ಸಹೋದರಿ ಉಷಾ ಅವರ ಪರಿಸ್ಥಿತಿಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ ವಿಜಯಲಕ್ಷ್ಮಿ

| Updated By: shivaprasad.hs

Updated on: Aug 14, 2021 | 5:05 PM

ಕನ್ನಡದ ಖ್ಯಾತ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ವಿಜಯಲಕ್ಷ್ಮಿ ಅವರ ಸಹೋದರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಅವರು ಟಿವಿ9 ಮೂಲಕ ಸಹಾಯಕ್ಕಾಗಿ ಕೋರಿಕೊಂಡಿದ್ದಾರೆ.

ಸಹೋದರಿ ಉಷಾ ಅವರ ಪರಿಸ್ಥಿತಿಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ ವಿಜಯಲಕ್ಷ್ಮಿ
ನಟಿ ವಿಜಯಲಕ್ಷ್ಮಿ ಹಾಗೂ ಅವರ ಸಹೋದರಿ ಉಷಾ
Follow us on

ಕನ್ನಡದ ನಾಗಮಂಡಲ, ಸೂರ್ಯವಂಶ ಮೊದಲಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ವಿಜಯಲಕ್ಷ್ಮಿ ಅವರ ಸಹೋದರಿಯ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸಹೋದರಿಯ ಸ್ಥಿತಿಯನ್ನು ವಿವರಿಸುತ್ತಾ ಕಣ್ಣೀರಿಟ್ಟ ವಿಜಯಲಕ್ಷ್ಮಿ, ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಟಿವಿ9ನೊಂದಿಗೆ ದುಃಖ ತೋಡಿಕೊಂಡಿರುವ ಅವರು, ಸಹೋದರಿ ಉಷಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಉಷಾ ಅವರು ಗುಣಮುಖರಾಗಲಿ ಎಂಬುದೊಂದೇ ನನ್ನ ಪ್ರಾರ್ಥನೆ ಎಂದು ಅವರು ಹೇಳಿದ್ದಾರೆ.

ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಸಹ ಅವರೇ ನನ್ನನ್ನು ಕೈ ಹಿಡಿದು ನಡೆಸಿರುವುದು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಅಭಿಮಾನಿಗಳ ಬೈದಿರುವುದನ್ನು ನಾನು ನನ್ನ ಪೋಷಕರು ಬೈದಂತೆ ಎಂದು ಭಾವಿಸುತ್ತೇನೆ. ಕಾರಣ, ನನಗೆ ಈಗಲೂ ಆಸ್ಪತ್ರೆಯಲ್ಲಿ ಸಹಾಯ ಮಾಡುತ್ತಿರುವುದು ಅಭಿಮಾನಿಗಳೇ. ಹಣವನ್ನು ಪಡೆಯದೆಯೇ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಅದಾಗ್ಯೂ ಆಸ್ಪತ್ರೆಗೆ ದಿನಕ್ಕೆ ಬಹಳಷ್ಟು ಖರ್ಚಾಗುತ್ತದೆ. ಅದನ್ನು ಕಟ್ಟುವುದಕ್ಕೆ ಆರ್ಥಿಕ ಸಂಕಷ್ಟವಿದೆ. ಅದಕ್ಕೆ ಹಿತೈಷಿಗಳು, ಆಪ್ತರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಜಯಲಕ್ಷ್ಮಿ ಮಾತನಾಡಿರುವ ವಿಡಿಯೊ:

ಚಲನಚಿತ್ರದಲ್ಲಿ ನಟಿಸುವುದಕ್ಕೋಸ್ಕರ ತಮಿಳುನಾಡಿಗೆ ಹೋಗಿದ್ದು ತನ್ನ ಜೀವನದ ಒಂದು ಬ್ಲಾಕ್ ಪಿರಿಯಡ್ ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ. ಅವರ ಸಹೋದರಿ ಉಷಾ, ಜಯಪ್ರದಾ ಅವರ ಸಹೋದರ ರಾಜ್​ಬಾಬು ಅವರನ್ನು ಮದುವೆಯಾದ ನಂತರ ಸಮಸ್ಯೆಗಳು ಪ್ರಾರಂಭವಾದವು. ಬಹುಶಃ ಕರ್ನಾಟಕದಲ್ಲೇ ಇದ್ದಿದ್ದರೆ ಇಷ್ಟೊಂದು ಸಂಕಷ್ಟವನ್ನು ಅನುಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಷಾ ಅವರ ಸ್ಥಿತಿಯನ್ನು ವಿಜಯಲಕ್ಷ್ಮಿ ವಿವರಿಸಿದ್ದಾರೆ. ಈ ಮೊದಲು ಸೋಷಿಯಲ್ ಮೀಡಿಯಾ ಮೂಲಕ ವಿಜಯಲಕ್ಷ್ಮಿ ಮನವಿ ಮಾಡಿದ್ದರು. ಸೋಷಿಯಲ್ ಮೀಡಿಯಾದ ಮೂಲಕವೇ ಆಗಾಗ ವಿವಾದಿತ ಹೇಳಿಕೆಗಳನ್ನೂ ನೀಡಿ ವಿಜಯಲಕ್ಷ್ಮಿ ಸುದ್ದಿಯಾಗಿದ್ದರು. ಇತ್ತೀಚೆಗೆ ಸುಮಲತಾ ಅಂಬರೀಶ್ ಅವರು ತಮಗೆ ನ್ಯಾಯ ಕೊಡಿಸಬೇಕು ಎಂದು ಅವರು ಮನವಿ ಮಾಡಿದ್ದರು.

ಕನ್ನಡದ ನಾಗಮಂಡಲ, ಸೂರ್ಯವಂಶ ಮೊದಲಾದ ಖ್ಯಾತ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯಲಕ್ಷ್ಮಿ ಕಳೆದ ಹದಿನೈದು ವರ್ಷಗಳಿಂದ ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಅವರ ಸಹೋದರಿ ಉಷಾ ಅವರನ್ನು ವಿಜಯಲಕ್ಷ್ಮಿಯವರೇ ನೋಡಿಕೊಳ್ಳುತ್ತಿದ್ದು, ಈರ್ವರೂ ಸೋದರಿಯರೂ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಉಷಾ ಅವರಿಗೆ ಜಯಪ್ರದಾ ಅವರ ಅಣ್ಣ ರಾಜ್​ಬಾಬು ಅವರಿಂದ ವಿಚ್ಛೇದನ ಪಡೆಯಲು ಪ್ರಯತ್ನಿಸುತ್ತಿದ್ದರೂ ಇನ್ನೂ ಸಾಧ್ಯವಾಗಿಲ್ಲ.

ಇದನ್ನೂ ಓದಿ:

ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಆರೋಗ್ಯ ಮತ್ತಷ್ಟು ಗಂಭೀರ

ಜಯಪ್ರದಾ ಕುಟುಂಬದಿಂದ ಅನ್ಯಾಯವಾಗಿದೆ, ದಯವಿಟ್ಟು ನ್ಯಾಯ ಕೊಡಿಸಿ: ಸಂಸದೆ ಸುಮಲತಾ ಬಳಿ ವಿಜಯಲಕ್ಷ್ಮಿ ಮನವಿ

(Kannada actress Vijalakshmi talks with TV9 and shares her pain and asks for help)

Published On - 4:50 pm, Sat, 14 August 21