AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಷ್ಟ ಇದ್ದರೂ ಸ್ವಾಭಿಮಾನದಿಂದ ಜೀವನ ಮಾಡಿದ್ದ ಹಿರಿಯ ನಟ ಉಮೇಶ್

ಕಷ್ಟಪಟ್ಟು ದುಡಿದು ಎಂ.ಎಸ್. ಉಮೇಶ್ ಅವರು ಜೀವನ ಸಾಗಿಸುತ್ತಿದ್ದರು. ಯಾರ ಬಳಿಯೂ ಅವರು ಕೈ ಚಾಚುತ್ತಿರಲಿಲ್ಲ. ಸರ್ಕಾರದಿಂದ ಸಹಾಯ ಸಿಗಲಿ ಎಂಬ ನಿರೀಕ್ಷೆ ಕೂಡ ಅವರಿಗೆ ಇರಲಿಲ್ಲ. ಆ ಕುರಿತು ಟಿವಿ9 ಜೊತೆ ಉಮೇಶ್ ಅವರು ಮಾತನಾಡಿದ್ದರು. ಆ ಸಂದರ್ಶನದ ವಿವರ ಇಲ್ಲಿದೆ..

ಕಷ್ಟ ಇದ್ದರೂ ಸ್ವಾಭಿಮಾನದಿಂದ ಜೀವನ ಮಾಡಿದ್ದ ಹಿರಿಯ ನಟ ಉಮೇಶ್
MS Umesh
Mangala RR
| Updated By: ಮದನ್​ ಕುಮಾರ್​|

Updated on: Nov 30, 2025 | 2:11 PM

Share

ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ (MS Umesh) ಅವರು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟನಾಗಿ ಅವರು ಕಲಾಸೇವೆ ಮಾಡಿದ್ದರು. 1960ರಿಂದಲೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. 80ನೇ ವಯಸ್ಸಿನಲ್ಲಿ ಕೂಡ ಅವರು ಸಿನಿಮಾಗಳಲ್ಲಿ ಅಭಿನಯಿಸುತ್ತ ಕುಟುಂಬಕ್ಕೆ ಆಧಾರ ಆಗಿದ್ದರು. ಎಂ.ಎಸ್. ಉಮೇಶ್ ಅವರದ್ದು ಸ್ವಾಭಿಮಾನದ ಬದುಕು. ಅಲ್ಲದೇ, ಜೀವನದಲ್ಲಿ ಅವರು ತೃಪ್ತಿ ಕಂಡಿದ್ದರು. ಎಷ್ಟು ಇದೆಯೋ ಅಷ್ಟರಲ್ಲೇ ನೆಮ್ಮದಿಯ ಜೀವನ ಮಾಡುವುದು ಹೇಗೆ ಎಂಬುದನ್ನು ಅವರು ಅರಿತಿದ್ದರು. ಆ ಬಗ್ಗೆ ಒಂದಷ್ಟು ತಿಂಗಳ ಹಿಂದೆ ಅವರು ‘ಟಿವಿ9’ ಜೊತೆ ಮಾತನಾಡಿದ್ದರು.

‘ಸರ್ಕಾರವೇ ಸಹಾಯ ಮಾಡಲಿ ಅಂತ ನಿರೀಕ್ಷಿಸುವುದು ತಪ್ಪಾಗುತ್ತದೆ. ಯಾಕೆಂದರೆ, ಪ್ರತಿಯೊಬ್ಬರಿಗೂ ದುಡಿಯುವ ಚೈತನ್ಯ ಕೊಟ್ಟಿರುತ್ತಾರೆ. ನಾನು ಕೂಡ ಯಾರಿಂದಲೂ ಅಪೇಕ್ಷೆಪಡಲ್ಲ. ಯಾರಾದರೂ ಸುಮ್ಮನೆ ದುಡ್ಡುಕೊಟ್ಟರೆ ನಾನು ಪಡೆಯಲ್ಲ. ನಮ್ಮಿಂದ ಏನಾದರೂ ಕೆಲಸ ಆಗಬೇಕಾದರೆ ನಾನು ಮಾಡುತ್ತೇನೆ. ಯಾಕೆಂದರೆ, ಕಲಾವಿದರು ಯಾವಾಗಲೂ ಸ್ವಾಭಿಮಾನಿಗಳು. ಕೆಲಸ ಮಾಡಿ ದುಡ್ಡು ಕೇಳುತ್ತೇವೆ. ಕೆಲಸ ಮಾಡದೆಯೇ ಕೈ ಚಾಚಲ್ಲ’ ಎಂದಿದ್ದರು ಎಂ.ಎಸ್. ಉಮೇಶ್.

‘ನಾವು ಸರ್ಕಾರವನ್ನು ದೂಷಿಸುವುದು ತಪ್ಪು. ಕೋಟ್ಯಂತರ ಜನರ ಸಮಸ್ಯೆಯನ್ನು ಸರ್ಕಾರದವರು ಬಗೆಹರಿಸುತ್ತಾ ಇರುತ್ತಾರೆ. ನಮಗೆ ಯಾಕೆ ಸಹಾಯ ಮಾಡಿಲ್ಲ ಅಂತ ಕೇಳಿದರೆ ಅದು ತಮ್ಮ ತಪ್ಪಾಗುತ್ತದೆ. ರಂಗಭೂಮಿಯಲ್ಲಿ ನಾನು ಬಹಳ ವರ್ಷ ಕೆಲಸ ಮಾಡಿದ್ದರಿಂದ ನನಗೆ 2 ಸಾವಿರ ರೂಪಾಯಿ ಪೆನ್ಷನ್ ಬರುತ್ತದೆ. ನನಗೆ ಅಷ್ಟು ಸಾಕು. ಯಾವುದಾದರೂ ಸಿನಿಮಾದ ಅವಕಾಶ ಸಿಕ್ಕಿದರೆ ಸಾಕು’ ಎಂದು ಉಮೇಶ್ ಅವರು ಹೇಳಿದ್ದರು.

‘ಮನುಷ್ಯನಿಗೆ ತೃಪ್ತಿ ಇರಬೇಕು. ಭಗವಂತ ನಮಗೆ ತೃಪ್ತಿ ಕೊಟ್ಟಿದ್ದಾನೆ. ನಾವು ಇರುವುದೇ ಮೂರು ಜನ. ನನ್ನ ಮಗಳು, ಪತ್ನಿ ಮತ್ತು ನಾನು. ಎಲ್ಲರೂ ನಮಗೆ ಆಸರೆಯಾಗಿ ಇದ್ದಾರೆ. ನಾವು ಅದ್ದೂರಿಯಾಗಿ ವೈಭವದ ಜೀವನ ಮಾಡಿಲ್ಲ. ನನ್ನ ಬಳಿ ಕಾರು ಕೂಡ ಇಲ್ಲ. ಕಾರು ಇಟ್ಟುಕೊಂಡರೆ ಅಲ್ಲಿ ಹೋಗಬೇಕು, ಇಲ್ಲಿ ಹೋಗಬೇಕು ಎನಿಸುತ್ತದೆ. ನನಗೆ ಯಾವ ಆಸೆ ಕೂಡ ಇಲ್ಲ. ಭಗವಂತ ಈ ಮಟ್ಟಿಗೆ ಇಟ್ಟಿದ್ದಾನೆ. ಸಾಕು ನನಗೆ. ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನರು ಪ್ರೀತಿಸುತ್ತಾರೆ ಅದಕ್ಕಿಂತ ದೊಡ್ಡ ಆಸೆ ಯಾವುದೂ ಬೇಡ’ ಎಂದಿದ್ದರು ಉಮೇಶ್.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಪತ್ನಿಗಾಗಿ 80ನೇ ವಯಸ್ಸಲ್ಲೂ ದುಡಿಯುತ್ತಿದ್ದ ಉಮೇಶ್

ಇತ್ತೀಚೆಗೆ ಉಮೇಶ್ ಅವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿದಾಗ 4ನೇ ಹಂತದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಚಿಕಿತ್ಸೆ ಕೊಡಿಸಲಾಯಿತಾದರೂ ಕೂಡ ಅವರು ಬದುಕಿ ಉಳಿಯಲಿಲ್ಲ. ಅವರ ಅಗಲಿಕೆಯಿಂದ ಕುಟುಂಬಕ್ಕೆ, ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಅವರನ್ನು ಕಳೆದುಕೊಂದು ಚಿತ್ರರಂಗಕ್ಕೆ ನಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ