ವೀರಪ್ಪನ್ ಸಹಚರರಿಗೂ ಕನ್ನಡದಲ್ಲಿ ಬಸವಣ್ಣನ ವಚನ ಕಲಿಸಿದ್ದ ಡಾ. ರಾಜ್​ಕುಮಾರ್

ಕೋಟ್ಯಂತರ ಅಭಿಮಾನಿಗಳು ಆರಾಧಿಸುವ ಡಾ. ರಾಜ್​ಕುಮಾರ್​ ಅವರನ್ನು ವೀರಪ್ಪನ್​ ಅಪಹರಣ ಮಾಡಿದ ಘಟನೆ ನಡೆದು 24 ವರ್ಷಗಳು ಉರುಳಿವೆ. ಎಂಥ ಪರಿಸ್ಥಿತಿಯಲ್ಲೂ ರಾಜ್​ಕುಮಾರ್​ ಅವರು ತಮ್ಮತನವನ್ನು ಕಳೆದುಕೊಳ್ಳುವವರಲ್ಲ. ಆ ಮಾತಿಗೆ ಹಲವು ಉದಾಹರಣೆಗಳು ಇವೆ. ತಮಿಳು ಮಾತನಾಡುವ ವೀರಪ್ಪನ್​ ಸಹಚರರಿಗೆ ಅಣ್ಣಾವ್ರು ಕನ್ನಡದ ವಚನವನ್ನು ಹೇಳಿಕೊಟ್ಟಿದ್ದರು.

ವೀರಪ್ಪನ್ ಸಹಚರರಿಗೂ ಕನ್ನಡದಲ್ಲಿ ಬಸವಣ್ಣನ ವಚನ ಕಲಿಸಿದ್ದ ಡಾ. ರಾಜ್​ಕುಮಾರ್
ಬಸವಣ್ಣ, ಕಾಡಿನಲ್ಲಿ ವೀರಪ್ಪನ್​ ಹಾಗೂ ಸಹಚರರ ಜೊತೆ ರಾಜ್​ಕುಮಾರ್​
Follow us
|

Updated on:Aug 04, 2024 | 10:15 PM

ಕನ್ನಡದ ಮೇರು ನಟ ಡಾ. ರಾಜ್​ಕುಮಾರ್​ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದು ಒಂದು ಕರಾಳ ಅಧ್ಯಾಯ. ಇಳಿ ವಯಸ್ಸಿನಲ್ಲಿ ರಾಜ್​ಕುಮಾರ್​ ಅವರು ಅಂಥ ದಟ್ಟ ಕಾಡಿನಲ್ಲಿ ಕಾಲ ಕಳೆಯುವಂತೆ ಆಗಿದ್ದು ವಿಪರ್ಯಾಸ. ಪಾಸಿಟಿವ್​ ಮನಸ್ಥಿತಿಗೆ ರಾ. ರಾಜ್​ಕುಮಾರ್​ ಅವರು ಹೆಸರಾಗಿದ್ದರು. ಕ್ರೂರಿಯಾಗಿದ್ದ ವೀರಪ್ಪನ್​ ಜೊತೆ 108 ದಿನಗಳನ್ನು ಕಳೆದರೂ ಕೂಡ ಅಣ್ಣಾವ್ರು ತಮ್ಮತನವನ್ನು ಬಿಟ್ಟುಕೊಡಲಿಲ್ಲ. ತಮಿಳು ಮಾತನಾಡುವ ವೀರಪ್ಪನ್ ಸಹಚರರಿಗೂ ರಾಜ್​ಕುಮಾರ್​ ಅವರು ಕನ್ನಡದ ವಚನಗಳನ್ನು ಕಲಿಸಿದ್ದರು. ಆ ವಿಡಿಯೋ ನೋಡಿದರೆ ಡಾ. ರಾಜ್​ ಬಗ್ಗೆ ಇರುವ ಗೌರವ ಮತ್ತಷ್ಟು ಹೆಚ್ಚುತ್ತದೆ.

2000ನೇ ಇಸವಿಯ ಜುಲೈ 30ರಂದು ರಾಜ್​ಕುಮಾರ್​ ಅವರನ್ನು ವೀರಪ್ಪನ್​ ಅಪಹರಣ ಮಾಡಿದ. ಆ ಘಟನೆಯಿಂದ ಕರುನಾಡಿನಲ್ಲಿ ಸಂಚಲನ ಸೃಷ್ಟಿಯಾಯಿತು. ಅಣ್ಣಾವ್ರ ಅಭಿಮಾನಿಗಳಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚಾಯಿತು. ದೇಶಾದ್ಯಂತ ಸುದ್ದಿಯಾದ ಅಪಹರಣ ಕೃತ್ಯ ಅದು. ಕಡೆಗೂ ರಾಜ್​ಕುಮಾರ್​ ಅವರು ಸುರಕ್ಷಿತವಾಗಿ ಮರಳಿಬಂದ ನಂತರವೇ ಕರುನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದು. ಕಾಡಿನಲ್ಲಿ ಇದ್ದರೂ ರಾಜ್​ಕುಮಾರ್​ ಅವರು ಕನ್ನಡದ ಜಪವನ್ನು ಬಿಟ್ಟಿರಲಿಲ್ಲ.

ವೀರಪ್ಪನ್​ ಸಹಚರರು ತಮಿಳುನಾಡಿನವರು. ಅವರಿಗೆ ಅಣ್ಣಾವ್ರು ಕನ್ನಡದ ವಚನಗಳನ್ನು ಹೇಳಿಕೊಟ್ಟಿದ್ದರು. ಶಾಲೆಗೆ ತೆರಳಿ ಹೆಚ್ಚಿನ ವ್ಯಾಸಾಂಗ ಮಾಡದಿದ್ದರೂ ಕೂಡ ಅಣ್ಣಾವ್ರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಇತ್ತು. ಹಲವಾರು ಪುಸ್ತಕಗಳನ್ನು ಅವರು ಓದಿ ತಿಳಿದಿದ್ದರು. ಬಸವಣ್ಣನ ವಚನಗಳು ಅವರಿಗೆ ಕಂಠಪಾಠ ಆಗಿದ್ದವು. ಆ ಪೈಕಿ ಒಂದು ವಚನವನ್ನು ಅವರು ವೀರಪ್ಪನ್​ನ ಸಹಚರರಿಗೆ ಹೇಳಿಕೊಟ್ಟಿದ್ದರು.

‘ನೂರನೋದಿ ನೂರ ಕೇಳಿದರೇನು? ಆಸೆ ಹರಿಯದು, ರೋಷ ಬಿಡದು. ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ’ ಎಂಬ ವಚನವನ್ನು ರಾಜ್​ಕುಮಾರ್​ ಅವರು ಕಾಡುಗಳ್ಳನ ಸಹಚರರಿಗೆ ವಿವರಿಸಿ ಹೇಳಿದ್ದರು. ಅರ್ಥವಾಗಲಿ ಎಂಬ ಕಾರಣಕ್ಕೆ ಈ ಸಾಲುಗಳನ್ನು ಅವರು ತಮಿಳಿಗೂ ಭಾಷಾಂತರ ಮಾಡಿ ವಿವರಿಸಿದ್ದರು.

ಇದನ್ನೂ ಓದಿ: ಡಾ.ರಾಜ್​ಕುಮಾರ್​ ಬಿಡುಗಡೆಗೆ ಕರ್ನಾಟಕ ಸರ್ಕಾರದಿಂದ ವೀರಪ್ಪನ್​ಗೆ ಪಾವತಿಯಾಗಿತ್ತು ₹15 ಕೋಟಿ! ಪುಸ್ತಕ ಬಿಚ್ಚಿಟ್ಟ ಸತ್ಯ

ಕನ್ನಡ ಎಂದರೆ ಡಾ. ರಾಜ್​ಕುಮಾರ್​. ಅದೇ ರೀತಿ, ಡಾ. ರಾಜ್​ಕುಮಾರ್​ ಎಂದರೆ ಕನ್ನಡ ಎಂಬುದು ಅಭಿಮಾನಿಗಳ ಭಾವನೆ. ಅಷ್ಟರಮಟ್ಟಿಗೆ ಅಣ್ಣಾವ್ರು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಸಿನಿಮಾಗಳ ಮೂಲಕ, ಹಾಡುಗಳು ಮೂಲಕ, ಭಕ್ತಿಗೀತೆಗಳ ಮೂಲಕ ಕನ್ನಡದ ಸಿರಿವಂತಿಕೆಯನ್ನು ರಾಜ್​ಕುಮಾರ್​ ಹೆಚ್ಚಿಸಿದರು. ಎಷ್ಟೋ ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾ ಮಾಡುವ ಮೂಲಕ ಆ ಕೃತಿಗಳಿಗೆ ಹೊಸ ಸ್ಪರ್ಶ ನೀಡಿದರು. ಈ ಎಲ್ಲ ಕಾರಣಗಳಿಂದಾಗಿ ಅಣ್ಣಾವ್ರನ್ನು ಕನ್ನಡಿಗರು ಕೊಂಡಾಡಲೇಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:14 pm, Sun, 4 August 24

ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್