
ಚಿತ್ರರಂಗದಲ್ಲಿ ಸಮಯ ಮತ್ತು ಅಹಂಕಾರ ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಈಗ ತೆಲುಗು ನಟ ‘ಮಾಸ್ ಮಹಾರಾಜ’ ರವಿ ತೇಜಾ ಅನುಭವಿಸುತ್ತಿರುವ ಪರಿಸ್ಥಿತಿಯೇ ಅತ್ಯುತ್ತಮ ಉದಾಹರಣೆ. 2023ರಲ್ಲಿ ಸಂದರ್ಶನವೊಂದರಲ್ಲಿ ರವಿ ತೇಜಾ ನೀಡಿದ್ದ ಹೇಳಿಕೆ ಹಾಗೂ ಪ್ರಸ್ತುತ ಗಲ್ಲಾಪೆಟ್ಟಿಗೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿರುವ ಸಿನಿಪ್ರಿಯರು, ‘ಕಾಲ ಯಾರನ್ನೂ ಸುಮ್ಮನೆ ಬಿಡುವುದಿಲ್ಲ, ಕರ್ಮ ರಿಟರ್ನ್ಸ್’ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.
2023ರಲ್ಲಿ ಸಂದರ್ಶನವೊಂದರ ವೇಳೆ ರವಿ ತೇಜಾ ಅವರಿಗೆ, ‘ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರಿಂದ ನೀವು ಏನನ್ನು ಕದಿಯಲು (Steal) ಬಯಸುತ್ತೀರಿ?’ ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉಡಾಫೆಯಿಂದ ಉತ್ತರಿಸಿದ್ದ ರವಿ ತೇಜಾ, ‘ನಾನು ಯಶ್ ಅವರ ಕೆಜಿಎಫ್ ಸಿನಿಮಾ ಒಂದನ್ನಷ್ಟೇ ನೋಡಿದ್ದೇನೆ. ಆ ರೀತಿಯ ಸಿನಿಮಾ ಸಿಗಲು ಯಶ್ ಅದೃಷ್ಟವಂತ ಅಷ್ಟೇ’ ಎಂದು ಲಘುವಾಗಿ ಮಾತನಾಡಿದ್ದರು. ಕನ್ನಡದ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಯಶ್ ಅವರ ಶ್ರಮವನ್ನು ಕೇವಲ ಅದೃಷ್ಟಕ್ಕೆ ಹೋಲಿಸಿದ್ದು ಯಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
This movie hero and this guy are the same right?
ಕರ್ಮ ಬಿಟ್ರು ಯಶ್ ಬಿಡಲ್ಲ 🤣 https://t.co/sfLzbXv4M4 pic.twitter.com/4Z3RkOZbQz
— ಬ್ರಹ್ಮಚಾರಿ 🚩 (@ragebait_tweets) August 24, 2026
ಈಗ ದಿನಗಳು ಉರುಳಿವೆ. ರವಿ ತೇಜಾ ಅಭಿನಯದ ‘ಇರುಮುಡಿ’ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ತೆರೆಕಾಣಲು ಸಜ್ಜಾಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ದೇಶಾದ್ಯಂತ ರವಿ ತೇಜಾ ಅವರ ‘ಇರುಮುಡಿ’ ಪ್ರದರ್ಶನ ಕಾಣುತ್ತಿರುವ ಬಹುತೇಕ ಪ್ರಮುಖ ಚಿತ್ರಮಂದಿರಗಳನ್ನು ಈಗ ‘ಟಾಕ್ಸಿಕ್’ ವಶಪಡಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಧಮಾಕ; ಬಿಡುಗಡೆಗೆ ಮುನ್ನವೇ 30 ಕೋಟಿ ದಾಟಿದ ಯಶ್ ಸಿನಿಮಾ ಗಳಿಕೆ
ಯಶ್ ಅವರ ಸಿನಿಮಾವನ್ನು ಮತ್ತು ಅವರ ಶ್ರಮವನ್ನು ಕೇವಲ ಅದೃಷ್ಟ ಎಂದು ಲಘುವಾಗಿ ಕಂಡಿದ್ದ ರವಿ ತೇಜಾ ಅವರ ಚಿತ್ರಕ್ಕೆ, ಇಂದು ಅದೇ ಯಶ್ ಅವರ ‘ಟಾಕ್ಸಿಕ್’ ಸಿನಿಮಾದಿಂದಾಗಿ ಥಿಯೇಟರ್ಗಳು ಸಿಗದಂತಾಗುತ್ತಿರುವುದು ನಿಜಕ್ಕೂ ಕಾಲದ ಆಟವೇ ಸರಿ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ತೆಲುಗು ರಾಜ್ಯಗಳಲ್ಲೂ ‘ಟಾಕ್ಸಿಕ್’ ಕ್ರೇಜ್ ಮುಟ್ಟಿನೋಡುವಂತಿದ್ದು, ‘ಇರುಮುಡಿ’ ಪ್ರದರ್ಶನ ಕಾಣುತ್ತಿದ್ದ ಸ್ಕ್ರೀನ್ಗಳು ಒಂದೊಂದಾಗಿ ಯಶ್ ಸಿನಿಮಾದ ಪಾಲಾಗುತ್ತಿವೆ. ಇದನ್ನು ಕಂಡ ನೆಟ್ಟಿಗರು ಹಾಗೂ ರಾಕಿ ಭಾಯ್ ಅಭಿಮಾನಿಗಳು, ‘ಯಾರನ್ನೂ ಹಗುರವಾಗಿ ಕಾಣಬಾರದು. 2023ರಲ್ಲಿ ಅಹಂನಿಂದ ಆಡಿದ ಮಾತಿಗೆ 2026ರಲ್ಲಿ ಕರ್ಮ ಸೂಕ್ತ ರೀತಿಯಲ್ಲಿಯೇ ಉತ್ತರ ನೀಡಿದೆ’ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.