ಬಿಡುಗಡೆ ಆಯ್ತು ‘ಭೀಮ’ ಟ್ರೈಲರ್, ಇದು ಬೆಂಗಳೂರಿನ ಗಲ್ಲಿಗಳ ಕತೆ

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ‘ಭೀಮ’ ಟ್ರೈಲರ್ ಇಂದು (ಆಗಸ್ಟ್ 3) ಬಿಡುಗಡೆ ಆಗಿದೆ. ಸಿನಿಮಾವು ಆಗಸ್ಟ್ 9ರಂದು ಬಿಡುಗಡೆ ಆಗಲಿದೆ. ‘ಭೀಮ’ ಸಿನಿಮಾ ಬೆಂಗಳೂರಿನ ಕರಾಳ ಗಲ್ಲಿಗಳ ಕತೆಯಂತೆ ತೋರುತ್ತಿದೆ.

ಬಿಡುಗಡೆ ಆಯ್ತು ‘ಭೀಮ’ ಟ್ರೈಲರ್, ಇದು ಬೆಂಗಳೂರಿನ ಗಲ್ಲಿಗಳ ಕತೆ
ಭೀಮ ಸಿನಿಮಾ
Follow us
|

Updated on: Aug 03, 2024 | 9:38 PM

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 03) ಬಿಡುಗಡೆ ಆಗಿದೆ. ‘ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದ್ದು, ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ದುನಿಯಾ ವಿಜಯ್ ಕಟ್ಟಿದ್ದಾರೆ. ಈ ಹಿಂದೆ ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದು, ಅದೇ ಭರವಸೆಯಲ್ಲಿ ಸಿನಿಮಾದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಿದ್ದಾರೆ. ‘ಸಲಗ’ದ ರೀತಿಯಲ್ಲಿಯೇ ಇದು ಸಹ ರೌಡಿಗಳನ್ನು ಹೆಚ್ಚು ಹತ್ತಿರದಿಂದ ನೋಡುವ ಕತೆಯಂತೆ ತೋರುತ್ತಿದೆ.

‘ಸಲಗ’ ಸಿನಿಮಾದಲ್ಲಿ ರೌಡಿಗಳ ಬದುಕನ್ನು ಹತ್ತಿರದಿಂದ ತೋರಿಸುವ ಪ್ರಯತ್ನವನ್ನು ದುನಿಯಾ ವಿಜಯ್ ಮಾಡಿದ್ದರು. ಬೆಂಗಳೂರಿನ ಗಲ್ಲಿಗಳಲ್ಲಿ ನಡೆಯುವ ರೌಡಿಸಂನ ಕತೆಗಳನ್ನು ‘ಸಲಗ’ ಸಿನಿಮಾದಲ್ಲಿ ಹೇಳುವುದರ ಜೊತೆಗೆ ಒಂದು ರಿವೇಂಜ್ ಡ್ರಾಮಾ ಅನ್ನೂ ಸಹ ಸೃಷ್ಟಿಸಿದ್ದರು. ಈಗ ಬಿಡುಗಡೆ ಆಗಿರುವ ‘ಭೀಮ’ ಸಿನಿಮಾದ ಟ್ರೈಲರ್​ನಲ್ಲಿಯೂ ಸಹ ಅಲ್ಲಲ್ಲಿ ‘ಸಲಗ’ದ ಛಾಯೆ ಕಾಣುತ್ತಿದೆ. ಇದೂ ಸಹ ಬೆಂಗಳೂರಿನ ಕರಾಳ ಗಲ್ಲಿಗಳ ಕತೆಯೇ ಎಂಬುದನ್ನಂತೂ ಟ್ರೈಲರ್ ಸಾರಿ ಹೇಳುತ್ತಿದೆ. ಜೊತೆಗೆ ಸ್ವಲ್ಪ ನಾಯಕನ ವೈಭವೀಕರಣವೂ ಇದ್ದಂತೆ ತೋರುತ್ತಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಭೇಟಿಯಾದ ದುನಿಯಾ ವಿಜಿ, ‘ಭೀಮ’ ವೀಕ್ಷಿಸಲು ಆಹ್ವಾನ

ರೌಡಿಗಳ ಕೊಳಕು ವ್ಯಕ್ತಿತ್ವ, ಹಸಿ ಸಂಭಾಷಣೆ, ರಕ್ತದ ಕಮಟು, ಪೊಲೀಸರ ಒರಟುತನ, ರೌಡಿಗಳ ಕೊಳಕುತನ ಎಲ್ಲದರ ಝಲಕ್ ಅನ್ನು ಟ್ರೈಲರ್​ ಅಲ್ಲ ತೋರಿಸಲಾಗಿದೆ. ಜೊತೆಗೆ ದುನಿಯಾ ವಿಜಯ್ ರ ಕೆಲವು ಹೀರೋಯಿಕ್ ಮೂಮೆಂಟ್​ಗಳನ್ನು ಸಹ ಸೇರಿಸಲಾಗಿದೆ. ‘ಸಲಗ’ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರನ್ನು ಪವರ್​ಫುಲ್ ಪೊಲೀಸ್ ಆಗಿ ತೋರಿಸಲಾಗಿತ್ತು, ಆದರೆ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಹೊರತಾಗಿ ಇನ್ನೊಂದು ಪವರ್​ಫುಲ್ ಪಾತ್ರ ಇದ್ದಂತಿಲ್ಲ.

ಇಂದು (ಆಗಸ್ಟ್ 03) ನಗರದಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ದುನಿಯಾ ವಿಜಯ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭಾಗಿಯಾಗಿದ್ದರು ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಇನ್ನೂ ಕೆಲವರು ಭಾಗಿಯಾಗಿ ದುನಿಯಾ ವಿಜಯ್​ಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಭೀಮ’ ಸಿನಿಮಾ ಆಗಸ್ಟ್ 9ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ