AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದರೂ ಕಡಿಮೆಯಾಗಿಲ್ಲ ಬ್ಯೂಟಿ, ಸ್ಯಾರಿಯಲ್ಲಿ ಮೋಡಿ ಮಾಡಿದ ಗ್ಲಾಮರಸ್ ಸಮಂತಾ

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಗೆ ತಮ್ಮ ಗ್ಲಾಮರಸ್ ಲುಕ್, ಗೆಟಪ್ ಎಲ್ಲವನ್ನೂ ಮೆಂಟೇನ್ ಮಾಡಿ ಸದಾ ಪೋಜ್ ಕೊಡ್ತಾ ಇರಬೇಕು ಅನ್ನೋ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ತಮಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ನಟಿ ಸಮಂತಾ ಪ್ರೂವ್ ಮಾಡಿದ್ದಾರೆ. ಟಾಲಿವುಡ್​ನ ಗ್ಲಾಮರಸ್ ಬೆಡಗಿಯರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿರೋ ನಟಿಮಣಿಯರ ಪಟ್ಟಿ ಮಾಡ್ತಾ ಹೋದ್ರೆ ಆ ಸಾಲಿಗೆ ನಟಿ ಸಮಂತಾ ಸೇರ್ತಾರೆ. ಮದುವೆ ಆಗಿದ್ರೂ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ […]

ಮದುವೆಯಾದರೂ ಕಡಿಮೆಯಾಗಿಲ್ಲ ಬ್ಯೂಟಿ, ಸ್ಯಾರಿಯಲ್ಲಿ ಮೋಡಿ ಮಾಡಿದ ಗ್ಲಾಮರಸ್ ಸಮಂತಾ
ಸಾಧು ಶ್ರೀನಾಥ್​
|

Updated on: Jan 06, 2020 | 3:12 PM

Share

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಗೆ ತಮ್ಮ ಗ್ಲಾಮರಸ್ ಲುಕ್, ಗೆಟಪ್ ಎಲ್ಲವನ್ನೂ ಮೆಂಟೇನ್ ಮಾಡಿ ಸದಾ ಪೋಜ್ ಕೊಡ್ತಾ ಇರಬೇಕು ಅನ್ನೋ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ತಮಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ನಟಿ ಸಮಂತಾ ಪ್ರೂವ್ ಮಾಡಿದ್ದಾರೆ.

ಟಾಲಿವುಡ್​ನ ಗ್ಲಾಮರಸ್ ಬೆಡಗಿಯರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿರೋ ನಟಿಮಣಿಯರ ಪಟ್ಟಿ ಮಾಡ್ತಾ ಹೋದ್ರೆ ಆ ಸಾಲಿಗೆ ನಟಿ ಸಮಂತಾ ಸೇರ್ತಾರೆ. ಮದುವೆ ಆಗಿದ್ರೂ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದಕ್ಕೆ ಸಮಂತ ಸೀರೆಯಲ್ಲಿ ಫೋಟೋ ಶೂಟ್ ಮಾಡಿ ಕಮಾಲ್ ಮಾಡಿರೋದೇ ಸಾಕ್ಷಿ.

ಸಮಂತಾ ಕೇವಲ ತಮ್ಮ ಗ್ಲಾಮರ್​ನಿಂದ ಮಾತ್ರವಲ್ಲಾ, ವೆರೈಟಿ ಪಾತ್ರಗಳಿಂದ ಇಡೀ ಸಿನಿ ದುನಿಯಾದಲ್ಲೇ ಕ್ರೇಜ್ ಉಳಿಸಿಕೊಂಡಿರೋ ನಟಿ. ಆದ್ರೆ, ನಾಗಚೈತನ್ಯ ಜೊತೆ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಮಂತಾಗೆ ಬೇಡಿಕೆ ಕಡಿಮೆಯಾಯ್ತು ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೀಗ, ಸಮಂತಾ ಮಾತ್ರ ಒಂದಿಷ್ಟು ವೆರೈಟಿ ಸಿನಿಮಾಗಳಲ್ಲಿ ನಟಿಸ್ತಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಲೇ, ನನಗಿನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಯಾವ ಹೀರೋಯಿನ್​ಗಳಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸ್ತಾರೆ.

ಸಮಂತಾ ಕಲರ್​ಫುಲ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿರೋದು ಸಂಚಲನ ಮೂಡಿಸಿದೆ. ಥೇಟ್ ಬಳುಕುವ ಬಳ್ಳಿಯಂತೆ ಪೋಜ್ ಕೊಟ್ಟಿದ್ದಾರೆ, ಈಕೆಯ ಗ್ಲಾಮರಸ್ ಲುಕ್ ನೋಡಿ ಕೆಲ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಮದುವೆ ಆದ ನಂತ್ರ ಈ ರೀತಿ ಪೋಸ್ ಬೇಕಿತ್ತಾ ಅಂತಾ ಮಾತನಾಡಿಕೊಳ್ತಿದ್ದಾರಂತೆ.

ಒಟ್ಟಾರೆ ಸದ್ಯಕ್ಕಂತೂ ಸಮಂತಾ ಗ್ಲಾಮರಸ್ ಲುಕ್… ಗೆಟಪ್ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಹಾಗಾದ್ರೆ, ಸದ್ದಿಲ್ಲದೇ ಸಮಂತಾ ಯಾವುದಾದ್ರೂ ಸಿನಿಮಾದಲ್ಲಿ ಅಭಿನಯಿಸೋಕೆ ಈ ರೀತಿ ಮಾಡಿದ್ದಾರಾ ಅನ್ನೋ ಅನುಮಾನ ಕಾಡ್ತಿದ್ದು, ಇದೆಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ