AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನ ಸೆಳೆದ ‘ದಿ ಬೆಲ್’ ಪೋಸ್ಟರ್​; ಕನ್ನಡದ ಕಿರುಚಿತ್ರಕ್ಕೆ ಸುದೀಪ್​, ಪ್ರಜ್ವಲ್​ ದೇವರಾಜ್​​ ವಿಶ್​

The Bell Kannada Short Movie: ‘ದಿ ಬೆಲ್’ ಶೀರ್ಷಿಕೆಯ ಕನ್ನಡ ಕಿರುಚಿತ್ರದ ಪೋಸ್ಟರ್ ರಿಲೀಸ್​ ಆಗಿದೆ. ಪ್ರಜ್ವಲ್​ ದೇವರಾಜ್​, ಕಿಚ್ಚ ಸುದೀಪ್​ ಅವರು ಈ ತಂಡಕ್ಕೆ ಶುಭ ಕೋರಿದ್ದಾರೆ.

ಗಮನ ಸೆಳೆದ ‘ದಿ ಬೆಲ್’ ಪೋಸ್ಟರ್​; ಕನ್ನಡದ ಕಿರುಚಿತ್ರಕ್ಕೆ ಸುದೀಪ್​, ಪ್ರಜ್ವಲ್​ ದೇವರಾಜ್​​ ವಿಶ್​
‘ದಿ ಬೆಲ್’ ಕಿರುಚಿತ್ರಕ್ಕೆ ಸುದೀಪ್​, ಪ್ರಜ್ವಲ್​ ದೇವರಾಜ್​​ ವಿಶ್​
Follow us
TV9 Web
| Updated By: ಮದನ್​ ಕುಮಾರ್​

Updated on:Jan 08, 2022 | 7:43 AM

ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಕಿರುಚಿತ್ರಗಳು ಸಹಾಯಕ ಆಗುತ್ತವೆ. ಅಂಥವರಿಗೆ ಸ್ಟಾರ್​ ಕಲಾವಿದರ ಬೆಂಬಲ ಸಿಕ್ಕರೆ ಹುರುಪು ಇನ್ನಷ್ಟು ಹೆಚ್ಚುತ್ತದೆ. ‘ಕೋಟಿಗೊಬ್ಬ 3’ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ರಘುಕುಮಾರ್ ಒ.ಆರ್.​​ ಅವರು ‘ದಿ ಬೆಲ್​’ ಶೀರ್ಷಿಕೆಯ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಈಗ ಅದರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಖ್ಯಾತ ನಟ ಪ್ರಜ್ವಲ್​ ದೇವರಾಜ್ (Prajwal Devaraj)​ ಅವರು ಈ ಪೋಸ್ಟರ್​ ಲಾಂಚ್​ ಮಾಡಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಅವರು ಸೋಶಿಯಲ್​ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. ಈ ಎಲ್ಲ ಕಾರಣಗಳಿಂದ ‘ದಿ ಬೆಲ್​’ ಕಿರುಚಿತ್ರ ಗಮನ ಸೆಳೆಯುತ್ತಿದೆ.

ಈ ಕಿರುಚಿತ್ರಕ್ಕೆ ರಿಷಿಕೇಶ್​ ಛಾಯಾಗ್ರಹಣ ಮಾಡಿದ್ದಾರೆ. ಶೈಲೇಶ್​ ರಾಜ್​ ಸಂಭಾಷಣೆ ಬರೆದಿದ್ದಾರೆ. ಉಮೇಶ್​ ಆರ್​.ಬಿ. ಸಂಕಲನ, ಪ್ರದ್ಯೋತನ್​ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಕೇಶ್​ ರಾಖಿ ಈ ಪೋಸ್ಟರ್​ ವಿನ್ಯಾಸ ಮಾಡಿದ್ದು, ಪ್ರಜ್ವಲ್​ ದೇವರಾಜ್​ ಅವರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಬಾಲಿವುಡ್​ ನಟ ಅಫ್ತಾಬ್​ ಶಿವದಾಸನಿ, ನಿರ್ದೇಶಕ ಲೋಹಿತ್​, ನಟಿ ಶ್ರದ್ಧಾ ದಾಸ್​ ಮುಂತಾದವರು ಆಲ್​ ದಿ ಬೆಸ್ಟ್​ ಎಂದಿದ್ದಾರೆ.

ತಿಮ್ಮರಾಜ್​ ಎಸ್​.ಎಚ್​​, ಲಕ್ಷ್ಮೀಕಾಂತ್​ ಒ.ಆರ್​. ಹಾಗೂ ರಘುಕುಮಾರ್​ ಒ.ಆರ್​. ಅವರು ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಆಶಾ ರಾಣಿ, ಭವಾನಿ ಪ್ರಕಾಶ್​, ರಮ್ಯಾ ಕೃಷ್ಣ, ಅಶ್ವಿನಿ ಹಾಸನ್​, ಮನೋಜ್​ ಪುತ್ತೂರ್​, ಅಶ್ವಿನ್​ ಹಾಸನ್​, ಎಚ್​​ಎಂಟಿ ವಿಜಯ್​ ಮುಂತಾದವರು ‘ದಿ ಬೆಲ್​’ ಕಿರುಚಿತ್ರದಲ್ಲಿ ನಟಿಸಿದ್ದಾರೆ.

‘ಕರ್ಮ ಸಿದ್ಧಾಂತದ ಥೀಮ್​ ಇಟ್ಟುಕೊಂಡು ಈ ಕಿರುಚಿತ್ರ ಸಿದ್ಧವಾಗಿದೆ. ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಇದನ್ನು ಮಾಡಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತೇವೆ. ಹೆಚ್ಚು ಜನರನ್ನು ತಲುಪಬೇಕು ಎಂಬುದು ನಮ್ಮ ಗುರಿ’ ಎಂದಿದ್ದಾರೆ ನಿರ್ದೇಶಕ ರಘುಕುಮಾರ್​.

‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ

ಪುನೀತ್​ ಸಮಾಧಿ ಎದುರು ‘ರೈತ’ ಕಿರುಚಿತ್ರದ ಸಾಂಗ್​ ಬಿಡುಗಡೆ; ಅಪ್ಪುಗಾಗಿ ವಿಶೇಷ ಹಾಡು

Published On - 7:42 am, Sat, 8 January 22

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ