AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರ ಮಕ್ಕಳು ಮಾತನಾಡಿದ ದಿನ ಅವರ ಆಟ ಮುಗಿಯುತ್ತದೆ: ರಾಜ್​ಕುಮಾರ್ ಪುತ್ರಿ ಪೂರ್ಣಿಮಾ

Dr Rajkumar: ರಾಜ್​ಕುಮಾರ್ ಘನತೆಗೆ ಧಕ್ಕೆ ತರಲು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವ್ಯಕ್ತಿಗಳ ಬಗ್ಗೆ ರಾಜ್​ಕುಮಾರ್ ಪುತ್ರಿ, ರಾಮ್​ಕುಮಾರ್ ಪತ್ನಿ ಪೂರ್ಣಿಮಾ ರಾಮ್​ಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಅಣ್ಣಾವ್ರ ಮಕ್ಕಳು ಮಾತನಾಡಿದ ದಿನ ಅವರ ಆಟ ಮುಗಿಯುತ್ತದೆ: ರಾಜ್​ಕುಮಾರ್ ಪುತ್ರಿ ಪೂರ್ಣಿಮಾ
ಡಾ ರಾಜ್​ಕುಮಾರ್ ಕುಟುಂಬ
ಮಂಜುನಾಥ ಸಿ.
|

Updated on: Jun 03, 2023 | 5:35 PM

Share

ಡಾ ರಾಜ್​ಕುಮಾರ್ (Dr Rajkumar) ಕರ್ನಾಟಕದ ಮೇರು ಪ್ರತಿಭೆ, ಅವರನ್ನು ದೇವರೆಂದೇ ಭಾವಿಸಿರುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ರಾಜ್​ಕುಮಾರ್ ಕುಟುಂಬವನ್ನು ದೊಡ್ಮನೆ ಕುಟುಂಬವೆಂದು ಕರೆದು ಗೌರವ ನೀಡಿದ್ದಾರೆ ಅಭಿಮಾನಿಗಳು. ಆದರೆ, ಹಣ್ಣಿನ ಮರಕ್ಕೆ ಕಲ್ಲು ಹೆಚ್ಚು ಎಂಬಂತೆ ಅಣ್ಣಾವ್ರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲವು ಸುದ್ದಿಗಳನ್ನು ಕೆಲವರು ಆಗಾಗ್ಗೆ ಹರಿ ಬಿಡುತ್ತಿರುತ್ತಾರೆ. ಆದರೆ ಆ ಬಗ್ಗೆ ಈ ವರೆಗೆ ದೊಡ್ಮನೆ ಕುಟುಂಬದವರು ಪ್ರತಿಕ್ರಿಯಿಸಿಲ್ಲ. ಇದೀಗ ರಾಜ್​ಕುಮಾರ್-ಪಾರ್ವತಮ್ಮ ರಾಜ್​ಕುಮಾರ್ (Parvathamma Rajkumar) ಪುತ್ರಿ ಪೂರ್ಣಿಮಾ (Poornima Ramkumar) ಈ ಬಗ್ಗೆ ಮಾತನಾಡಿದ್ದಾರೆ.

ಯೂಟ್ಯೂಬ್ ಚಾನೆಲ್​ ಒಂದಕ್ಕೆ ಸಂದರ್ಶನ ನೀಡಿರುವ ಪೂರ್ಣಿಮಾ ರಾಮ್​ಕುಮಾರ್, ಕೆಟ್ಟದ್ದು ಮಾಡುವುದಕ್ಕೆಂದೇ ಕೆಲವರು ಹುಟ್ಟಿಕೊಂಡಿರುತ್ತಾರೆ. ಅವರ ಕೆಲಸವೇ ಕೆಟ್ಟದು ಮಾಡುವುದು, ಕೆಟ್ಟದ್ದು ಮಾತನಾಡುವುದು. ಅದಕ್ಕೆ ನಾವಾಗಲಿ, ನಮ್ಮ ಕುಟುಂಬದ ಅಭಿಮಾನಿಗಳಾಗಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್​ಕುಮಾರ್ ಮಕ್ಕಳಿಗೆ ಮಾತನಾಡಲು ಬರುವುದಿಲ್ಲ ಎಂದೇನೂ ಇಲ್ಲ. ನಮಗೂ ಮಾತನಾಡಲು ಬರುತ್ತದೆ, ನಮಗೂ ಸತ್ಯ ಗೊತ್ತಿದೆ, ಗೊತ್ತಿಲ್ಲದೇ ಏನೂ ಇಲ್ಲ. ನಮ್ಮ ಬಗ್ಗೆ ಕುಟುಂಬದ ಬಗ್ಗೆ ಯಾರಾದರೂ ಮಾತನಾಡಬೇಕಾದರೆ ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ನೀವು ಎಷ್ಟೆ ಸುಳ್ಳು ಹೇಳಿಕೊಂಡು ಬಂದರೂ ಎಲ್ಲೋ ಒಂದು ಮಾತಿನಲ್ಲಿ ನಿಜ ನಿಮಗೇ ಗೊತ್ತಿಲ್ಲದೆ ಬಾಯಿಂದ ಬಂದು ನಿಜ ಗೊತ್ತಾಗಿಬಿಡುತ್ತದೆ” ಎಂದಿದ್ದಾರೆ ಪೂರ್ಣಿಮಾ ರಾಮ್​ಕುಮಾರ್.

”ಅಪ್ಪಾಜಿ, ಅಪ್ಪು, ಅಮ್ಮ ಸೆಲೆಬ್ರಿಟಿಗಳು, ಅವರ ಹೆಸರು ಬಳಸಿದರೆ ಜನಪ್ರಿಯರಾಗುತ್ತೇವೆ, ಒಂದಿಷ್ಟು ಹಣ ಮಾಡಬಹುದು ಎಂಬುದು ಗೊತ್ತಿರುವುದರಿಂದ ಕೆಲವರು ಅವರ ಹೆಸರು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಮಾಡಲಿ, ಆದರೆ ಅದು ಅವರಿಗೆ ಶ್ರೇಯಸ್ಸು ತರುವುದಿಲ್ಲ. ಅಪ್ಪಾಜಿ-ಅಮ್ಮ ಇದ್ದಾಗ ನಮ್ಮ ಮನೆಯಲ್ಲಿ ಎಂದೂ ಈ ಬಗ್ಗೆ ಚರ್ಚೆ ಆಗಿರಲಿಲ್ಲ. ಎಂದಿಗೂ ನಮ್ಮ ಅಪ್ಪ-ಅಮ್ಮ ಸಹ ಅವರ ಬಗ್ಗೆ ಹರಡಿರುವ ಸುದ್ದಿಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಎಂದಿಗೂ ಅವರು ಹೀಗೆ ಇವರು ಹಾಗೆ ಎಂದು ಸಹ ಹೇಳಿಕೊಂಡಿದ್ದನ್ನು ನಾವು ಕೇಳಿಸಿಕೊಂಡಿಲ್ಲ. ನಮಗೆ ಬೆಂಗಳೂರಿನಲ್ಲಿ ಏನು ನಡೆಯುತ್ತಿದೆ ಎಂಬುದು ಸಹ ಗೊತ್ತಿರಲಿಲ್ಲ” ಎಂದಿದ್ದಾರೆ ಪೂರ್ಣಿಮಾ.

”ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಹೇಳುವುದೇನೆಂದರೆ, ಅಪ್ಪಾಜಿ-ಅಮ್ಮನ ಹೆಸರು ಅಳಿಸುವುದು ಯಾರ ಕೈಯಿಂದಲೂ ಸಾಧ್ಯವಿಲ್ಲ. ಅದು ಅವರ ಹಣೆಯಲ್ಲಿ ಬರೆದಿಲ್ಲ. ಸುಮ್ಮನೆ ಸಮಯ ವ್ಯರ್ಥ ಮಾಡಿಕೋಳ್ಳುತ್ತಿದ್ದಾರೆ. ರಾಜ್​ಕುಮಾರ್ ಎಂಬುದು ಅವರಿಗೆ ಅಭಿಮಾನಿಗಳು ಇಟ್ಟಿರುವ ಹೆಸರು ಅದು. ಜನರು ಅವರ ಸುಳ್ಳುಗಳನ್ನು ನಂಬುವುದಿಲ್ಲ. ನಾವು ಮಾತನಾಡಬಲ್ಲೆವು ಆದರೆ ಬೇಡ, ನಾವು ಉತ್ತರ ಕೊಟ್ಟರೆ ಅವರು ತಡೆದುಕೊಳ್ಳಲು ಆಗಲ್ಲ, ನಾವು ಮಾತನಾಡದೆ ಇರುವವರೆಗೆ ಅಷ್ಟೆ ಅವರಿಗೆ ಕ್ಷೇಮ, ನಾವು ಮಾತನಾಡಿದರೆ ಅಂದಿಗೆ ಅವರ ಆಟ ಮುಗಿಯುತ್ತದೆ” ಎಂದು ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ ಪೂರ್ಣಿಮಾ ರಾಮ್​ಕುಮಾರ್.

ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಅವರ ಪುತ್ರಿ ಪೂರ್ಣಿಮಾ. ಇವರು ಕನ್ನಡದ ಜನಪ್ರಿಯ ನಾಯಕ ನಟ ರಾಮ್​ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಧನ್ಯಾ ಹಾಗೂ ಧೀರೆನ್ ಹೆಸರಿನ ಮಕ್ಕಳಿದ್ದು ಇಬ್ಬರೂ ಸಹ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಪೂರ್ಣಿಮಾ ಅವರು ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,