖ ಆಗಿರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ರಾತ್ರಿ 12:40ಕ್ಕೆ ಪಬ್ ಕ್ಲೋಸ್ ಮಾಡಿಸಲು ಹೋಗಿದ್ದರು. ಗ್ರಾಹಕರನ್ನು ಹೊರಗೆ ಕಳಿಸಿ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು. ಈ ವೇಳೆ ಸೆಲೆಬ್ರಿಟಿಗಳ ಬಗ್ಗೆಯೂ ಪಬ್​ ಸಿಬ್ಬಂದಿಗೆ ಪ್ರಶ್ನೆ ಮಾಡಲಾಯಿತು. ‘ಸಿನಿಮಾದವರ ಮೀಟಿಂಗ್​ ಇದೆ. 20 ನಿಮಿಷ ಮೀಟಿಂಗ್ ಮಾಡಿ ಎಲ್ಲರೂ ಹೋಗ್ತಾರೆ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್. ಹೀಗಾಗಿ ವೈಯಕ್ತಿಕ ಮಾತುಕತೆ ಇದೆ. ಬಾರ್ ಕೌಂಟರ್ ಎಲ್ಲವನ್ನೂ ಕ್ಲೋಸ್ ಮಾಡಿದ್ದೇವೆ’ ಎಂದು ಪಬ್​ ಸಿಬ್ಬಂದಿ ಉತ್ತರಿಸಿದ್ದರು. ಬಳಿಕ ರಾಬರಿ ಆಗಿದೆ ಅಂತ ಕಂಟ್ರೋಲ್ ರೂಂಗೆ ಕಾಲ್ ಬಂದಿದ್ದರಿಂದ ಪೊಲೀಸರು ಅಲ್ಲಿಗೆ ತೆರಳಿದ್ದರು.

ಇದನ್ನೂ ಓದಿ: ‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್​ ಬಗ್ಗೆ ರಾಕ್​ಲೈನ್​ ಮೊದಲ ಪ್ರತಿಕ್ರಿಯೆ

ಇನ್ನು, ಪೊಲೀಸರು ಎರಡನೇ ಬಾರಿಗೆ ಪಬ್​ಗೆ ಬಂದಿದ್ದು ರಾತ್ರಿ 2:51ಕ್ಕೆ. ಆ ವೇಳೆ ಅಲ್ಲಿ ಜನ ಸೇರಿದ್ದನ್ನು ಕ್ಲಿಯರ್ ಮಾಡಿಸಿ ರೆಸ್ಟೋಬಾರ್ ಒಳಗೆ ಎಂಟ್ರಿ ನೀಡಿದರು. ಪಬ್​ ಕ್ಲೋಸ್ ಮಾಡಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಪೊಲೀಸ್ ನಿಯಮ ಉಲ್ಲಂಘನೆ ಹಾಗೂ ಅಬಕಾರಿ ನಿಯಮದ ಅಡಿ ಕೇಸ್ ದಾಖಲು ಮಾಡಲಾಯಿತು. ಮಾಲಿಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ಧ ಎಫ್ಐಆರ್ ಆಗಿದೆ. ಆದರೆ ಅಂದು ಪೊಲೀಸರೇ ಬಂದಿಲ್ಲ ಅಂತ ಮಾಧ್ಯಮಗಳ ಮುಂದೆ ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್