AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

ಸುದೀಪ್​ ಧರಿಸಿದ್ದ ವಾಚ್​ ರಿಚರ್ಡ್​ ಮಿಲ್ಲೆ (Richard Mille) ಕಂಪೆನಿಗೆ ಸೇರಿದ್ದಾಗಿದೆ. ಸ್ವಿಸ್​ ಮೂಲದ ಈ ಕಂಪೆನಿ 2001ರಲ್ಲಿ ಸ್ಥಾಪನೆಗೊಂಡಿತ್ತು.

Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?
ಸದೀಪ್ ಧರಿಸಿದ ವಾಚ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 10, 2021 | 4:08 PM

Share

ಸೆಲೆಬ್ರಿಟಿಗಳು ಧರಿಸುವ ಬಟ್ಟೆಯಿಂದ ಹಿಡಿದು ಅವರು ಹಾಕುವ ವಾಚ್, ಶೂ, ಚೈನ್​ ಮತ್ತಿತ್ಯಾದಿ ವಿಚಾರಗಳು ಫ್ಯಾನ್ಸ್​ ಗಮನ ಸೆಳೆಯುತ್ತಲೇ ಇರುತ್ತವೆ. ಸೆಲೆಬ್ರಿಟಿಗಳು ಸ್ಪೋರ್ಟ್ಸ್​ ಬಟ್ಟೆ ತೊಟ್ಟು ಜಿಮ್​ಗೆ ಹೋದರೆ ಅದರ ಬೆಲೆಯನ್ನು ಹುಡುಕಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಚ್ಚರಿ ಹೊರ ಹಾಕುವವರ ಪಟ್ಟಿ ದೊಡ್ಡದಿದೆ. ಈಗ ಇಂಥದ್ದೇ ವಿಚಾರಕ್ಕೆ ಕಿಚ್ಚ ಸುದೀಪ್​ ಸುದ್ದಿಯಾಗಿದ್ದಾರೆ. ಅವರು ಧರಿಸಿದ ದುಬಾರಿ ಬೆಲೆಯ ವಾಚ್​ ಎಲ್ಲರ ಕಣ್ಣು ಕುಕ್ಕಿದೆ. ಕಿಚ್ಚ ಸುದೀಪ್​ ಕಾರು ಹಾಗೂ ಬೈಕ್​ಗಳ ಬಗ್ಗೆ ಕ್ರೇಜ್​ ಹೊಂದಿದ್ದಾರೆ. ಅವರ ಕಾರ್​​ ಕಲೆಕ್ಷನ್​ ಎಲ್ಲರ ಗಮನ ಸೆಳೆಯುವಂಥದ್ದು. ಇದರ ಜತೆಗೆ ಅವರು ವಾಚ್​ ಪ್ರಿಯರು! ಅವರ ಬಳಿ ಸಾಕಷ್ಟು ದುಬಾರಿ ವಾಚ್​ಗಳಿವೆ ಅನ್ನೋದು ವಿಶೇಷ. ಇತ್ತೀಚೆಗೆ ಅವರು ಧರಿಸಿದ್ದ ವಾಚ್​ ಒಂದು ಎಲ್ಲರ ಗಮನ ಸೆಳೆದಿದೆ.

ಕಿಚ್ಚ ಸುದೀಪ್​ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಇದೇ ವಿಶೇಷ ದಿನದಂದು ಕನ್ನಡ ಸಂಘಟನೆಗಳೆಲ್ಲ ಸೇರಿ ಸುದೀಪ್​ಗೆ ಸನ್ಮಾನ ಮಾಡಿದ್ದವು. ಈ ವೇಳೆ ಸುದೀಪ್​ ಧರಿಸಿದ್ದ ವಾಚ್​ ಎಲ್ಲರ ಗಮನ ಸೆಳೆದಿದೆ. ಅವರು ಧರಿಸಿದ್ದ ವಾಚ್​ ಯಾವುದು? ಇದರ ಬೆಲೆ ಎಷ್ಟು ಎನ್ನುವ ಬಗ್ಗೆ ಅಭಿಮಾನಿಗಳು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ.

ಸುದೀಪ್​ ಧರಿಸಿದ್ದ ವಾಚ್​ ರಿಚರ್ಡ್​ ಮಿಲ್ಲೆ (Richard Mille) ಕಂಪೆನಿಗೆ ಸೇರಿದ್ದಾಗಿದೆ. ಸ್ವಿಸ್​ ಮೂಲದ ಈ ಕಂಪೆನಿ 2001ರಲ್ಲಿ ಸ್ಥಾಪನೆಗೊಂಡಿತ್ತು. ಐಷಾರಾಮಿ ವಾಚ್​ಗಳನ್ನು ಸಿದ್ಧಪಡಿಸೋದಕ್ಕೆ ಈ ಕಂಪೆನಿ ಹೆಸರುವಾಸಿಯಾಗಿದೆ.

ಸುದೀಪ್​ ಧರಿಸಿರೋ ವಾಚ್​ ಬೆಲೆ 1.5 ಕೋಟಿ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ. ಈ ಸಂಸ್ಥೆ ಸಿದ್ಧಪಡಿಸುವ ವಾಚ್​ನ ಆರಂಭಿಕ ಬೆಲೆ 1 ಕೋಟಿ ಮೇಲಿದೆ. ಸದ್ಯ, ಸುದೀಪ್​ ವಾಚ್​ ಮೌಲ್ಯ ಕೇಳಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಸುದೀಪ್​ಗೆ ಕಾರು, ಬೈಕ್ ಕ್ರೇಜ್ ಇದೆ ಎಂಬುದು ಅಭಿಮಾನಿಗಳಿಗೆ ಗೊತ್ತಿತ್ತು. ಇದರ ಜತೆಗೆ ವಾಚ್ ಕ್ರೇಜ್ ಇದೆ ಎಂಬ ವಿಚಾರವೂ ಈಗ ಅಭಿಮಾನಿಗಳಿಗೆ ತಿಳಿದಂತಾಗಿದೆ.

ಇದನ್ನೂ ಓದಿ: Kichcha Sudeep: ನಟ ಕಿಚ್ಚ ಸುದೀಪ್​​ಗೆ ಸನ್ಮಾನ ಮಾಡಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ