‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್​ ಬಗ್ಗೆ ರಾಕ್​ಲೈನ್​ ಮೊದಲ ಪ್ರತಿಕ್ರಿಯೆ

ಅಂದು ಏನು ನಡೆಯಿತು ಎಂಬುದನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ವಿವರಿಸಿದ್ದಾರೆ. ‘ಜನವರಿ 3ರಂದು ಸೆಲೆಬ್ರಿಟಿಗಳು ಕಾಟೇರ ಸಿನಿಮಾವನ್ನು ನೋಡಿಕೊಂಡು ವಾಪಸ್​ ಹೊರಟಾಗ ಲೇಟ್​ ಆಗಿತ್ತು. ಊಟ ಮಾಡಿಕೊಂಡು ಹೋಗಿ ಅಂತ ಎಲ್ಲರಿಗೂ ನಾನೇ ಮನವಿ ಮಾಡಿಕೊಂಡೆ’ ಎಂದು ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್​ ಬಗ್ಗೆ ರಾಕ್​ಲೈನ್​ ಮೊದಲ ಪ್ರತಿಕ್ರಿಯೆ
ರಾಕ್​ಲೈನ್​ ವೆಂಕಟೇಶ್​
Follow us
|

Updated on: Jan 12, 2024 | 6:20 PM

ಕೆಲವೇ ದಿನಗಳ ಹಿಂದೆ ‘ಕಾಟೇರ’ (Kaatera) ಸಿನಿಮಾದ ಸೆಲೆಬ್ರಿಟಿ ಶೋ ನಡೆದ ಬಳಿಕ ಚಿತ್ರತಂಡದವರು ಬೆಂಗಳೂರಿನ ಖಾಸಗಿ ಪಬ್​ನಲ್ಲಿ ಪಾರ್ಟಿ ಮಾಡಿದ್ದರು. ಅವಧಿ ಮೀರಿ ಪಾರ್ಟಿ ಮಾಡಿ, ನಿಯಮ ಉಲ್ಲಂಘಿಸಿದ್ದಕ್ಕಾಗಿ ಅನೇಕರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು. ‘ಕಾಟೇರ’ ಸಿನಿಮಾದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ (Rockline Venkatesh)​, ನಾಯಕ ನಟ ದರ್ಶನ್​ ಹಾಗೂ ಇತರೆ ಸೆಲೆಬ್ರಿಟಿಗಳಿಗೆ ಸುಬ್ರಹ್ಮಣ್ಯ ನಗರ ಪೊಲೀಸರು ನೋಟಿಸ್​ ನೀಡಿದ್ದರು. ಈ ಪ್ರಕರಣಕ್ಕೆ ​ಸಂಬಂಧಿಸಿದಂತೆ ಇಂದು (ಜ.12) ದರ್ಶನ್​ (Darshan), ರಾಕ್​ಲೈನ್​ ವೆಂಕಟೇಶ್, ಡಾಲಿ ಧನಂಜಯ್, ಚಿಕ್ಕಣ್ಣ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ರಾಕ್​ಲೈನ್​ ವೆಂಕಟೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ಏನು ನಡೆಯಿತು ಎಂಬುದನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ವಿವರಿಸಿದ್ದಾರೆ. ‘ಜನವರಿ 3ರಂದು ಸೆಲೆಬ್ರಿಟಿ ಶೋ ಆಯೋಜನೆ ಮಾಡಿದ್ದೆವು. ಆ ಸಂದರ್ಭದಲ್ಲಿ ಚಿತ್ರರಂಗದ ಗಣ್ಯ ವ್ಯಕ್ತಿಗಳನ್ನು ನಾವು ಕರೆಸಿದ್ದೆವು. ಸಿನಿಮಾ ನೋಡಿಕೊಂಡು ವಾಪಸ್​ ಹೊರಟಾಗ ಲೇಟ್​ ಆಗಿತ್ತು. ಊಟ ಮಾಡಿಕೊಂಡು ಹೋಗಿ ಅಂತ ಎಲ್ಲರಿಗೂ ನಾನೇ ಮನವಿ ಮಾಡಿಕೊಂಡೆ’ ಎಂದು ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

ಇದನ್ನೂ ಓದಿ: ‘ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ’: ‘ಕಾಟೇರ’ ಗೆಲ್ಲಿಸಿದ ಪ್ರೇಕ್ಷಕರಿಗೆ ದರ್ಶನ್​ ಧನ್ಯವಾದ

‘ದರ್ಶನ್​ ಹೊರಟಿದ್ದರು. ಅಭಿಷೇಕ್​, ಸತೀಶ್​, ಧನಂಜಯ್​ ಅವರೆಲ್ಲ ಇದ್ದಾಗ ಜೆಟ್​ ಲ್ಯಾಗ್​ ಪಬ್​ ಮಾಲೀಕರಿಗೆ ನಾನು ಮನವಿ ಮಾಡಿಕೊಂಡೆ. ನಿಮ್ಮ ಹೋಟೆಲ್​ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿಕೊಡಿ ಅಂತ ಕೇಳಿಕೊಂಡೆ. ಪಾರ್ಟಿ ಮಾಡಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ. ದರ್ಶನ್​ ಅವರಿಗೆ ಫೋನ್​ ಮಾಡಿದೆ. ಅವರು ಕೂಡ ಬಂದರು. ಅಷ್ಟು ಹೊತ್ತಿಗಾಗಲೇ ಜೆಟ್​ ಲ್ಯಾಗ್​ ಸಿಬ್ಬಂದಿ ಹೊರಟಿದ್ದರು. ಪಾಪ, ಅವರನ್ನು ಮತ್ತೆ ಕರೆಸಿದ್ದರಿಂದ ಅವರು ಊಟ, ತಿಂಡಿ ಕೊಡುವುದು ಲೇಟ್​ ಆಯಿತು’ ಎಂದಿದ್ದಾರೆ ರಾಕ್​ಲೈನ್​ ವೆಂಕಟೇಶ್.

‘ಲೇಟ್​ ಆಗಿದ್ದು ಹೊರತುಪಡಿಸಿದರೆ, ಯಾವುದೇ ಚಿಕ್ಕ ಗಲಾಟೆ, ಗಲಭೆ ಕೂಡ ಆಗಿಲ್ಲ. ಊಟ ಮಾಡಿಕೊಂಡು ನಾವು ಹೊರಟಿದ್ದೇವೆ. ಅಕ್ಕ-ಪಕ್ಕದವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನ್​ ಗಮನ ಹರಿಸಿದರು. ಆ ಸಂದರ್ಭದಲ್ಲಿ ಪೊಲೀಸರು ಅಥವಾ ಅಬಕಾರಿ ಅಧಿಕಾರಿಗಳು ನಮ್ಮನ್ನು ಏನೂ ಕೇಳಲಿಲ್ಲ. ಇಷ್ಟೇ ನಡೆದಿದ್ದು. ಅಬಕಾರಿ ಇಲಾಖೆಯ ನಿಯಮಗಳು ಉಲ್ಲಂಘನೆ ಆಗಿದ್ದರೆ ನಾವು ತಲೆ ಬಾಗಲೇಬೇಕು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ನಾವು ಗ್ರಾಹಕರು. ಮೊದಲ ಸಲ ಗ್ರಾಹಕರಿಗೆ ನೋಟಿಸ್​ ಕೊಟ್ಟು ಠಾಣೆಗೆ ಕರೆಸಿದ್ದಾರೆ. ಇದು ಎಷ್ಟು ಸರಿಯೋ ನಮಗೆ ಗೊತ್ತಿಲ್ಲ’ ಎಂದು ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?