AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ಯಾಚುಲರ್ ಪಾರ್ಟಿ’ ಟ್ರೈಲರ್: ಬ್ಯಾಂಕಾಕ್​ನಲ್ಲಿ ಗೆಳೆಯರ ಪಾರ್ಟಿ ಬಲು ಜೋರು

Bachelor Party: ದಿಗಂತ್, ಯೋಗಿ ನಟಿಸಿ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

‘ಬ್ಯಾಚುಲರ್ ಪಾರ್ಟಿ’ ಟ್ರೈಲರ್: ಬ್ಯಾಂಕಾಕ್​ನಲ್ಲಿ ಗೆಳೆಯರ ಪಾರ್ಟಿ ಬಲು ಜೋರು
ಬ್ಯಾಚುಲರ್ ಪಾರ್ಟಿ
ಮಂಜುನಾಥ ಸಿ.
|

Updated on:Jan 16, 2024 | 11:56 PM

Share

ದಿಗಂತ್ (Diganth), ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮದುವೆಯಾಗಲಿರುವ ಗೆಳೆಯನ ಬ್ಯಾಚುಲರ್ ಪಾರ್ಟಿಗಾಗಿ ಬ್ಯಾಂಕಾಕ್​ಗೆ ಹೋದ ಗೆಳೆಯರು ಮಾಡುವ ಪಾರ್ಟಿ ಅಲ್ಲಿ ಅವರು ಎದುರಿಸುವ ಸಮಸ್ಯೆಗಳು, ಪೀಕಲಾಟಗಳ ಬಗ್ಗೆ ಈ ಸಿನಿಮಾ ಇದ್ದು, ಸಿನಿಮಾದ ಟ್ರೈಲರ್ ಸಖತ್ ಮಜವಾಗಿದೆ.

ಪತ್ನಿಯಿಂದ ಪೀಡನೆಗೆ ಒಳಗಾಗಿರುವ ಪತಿಯ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಅವರ ಗೆಳೆಯನ ಪಾತ್ರದಲ್ಲಿ ಯೋಗಿ ನಟಿಸಿದ್ದಾರೆ. ಗೆಳೆಯನ ಮದುವೆ ನಿಶ್ಚಯವಾಗಿದ್ದು ಅದರ ಬ್ಯಾಚುಲರ್ ಪಾರ್ಟಿ ಮಾಡಲೆಂದು ಇಬ್ಬರೂ ಬ್ಯಾಂಕಾಕ್​ಗೆ ಹೋಗುತ್ತಾರೆ. ಅವರ ಜೊತೆ ಅಚ್ಯುತ್ ಕುಮಾರ್ ತಗಲುಹಾಕಿಕೊಳ್ತಾರೆ. ಅಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳು, ಎದುರಿಸುವ ಪೀಕಲಾಟ, ಸಿಲುಕಿಕೊಳ್ಳುವ ಸಮಸ್ಯೆಗಳನ್ನು, ಅದರಿಂದ ಹೊರಗೆ ಬರುವ ರೀತಿಯನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸಲಾಗಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್ ಮಜವಾಗಿದೆ. ದಿಗಂತ್​ರ ಸಂಸಾರ, ಪತ್ನಿಯಿಂದ ಅನುಭವಿಸುತ್ತಿರುವ ಸಮಸ್ಯೆ, ಯೋಗಿಯ ಬಿಂದಾಸ್ ಆಟಿಟ್ಯೂಡ್, ಅಚ್ಯುತ್ ಕುಮಾರ್ ಅವರ ಪಂಚ್ ಲೈನ್​ಗಳು ಟ್ರೈಲರ್​ನಲ್ಲಿವೆ. ಪ್ರೇಕ್ಷಕ ಸಿನಿಮಾದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಝಲಕ್ ಟ್ರೈಲರ್​ನಲ್ಲಿದೆ.

ಇದನ್ನೂ ಓದಿ:‘ಎಡಗೈ ಅಪಘಾತಕ್ಕೆ ಕಾರಣ’ ಟೀಸರ್ ಬಿಡುಗಡೆಗೆ ಸಿದ್ಧ: ದಿಗಂತ್​ಗೆ ಕಿಚ್ಚನ ಬಲ

ಸಿನಿಮಾದಲ್ಲಿ ಭರಪೂರ ಹಾಸ್ಯ ಇರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ. ಜೊತೆಗೆ ಕೆಲವು ಆಕ್ಷನ್, ಚೇಸ್ ದೃಶ್ಯಗಳು ಸಹ ಇರಲಿದೆ. ಡಾನ್​ಗಳು, ಪಾರ್ಟಿ ಮಾಡಲು ಬಂದ ಗೆಳೆಯರ ಮೇಲೆ ಡಾನ್​ನ ಕಣ್ಣು ಬೀಳುವುದೇಕೆ? ಡಾನ್​ನಿಂದ ಈ ಗೆಳೆಯರು ಹೇಗೆ ಬಚಾವಾಗುತ್ತಾರೆ. ಆ ಬ್ಯಾಂಕಾಕ್ ಸುಂದರಿ ಯಾರ ಪ್ರೀತಿಗೆ ಬೀಳುತ್ತಾಳೆ ಇತ್ಯಾದಿಗಳನ್ನು ತಿಳಿಯಲು ಸಿನಿಮಾ ನೋಡಬೇಕು.

ಯೋಗಿ, ದಿಗಂತ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು, ಲೂಸಿಯಾ ಪವನ್, ಶೋಭರಾಜ್, ಶೈನ್ ಶೆಟ್ಟಿ, ಸುಧಾ ಬೆಳವಾಡಿ, ಮಠ ಗುರುಪ್ರಸಾದ್, ನಾ ಸೋಮೇಶ್ವರ್, ದಿಗಂತ್ ಪತ್ನಿಯ ಪಾತ್ರದಲ್ಲಿ ಸಿರಿ ರವಿಕುಮಾರ್, ವಿಶೇಷ ಪಾತ್ರದಲ್ಲಿ ಜನಪ್ರಿಯ ಯೂಟ್ಯೂಬರ್ ವಿಕಿಪೀಡಿಯಾ ಇನ್ನೂ ಹಲವು ದಿಗ್ಗಜರು ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ಅಭಿಜಿತ್ ಮಹೇಶ್. ಸಿನಿಮಾಕ್ಕೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಸಿನಿಮಾ ಜನವರಿ 26ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Tue, 16 January 24

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ