AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ಯಶ್ 19’ ಚಿತ್ರದ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ನರ್ತನ್​; ನಿರ್ದೇಶಕ ಹೇಳಿದ್ದೇನು?

ಯಶ್ ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಬಗ್ಗೆ ನರ್ತನ್ ಅವರು ಟಿವಿ9 ಕನ್ನಡದ ಜತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

’ಯಶ್ 19’ ಚಿತ್ರದ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ನರ್ತನ್​; ನಿರ್ದೇಶಕ ಹೇಳಿದ್ದೇನು?
ಯಶ್-ನರ್ತನ್
TV9 Web
| Edited By: |

Updated on:Jul 14, 2022 | 5:28 PM

Share

ಯಶ್ (Yash) ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಶ್ 19ನೇ ಚಿತ್ರಕ್ಕೆ ನರ್ತನ್ ಅವರು ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬುದು ಈ ಮೊದಲಿನಿಂದಲೂ ಚರ್ಚೆ ಆಗುತ್ತಿರುವ ವಿಚಾರ. ‘ಕೆಜಿಎಫ್ 2’ (KGF: Chapter 2) ತೆರೆಕಂಡು ಮೂರು ತಿಂಗಳು ಪೂರ್ಣಗೊಂಡಿದೆ. ಆದರೂ, ಅವರ ಹೊಸ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈಗ ನರ್ತನ್ ಅವರು ಈ ವಿಚಾರದ ಕುರಿತು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಅವರು ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕೆಜಿಎಫ್ 2’ ಚಿತ್ರದಿಂದ ಯಶ್ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ಪರ ಭಾಷೆಗಳಿಂದಲೂ ಆಫರ್​ಗಳು ಬರುತ್ತಿದೆ ಎನ್ನಲಾಗುತ್ತಿದೆ. ಅವರು ಏಕಕಾಲಕ್ಕೆ ಹಲವು ಸಿನಿಮಾಗಳನ್ನು ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಇತ್ತೀಚೆಗೆ ಹರಿದಾಡಿತ್ತು. ಆದರೆ, ಈ ವಿಚಾರವನ್ನು ಯಾರೊಬ್ಬರೂ ಅಧಿಕೃತ ಮಾಡಿಲ್ಲ. ನರ್ತನ್ ಜತೆಗಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇದೆ. ಈ ವಿಚಾರವಾಗಿ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಬಗ್ಗೆ ನರ್ತನ್ ಅವರು ಟಿವಿ9 ಕನ್ನಡದ ಜತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

‘ಯಶ್ 19 ಚಿತ್ರದ ಕೆಲಸ ಕೊಂಚ ವಿಳಂಬ ಆಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್ ಆಗಲಿದೆ’ ಎಂದು ನರ್ತನ್​ ಹೇಳಿದ್ದಾರೆ. ಯಶ್ ಅವರು ‘ಕೆಜಿಎಫ್ 3’ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬ ವದಂತಿಯೂ ಇದೆ. ಈ ಬಗ್ಗೆಯೂ ನರ್ತನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿನಿಮಾ ರಂಗ ಎಂದಮೇಲೆ ವದಂತಿಗಳು ಸಾಮಾನ್ಯ. ಇಲ್ಲಿ ಏನುಬೇಕಾದರೂ ಆಗಬಹುದು’ ಎಂದಷ್ಟೇ ಹೇಳಿದ್ದಾರೆ ನರ್ತನ್.

ಇದನ್ನೂ ಓದಿ: ಪ್ರಶಾಂತ್ ನೀಲ್ ಹೊಸ ಸಿನಿಮಾದಲ್ಲಿ ನಟಿಸ್ತಾರಾ ಯಶ್?​; ಹರಿದಾಡುತ್ತಿದೆ ಹೊಸ ಸುದ್ದಿ

ಶಿವರಾಜ್​ಕುಮಾರ್ ಹಾಗೂ ಶ್ರೀಮುರಳಿ ನಟನೆಯ ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ನರ್ತನ್ ಅವರು ಸಾಕಷ್ಟು ಗಮನ ಸೆಳೆದರು. ಅವರಿಗೆ ಈ ಚಿತ್ರ ಸಾಕಷ್ಟು ಖ್ಯಾತಿ ನೀಡಿತು. ಈಗ ಅವರು ನಿರ್ದೇಶನ ಮಾಡಲಿರುವ ಮುಂದಿನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ. ಯಶ್ 19ನೇ ಚಿತ್ರಕ್ಕೆ ನರ್ತನ್​ ಅವರೇ ಡೈರೆಕ್ಷನ್ ಮಾಡುತ್ತಾರಾ ಅಥವಾ ಬೇರೆ ಚಿತ್ರವನ್ನು ಅವರು ಘೋಷಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.

Published On - 5:27 pm, Thu, 14 July 22

ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!
ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!
ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ತಪ್ಪಿದ ಭಾರೀ ದುರಂತ
ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ತಪ್ಪಿದ ಭಾರೀ ದುರಂತ
ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ!
ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ!
Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ
Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ
ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!
ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಆಮೇಲೇನಾಯ್ತು ನೋಡಿ
ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಆಮೇಲೇನಾಯ್ತು ನೋಡಿ
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?
ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ವೈರಲ್
ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ವೈರಲ್