AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಮನೆಯಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ ಹೆಚ್​ಡಿ ದೇವೇಗೌಡ

HD Deve Gowda: ಪುನೀತ್ ಇತ್ತೀಚೆಗೆ ಬೆಟ್ಟದ ಹೂವು ಚಿತ್ರೀಕರಣವಾದ ಸ್ಥಳಕ್ಕೆ ಹೋಗಿ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಒಂದು ತಲೆಮಾರಿನ ಜನರಿಗೆ ಪುನೀತ್ ಎಂದರೆ ಅದು ಬೆಟ್ಟದ ಹೂವು.

Puneeth Rajkumar: ಮನೆಯಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ ಹೆಚ್​ಡಿ ದೇವೇಗೌಡ
ಮನೆಯಲ್ಲಿ ಬೆಟ್ಟದ ಹೂವು ಚಿತ್ರ ನೋಡಿದ ಹೆಚ್​ಡಿ ದೇವೇಗೌಡ
TV9 Web
| Updated By: ganapathi bhat|

Updated on:Oct 30, 2021 | 4:47 PM

Share

ಬೆಂಗಳೂರು: ಕನ್ನಡದ ಕಣ್ಮಣಿ, ಚಲನಚಿತ್ರ ರಂಗದ, ಅಭಿಮಾನಿಗಳ ಪ್ರೀತಿಯ ಅಪ್ಪು, ಪುನೀತ್ ರಾಜ್​ಕುಮಾರ್ ನಿನ್ನೆ (ಅಕ್ಟೋಬರ್ 29) ನಿಧನರಾಗಿದ್ದಾರೆ. ಪುನೀತ್ ನಿಧನ ಹೊಂದಿ ದಿನ ಕಳೆದರೂ ಅವರ ದರ್ಶನಕ್ಕೆ ಕಾದು ನಿಂತಿರುವ ಅಭಿಮಾನಿಗಳ ಸಾಲು ಮುಗಿಯುತ್ತಲೇ ಇಲ್ಲ. 80, 90, ಹಾಗೂ 2000ನೇ ದಶಕದ ಎಲ್ಲರ ಮೆಚ್ಚಿನ ನಟನಾಗಿದ್ದ ಪುನೀತ್ ರಾಜ್​ಕುಮಾರ್ ಜನತೆಯ ಜೊತೆಗೆ ಹೊಂದಿದ್ದ ಭಾವನಾತ್ಮಕ ನಂಟು ಇದಕ್ಕೆ ಕಾರಣ ಎಂದರೆ ತಪ್ಪಿಲ್ಲ. ಬಾಲನಟನಾಗಿಯೂ, ಗಾಯಕನಾಗಿಯೂ, ತಂದೆಯ ಜೊತೆಗೆ ಅಭಿನಯಿಸಿಯೂ, ಬಳಿಕ ಪವರ್ ಸ್ಟಾರ್ ಎಂದು ಲಕ್ಷಾಂತರ ಮಂದಿಯ ಅಭಿಮಾನಕ್ಕೆ ಪಾತ್ರವಾಗಿದ್ದು ಪುನೀತ್ ಹೆಗ್ಗಳಿಕೆ.

ಪುನೀತ್ ಬಾಲನಟನಾಗಿಯೂ ಪ್ರಸಿದ್ಧಿ ಪಡೆದವರು. ಅವರು ಬೆಟ್ಟದ ಹೂವು ಸಿನಿಮಾದ ನಟನೆಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದವರು. ಎನ್. ಲಕ್ಷ್ಮೀನಾರಾಯಾಣ ನಿರ್ದೇಶನದ ಈ ಸಿನಿಮಾ ಅಪಾರ ಪ್ರೀತಿ, ಜನಪ್ರಿಯತೆ ಗಳಿಸಿತ್ತು. ಬಾಲನಟನಾಗಿಯೇ ಮಿಂಚಿದ್ದ ಪುನೀತ್​ಗೆ ರಾಷ್ಟ್ರಪ್ರಶಸ್ತಿಯ ಗರಿಮೆಯನ್ನೂ ನೀಡಿತ್ತು. ಪುನೀತ್ ಬಗ್ಗೆ ಮಾತನಾಡುವಾಗ ಈ ಸಿನಿಮಾವನ್ನು ಹೇಳಲು ಬಿಟ್ಟರೆ ಅದು ಅಪೂರ್ಣ. ಪುನೀತ್ ಇತ್ತೀಚೆಗೆ ಬೆಟ್ಟದ ಹೂವು ಚಿತ್ರೀಕರಣವಾದ ಸ್ಥಳಕ್ಕೆ ಹೋಗಿ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಒಂದು ತಲೆಮಾರಿನ ಜನರಿಗೆ ಪುನೀತ್ ಎಂದರೆ ಅದು ಬೆಟ್ಟದ ಹೂವು.

ಈ ಬಗ್ಗೆ ಇಷ್ಟು ಹೇಳುವುದಕ್ಕೆ ಕಾರಣವಿದೆ. ಪುನೀತ್ ರಾಜ್​ಕುಮಾರ್ ಬಾಲನಟನಾಗಿ ಅಭಿನಯಿಸಿದ್ದ ಬೆಟ್ಟದ ಹೂವು ಸಿನಿಮಾವನ್ನು ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನೆಯಲ್ಲಿ ಕೂತು ವೀಕ್ಷಿಸಿದ್ದಾರೆ. ಪುನೀತ್ ನಿಧನದ ಹಿನ್ನೆಲೆಯಲ್ಲಿ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ್ದಾರೆ. ಆ ಮೂಲಕ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Puneeth-Rajkumar

ಪ್ರೇಮದ ಕಾಣಿಕೆ ಮತ್ತು ಬೆಟ್ಟದ ಹೂವು ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್

ಇದನ್ನೂ ಓದಿ: Puneeth Rajkumar: ಪುನೀತ್ ಸಾವಿಗೆ ಕಂಬನಿ ಮಿಡಿದ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು

ಇದನ್ನೂ ಓದಿ: ‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್​

Published On - 4:42 pm, Sat, 30 October 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ