AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದರೂ ಕಡಿಮೆಯಾಗಿಲ್ಲ ಬ್ಯೂಟಿ, ಸ್ಯಾರಿಯಲ್ಲಿ ಮೋಡಿ ಮಾಡಿದ ಗ್ಲಾಮರಸ್ ಸಮಂತಾ

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಗೆ ತಮ್ಮ ಗ್ಲಾಮರಸ್ ಲುಕ್, ಗೆಟಪ್ ಎಲ್ಲವನ್ನೂ ಮೆಂಟೇನ್ ಮಾಡಿ ಸದಾ ಪೋಜ್ ಕೊಡ್ತಾ ಇರಬೇಕು ಅನ್ನೋ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ತಮಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ನಟಿ ಸಮಂತಾ ಪ್ರೂವ್ ಮಾಡಿದ್ದಾರೆ. ಟಾಲಿವುಡ್​ನ ಗ್ಲಾಮರಸ್ ಬೆಡಗಿಯರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿರೋ ನಟಿಮಣಿಯರ ಪಟ್ಟಿ ಮಾಡ್ತಾ ಹೋದ್ರೆ ಆ ಸಾಲಿಗೆ ನಟಿ ಸಮಂತಾ ಸೇರ್ತಾರೆ. ಮದುವೆ ಆಗಿದ್ರೂ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ […]

ಮದುವೆಯಾದರೂ ಕಡಿಮೆಯಾಗಿಲ್ಲ ಬ್ಯೂಟಿ, ಸ್ಯಾರಿಯಲ್ಲಿ ಮೋಡಿ ಮಾಡಿದ ಗ್ಲಾಮರಸ್ ಸಮಂತಾ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 06, 2020 | 3:12 PM

Share

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಗೆ ತಮ್ಮ ಗ್ಲಾಮರಸ್ ಲುಕ್, ಗೆಟಪ್ ಎಲ್ಲವನ್ನೂ ಮೆಂಟೇನ್ ಮಾಡಿ ಸದಾ ಪೋಜ್ ಕೊಡ್ತಾ ಇರಬೇಕು ಅನ್ನೋ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ತಮಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ನಟಿ ಸಮಂತಾ ಪ್ರೂವ್ ಮಾಡಿದ್ದಾರೆ.

ಟಾಲಿವುಡ್​ನ ಗ್ಲಾಮರಸ್ ಬೆಡಗಿಯರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿರೋ ನಟಿಮಣಿಯರ ಪಟ್ಟಿ ಮಾಡ್ತಾ ಹೋದ್ರೆ ಆ ಸಾಲಿಗೆ ನಟಿ ಸಮಂತಾ ಸೇರ್ತಾರೆ. ಮದುವೆ ಆಗಿದ್ರೂ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದಕ್ಕೆ ಸಮಂತ ಸೀರೆಯಲ್ಲಿ ಫೋಟೋ ಶೂಟ್ ಮಾಡಿ ಕಮಾಲ್ ಮಾಡಿರೋದೇ ಸಾಕ್ಷಿ.

ಸಮಂತಾ ಕೇವಲ ತಮ್ಮ ಗ್ಲಾಮರ್​ನಿಂದ ಮಾತ್ರವಲ್ಲಾ, ವೆರೈಟಿ ಪಾತ್ರಗಳಿಂದ ಇಡೀ ಸಿನಿ ದುನಿಯಾದಲ್ಲೇ ಕ್ರೇಜ್ ಉಳಿಸಿಕೊಂಡಿರೋ ನಟಿ. ಆದ್ರೆ, ನಾಗಚೈತನ್ಯ ಜೊತೆ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಮಂತಾಗೆ ಬೇಡಿಕೆ ಕಡಿಮೆಯಾಯ್ತು ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೀಗ, ಸಮಂತಾ ಮಾತ್ರ ಒಂದಿಷ್ಟು ವೆರೈಟಿ ಸಿನಿಮಾಗಳಲ್ಲಿ ನಟಿಸ್ತಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಲೇ, ನನಗಿನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಯಾವ ಹೀರೋಯಿನ್​ಗಳಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸ್ತಾರೆ.

ಸಮಂತಾ ಕಲರ್​ಫುಲ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿರೋದು ಸಂಚಲನ ಮೂಡಿಸಿದೆ. ಥೇಟ್ ಬಳುಕುವ ಬಳ್ಳಿಯಂತೆ ಪೋಜ್ ಕೊಟ್ಟಿದ್ದಾರೆ, ಈಕೆಯ ಗ್ಲಾಮರಸ್ ಲುಕ್ ನೋಡಿ ಕೆಲ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಮದುವೆ ಆದ ನಂತ್ರ ಈ ರೀತಿ ಪೋಸ್ ಬೇಕಿತ್ತಾ ಅಂತಾ ಮಾತನಾಡಿಕೊಳ್ತಿದ್ದಾರಂತೆ.

ಒಟ್ಟಾರೆ ಸದ್ಯಕ್ಕಂತೂ ಸಮಂತಾ ಗ್ಲಾಮರಸ್ ಲುಕ್… ಗೆಟಪ್ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಹಾಗಾದ್ರೆ, ಸದ್ದಿಲ್ಲದೇ ಸಮಂತಾ ಯಾವುದಾದ್ರೂ ಸಿನಿಮಾದಲ್ಲಿ ಅಭಿನಯಿಸೋಕೆ ಈ ರೀತಿ ಮಾಡಿದ್ದಾರಾ ಅನ್ನೋ ಅನುಮಾನ ಕಾಡ್ತಿದ್ದು, ಇದೆಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಿದೆ.

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​