AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್​ ಸದ್ಯ ಸೌತ್​ ಸಿನಿಮಾರಂಗದ ಸ್ಟಾರ್ ನಟಿ. ಸ್ಟಾರ್​ ನಿರ್ದೇಶಕರು ಕೂಡ ಈಕೆಯ ಡೇಟ್​ಗಾಗಿ ಕಾಯುವಂತಾಗಿದೆ. ಹೀಗಿರುವಾಗ ಒಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಸಿನಿಮಾದಿಂದ ಕೀರ್ತಿ ಹೊರ ನಡೆದಿದ್ದಾರೆ. ದೊಡ್ಡ ಅವಕಾಶಯೊಂದನ್ನ ಕೀರ್ತಿ ಕೈ ಬಿಟ್ಟಿದ್ದಾರೆ ಅಂತಿದೆ ಚಿತ್ರರಂಗ. ಕೀರ್ತಿ ಸುರೇಶ್… ಮಹಾನಟಿ ಸಿನಿಮಾದ ನಂತ್ರ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಷ್ಟೇ ಸಿನಿಮಾ ಅವಕಾಶಗಳು ಬಂದ್ರೂ, ಕೀರ್ತಿ ಮಾತ್ರ ಸಿನಿಮಾ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅಳೆದು-ತೂಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಆದ್ರೆ, ಸ್ಟಾರ್ ನಿರ್ದೇಶಕ ಮಣಿರತ್ನಂರ ಚಿತ್ರದಲ್ಲಿ […]

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್
ಸಾಧು ಶ್ರೀನಾಥ್​
|

Updated on:Dec 14, 2019 | 8:56 AM

Share

ನಟಿ ಕೀರ್ತಿ ಸುರೇಶ್​ ಸದ್ಯ ಸೌತ್​ ಸಿನಿಮಾರಂಗದ ಸ್ಟಾರ್ ನಟಿ. ಸ್ಟಾರ್​ ನಿರ್ದೇಶಕರು ಕೂಡ ಈಕೆಯ ಡೇಟ್​ಗಾಗಿ ಕಾಯುವಂತಾಗಿದೆ. ಹೀಗಿರುವಾಗ ಒಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಸಿನಿಮಾದಿಂದ ಕೀರ್ತಿ ಹೊರ ನಡೆದಿದ್ದಾರೆ. ದೊಡ್ಡ ಅವಕಾಶಯೊಂದನ್ನ ಕೀರ್ತಿ ಕೈ ಬಿಟ್ಟಿದ್ದಾರೆ ಅಂತಿದೆ ಚಿತ್ರರಂಗ.

ಕೀರ್ತಿ ಸುರೇಶ್… ಮಹಾನಟಿ ಸಿನಿಮಾದ ನಂತ್ರ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಷ್ಟೇ ಸಿನಿಮಾ ಅವಕಾಶಗಳು ಬಂದ್ರೂ, ಕೀರ್ತಿ ಮಾತ್ರ ಸಿನಿಮಾ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅಳೆದು-ತೂಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ.

ಆದ್ರೆ, ಸ್ಟಾರ್ ನಿರ್ದೇಶಕ ಮಣಿರತ್ನಂರ ಚಿತ್ರದಲ್ಲಿ ನಟಿಸದೇ ಕೀರ್ತಿ ಹೊರ ನಡೆದಿದ್ದಾರೆ. ಮಣಿರತ್ನಂ ಚಿತ್ರದಲ್ಲಿ ನಟಿಸಲು ಅವಕಾಶಕ್ಕಾಗಿ ಕಾದು ಕುಳಿತಿರ್ತಾರೆ. ಆದ್ರೆ, ಕೀರ್ತಿ ಸುರೇಶ್ ಮಾತ್ರ ಸಿಕ್ಕ ಚಾನ್ಸ್​ನ್ನೂ ಕೈ ಚೆಲ್ಲಿದ್ದಾರೆ. ಮಣಿರತ್ನಂ ನಿರ್ದೇಶಿಸಲಿರೋ ಹೆಸರಾಂತ ಕಾದಂಬರಿ ಆಧಾರಿತ “ಪೊನ್ನಿಯಿನ್ ಸೆಲ್ವನ್” ಸಿನಿಮಾದಲ್ಲಿ ಕೀರ್ತಿ ಸುರೇಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳ ಬೇಕಿತ್ತು. ಮೊದಲಿಗೆ ಸಿನಿಮಾವನ್ನ ಒಪ್ಪಿಕೊಂಡು ನಂತ್ರ ಸಿನಿಮಾದಿಂದ ಹೊರ ನಡೆದಿದ್ದಾರಂತೆ.

ಈ ಕಲಾತ್ಮಕ ಸಿನಿಮಾದಿಂದ ನಟಿ ಕೀರ್ತಿ ಹೊರ ನಡೆಯಲು ಕಾರಣ ಸೂಪರ್​ ಸ್ಟಾರ್​ ರಜನಿಕಾಂತ್. ತಲೈವಾ ರಜನಿಕಾಂತ್ ಜೊತೆಗೆ ಅಭಿನಯಿಸ ಬೇಕು ಅನ್ನೋದು ಕೀರ್ತಿ ಸುರೇಶ್ ಕನಸು. ಹೀಗಾಗಿ, ತಲೈವಾ 168 ಸಿನಿಮಾದಲ್ಲಿ ರಜನಿಕಾಂತ್​ ಜೊತೆಗೆ ಕೀರ್ತಿ ಅಭಿನಯಿಸುತ್ತಿದ್ದಾರೆ.

ತಲೈವಾ 168 ಸಿನಿಮಾ ಅದಾಗ್ಲೇ ಸೆಟ್ಟೇರಿದ್ದರಿಂದ, ಎರಡು ಸಿನಿಮಾಗಳಿಗೂ ಡೇಟ್​ ಹೊಂದಾಣಿಕೆ ಆಗಿರಲಿಲ್ಲವಂತೆ. ಇದೇ ಕಾರಣ ಕೀರ್ತಿ ರಜನಿ ಸಿನಿಮಾಕ್ಕೆ ಓಟ್​ ಹಾಕಿ ಮಣಿರತ್ನಂ ಸಿನಿಮಾಕ್ಕೆ ನೋ ಎಂದಿದ್ದಾರೆ.

ಮೂಲಗಳ ಪ್ರಕಾರ ಪೊನ್ನಿಯಿನ್​ ಸೆಲ್ವನ್​ ಸಿನಿಮಾದಲ್ಲಿ ಕೀರ್ತಿ ಸುರೇಶ್​ ಪಾತ್ರ ತುಂಬಾನೇ ಚೆನ್ನಾಗಿತ್ತಂತೆ. ಇದ್ರಿಂದ ಕೀರ್ತಿ ಒಂದೊಳ್ಳೆ ಅವಕಾಶ ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ.

Published On - 8:54 am, Sat, 14 December 19

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ