AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ಯಾಚುಲರ್ ಪಾರ್ಟಿ’ ಟ್ರೈಲರ್: ಬ್ಯಾಂಕಾಕ್​ನಲ್ಲಿ ಗೆಳೆಯರ ಪಾರ್ಟಿ ಬಲು ಜೋರು

Bachelor Party: ದಿಗಂತ್, ಯೋಗಿ ನಟಿಸಿ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

‘ಬ್ಯಾಚುಲರ್ ಪಾರ್ಟಿ’ ಟ್ರೈಲರ್: ಬ್ಯಾಂಕಾಕ್​ನಲ್ಲಿ ಗೆಳೆಯರ ಪಾರ್ಟಿ ಬಲು ಜೋರು
ಬ್ಯಾಚುಲರ್ ಪಾರ್ಟಿ
Follow us
ಮಂಜುನಾಥ ಸಿ.
|

Updated on:Jan 16, 2024 | 11:56 PM

ದಿಗಂತ್ (Diganth), ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮದುವೆಯಾಗಲಿರುವ ಗೆಳೆಯನ ಬ್ಯಾಚುಲರ್ ಪಾರ್ಟಿಗಾಗಿ ಬ್ಯಾಂಕಾಕ್​ಗೆ ಹೋದ ಗೆಳೆಯರು ಮಾಡುವ ಪಾರ್ಟಿ ಅಲ್ಲಿ ಅವರು ಎದುರಿಸುವ ಸಮಸ್ಯೆಗಳು, ಪೀಕಲಾಟಗಳ ಬಗ್ಗೆ ಈ ಸಿನಿಮಾ ಇದ್ದು, ಸಿನಿಮಾದ ಟ್ರೈಲರ್ ಸಖತ್ ಮಜವಾಗಿದೆ.

ಪತ್ನಿಯಿಂದ ಪೀಡನೆಗೆ ಒಳಗಾಗಿರುವ ಪತಿಯ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಅವರ ಗೆಳೆಯನ ಪಾತ್ರದಲ್ಲಿ ಯೋಗಿ ನಟಿಸಿದ್ದಾರೆ. ಗೆಳೆಯನ ಮದುವೆ ನಿಶ್ಚಯವಾಗಿದ್ದು ಅದರ ಬ್ಯಾಚುಲರ್ ಪಾರ್ಟಿ ಮಾಡಲೆಂದು ಇಬ್ಬರೂ ಬ್ಯಾಂಕಾಕ್​ಗೆ ಹೋಗುತ್ತಾರೆ. ಅವರ ಜೊತೆ ಅಚ್ಯುತ್ ಕುಮಾರ್ ತಗಲುಹಾಕಿಕೊಳ್ತಾರೆ. ಅಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳು, ಎದುರಿಸುವ ಪೀಕಲಾಟ, ಸಿಲುಕಿಕೊಳ್ಳುವ ಸಮಸ್ಯೆಗಳನ್ನು, ಅದರಿಂದ ಹೊರಗೆ ಬರುವ ರೀತಿಯನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸಲಾಗಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್ ಮಜವಾಗಿದೆ. ದಿಗಂತ್​ರ ಸಂಸಾರ, ಪತ್ನಿಯಿಂದ ಅನುಭವಿಸುತ್ತಿರುವ ಸಮಸ್ಯೆ, ಯೋಗಿಯ ಬಿಂದಾಸ್ ಆಟಿಟ್ಯೂಡ್, ಅಚ್ಯುತ್ ಕುಮಾರ್ ಅವರ ಪಂಚ್ ಲೈನ್​ಗಳು ಟ್ರೈಲರ್​ನಲ್ಲಿವೆ. ಪ್ರೇಕ್ಷಕ ಸಿನಿಮಾದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಝಲಕ್ ಟ್ರೈಲರ್​ನಲ್ಲಿದೆ.

ಇದನ್ನೂ ಓದಿ:‘ಎಡಗೈ ಅಪಘಾತಕ್ಕೆ ಕಾರಣ’ ಟೀಸರ್ ಬಿಡುಗಡೆಗೆ ಸಿದ್ಧ: ದಿಗಂತ್​ಗೆ ಕಿಚ್ಚನ ಬಲ

ಸಿನಿಮಾದಲ್ಲಿ ಭರಪೂರ ಹಾಸ್ಯ ಇರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ. ಜೊತೆಗೆ ಕೆಲವು ಆಕ್ಷನ್, ಚೇಸ್ ದೃಶ್ಯಗಳು ಸಹ ಇರಲಿದೆ. ಡಾನ್​ಗಳು, ಪಾರ್ಟಿ ಮಾಡಲು ಬಂದ ಗೆಳೆಯರ ಮೇಲೆ ಡಾನ್​ನ ಕಣ್ಣು ಬೀಳುವುದೇಕೆ? ಡಾನ್​ನಿಂದ ಈ ಗೆಳೆಯರು ಹೇಗೆ ಬಚಾವಾಗುತ್ತಾರೆ. ಆ ಬ್ಯಾಂಕಾಕ್ ಸುಂದರಿ ಯಾರ ಪ್ರೀತಿಗೆ ಬೀಳುತ್ತಾಳೆ ಇತ್ಯಾದಿಗಳನ್ನು ತಿಳಿಯಲು ಸಿನಿಮಾ ನೋಡಬೇಕು.

ಯೋಗಿ, ದಿಗಂತ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು, ಲೂಸಿಯಾ ಪವನ್, ಶೋಭರಾಜ್, ಶೈನ್ ಶೆಟ್ಟಿ, ಸುಧಾ ಬೆಳವಾಡಿ, ಮಠ ಗುರುಪ್ರಸಾದ್, ನಾ ಸೋಮೇಶ್ವರ್, ದಿಗಂತ್ ಪತ್ನಿಯ ಪಾತ್ರದಲ್ಲಿ ಸಿರಿ ರವಿಕುಮಾರ್, ವಿಶೇಷ ಪಾತ್ರದಲ್ಲಿ ಜನಪ್ರಿಯ ಯೂಟ್ಯೂಬರ್ ವಿಕಿಪೀಡಿಯಾ ಇನ್ನೂ ಹಲವು ದಿಗ್ಗಜರು ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ಅಭಿಜಿತ್ ಮಹೇಶ್. ಸಿನಿಮಾಕ್ಕೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಸಿನಿಮಾ ಜನವರಿ 26ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Tue, 16 January 24

ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?