AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದಕ್ಕೆ ಯಾವುದೇ ಗೂಗಲ್​ ಪೇ ಬೇಡ’; ಮಾತಿನ ಮಧ್ಯೆ ಬಂದ ಅನುಶ್ರೀಗೆ ಕಿಚ್ಚನ ಕ್ಲಾಸ್

Anchor Anushree: ‘ಬಡವ ರಾಸ್ಕಲ್​ ಸಿನಿಮಾದಲ್ಲಿ ಅವರಿಗೋಸ್ಕರ ಸಾಲನ್ನು ಬರೆದಿದ್ದೀನಿ’ ಎಂದು ಧನಂಜಯ್ ಹೇಳಲು ಬಂದರು. ಆದರೆ, ಈ ಮಾತನ್ನು ಪೂರ್ಣಗೊಳಿಸೋಕೆ ಸುದೀಪ್ ಬಿಡಲೇ ಇಲ್ಲ. ಆಗ ಇವರ ಮಾತಿನ ಮಧ್ಯೆ ಅನುಶ್ರೀ ಬಂದರು.

‘ಇದಕ್ಕೆ ಯಾವುದೇ ಗೂಗಲ್​ ಪೇ ಬೇಡ’; ಮಾತಿನ ಮಧ್ಯೆ ಬಂದ ಅನುಶ್ರೀಗೆ ಕಿಚ್ಚನ ಕ್ಲಾಸ್
ಅನುಶ್ರೀ-ಸುದೀಪ್
ರಾಜೇಶ್ ದುಗ್ಗುಮನೆ
|

Updated on:Mar 21, 2023 | 8:18 AM

Share

ಕಿಚ್ಚ ಸುದೀಪ್ (Kichcha Sudeep) ಅವರು ಕ್ಲಾಸ್ ತೆಗೆದುಕೊಳ್ಳೋಕೆ ಎತ್ತಿದ ಕೈ. ಯಾವುದಾದರೂ ವಿಚಾರದಲ್ಲಿ ಅವರು ಮಾತನಾಡಿದರೆ ಅದಕ್ಕೊಂದು ತೂಕ ಇರುತ್ತದೆ. ಅವರು ತಿರುಗೇಟು ಕೊಟ್ಟರೆ ಎದುರಿದ್ದವರು ಮಾತನಾಡೋಕೂ ಸಾಧ್ಯ ಆಗುವುದಿಲ್ಲ. ‘ಹೊಯ್ಸಳ’ ಟ್ರೇಲರ್ ಲಾಂಚ್ ಇವೆಂಟ್​ನಲ್ಲೂ ಇದೇ ರೀತಿಯ ಘಟನೆ ನಡೆಯಿತು. ಧನಂಜಯ್ (Dhananjay) ಹಾಗೂ ಸುದೀಪ್ ಮಾತಿನ ಮಧ್ಯೆ ಬಂದ ಆ್ಯಂಕರ್ ಅನುಶ್ರೀಗೆ ಕ್ಲಾಸ್ ತೆಗೆದುಕೊಂಡರು. ಈ ವಿಡಿಯೋ ಸಖತ್ ಫನ್ ಆಗಿತ್ತು. ಅಷ್ಟಕ್ಕೂ ವೇದಿಕೆ ಮೇಲೆ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗೂಗಲ್ ​ಪೇ ವಿಚಾರ

ಕೆಆರ್​ಜಿ ಸ್ಟುಡಿಯೋಸ್​ನ ಯೋಗಿ ಹಾಗೂ ಕಾರ್ತಿಕ್ ಅವರನ್ನು ವೇದಿಕೆ ಮೇಲೆ ಕರೆದರು ಅನುಶ್ರೀ. ಆದರೆ, ಕಾರ್ತಿಕ್ ಅವರು ಬರೋಕೆ ನೋ ಎಂದರು. ‘ಕಾರ್ತಿಕ್ ಅವರನ್ನು ವೇದಿಕೆ ಮೇಲೆ ಕರೆಸೋಕೆ ನಾನು ಯೋಗಿ ಅವರಿಂದ ಹೆಚ್ಚಿನ ಹಣವನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದೀನಿ’ ಎಂದರು ಅನುಶ್ರೀ. ಇದನ್ನು ಕೇಳಿ ಎಲ್ಲರೂ ನಕ್ಕರು. ಈ ಮಾತನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು.

ಧನಂಜಯ್-ಸುದೀಪ್ ಮಾತುಕತೆ

ಮೊದಲು ವೇದಿಕೆ ಏರಿದ ಅಮೃತಾ ಅಯ್ಯಂಗಾರ್ ಅವರು ಧನಂಜಯ್ ಅವರನ್ನು ಬಾಯ್ತುಂಬ ಹೊಗಳಿದರು. ನಂತರ ವೇದಿಕೆ ಏರಿದ ಧನಂಜಯ್ ಅವರು ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಮಾತನಾಡಿ ಮುಗಿಸಿದರು. ಈ ವಿಚಾರವನ್ನು ಸುದೀಪ್ ಪ್ರಸ್ತಾಪಿಸಿದರು. ‘ಪ್ರತಿ ಮಾತಿಗೆ ಅಮೃತಾ ಧನಂಜಯ್ ಅವರನ್ನು ಹೊಗಳುತ್ತಿದ್ದರು. ಸಿನಿಮಾ ವಿಚಾರಕ್ಕೆ ಈ ರೀತಿ ಹೇಳಿದರೋ ಅಥವಾ ವೈಯಕ್ತಿಕವಾಗಿ ಅವರು ಈ ಮಾತನ್ನು ಆಡಿದರೋ ಗೊತ್ತಿಲ್ಲ. ಆದರೆ, ಧನಂಜಯ್ ಮಾತ್ರ ಅಮೃತಾ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಇದು ನ್ಯಾಯ ಅಲ್ಲ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ‘ಅಮೃತಾ ಅಯ್ಯಂಗಾರ್ ವಿಚಾರದಲ್ಲಿ ನೀನು ಮಾಡಿದ್ದು ತಪ್ಪು’; ವೇದಿಕೆ ಮೇಲೆ ಧನಂಜಯ್​​ಗೆ ತಿಳಿ ಹೇಳಿದ ಸುದೀಪ್

‘ಬಡವ ರಾಸ್ಕಲ್​ ಸಿನಿಮಾದಲ್ಲಿ ಅವರಿಗೋಸ್ಕರ ಸಾಲನ್ನು ಬರೆದಿದ್ದೀನಿ’ ಎಂದು ಧನಂಜಯ್ ಹೇಳಲು ಬಂದರು. ಆದರೆ, ಈ ಮಾತನ್ನು ಪೂರ್ಣಗೊಳಿಸೋಕೆ ಸುದೀಪ್ ಬಿಡಲೇ ಇಲ್ಲ. ಆಗ ಇವರ ಮಾತಿನ ಮಧ್ಯೆ ಅನುಶ್ರೀ ಬಂದರು. ‘ಸರ್ ಅವರು ಅಮೃತಾಗಾಗಿ ಸಾಲನ್ನು ಬರೆದಿದ್ದಾರೆ’ ಎಂದರು. ಮಾತಿನ ಮಧ್ಯೆ ಬಂದ ಅನುಶ್ರೀಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ‘ನಾನು ನಿಮ್ಮ ಬಳಿ ಕೇಳಿದ್ನಾ? ಇದಕ್ಕೆ ಯಾವುದೇ ಗೂಗಲ್ ಪೇ ಬೇಕಾಗಿಲ್ಲ. ಇರಿ ಒಂದು ನಿಮಿಷ’ ಎಂದರು. ಆಗ ಅನುಶ್ರೀ ಸೈಲೆಂಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:18 am, Tue, 21 March 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಆತಂಕ
ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಆತಂಕ
ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ!
ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ!
ಪಟ್ಟದ ಪಗಡೆಯಾಟ ಕ್ಲೈಮ್ಯಾಕ್ಸ್​​ಗೆ ಹೊಸ ಟ್ವಿಸ್ಟ್​​
ಪಟ್ಟದ ಪಗಡೆಯಾಟ ಕ್ಲೈಮ್ಯಾಕ್ಸ್​​ಗೆ ಹೊಸ ಟ್ವಿಸ್ಟ್​​
ಡಿಕೆಶಿಗೆ ಸಿಎಂ ಪಟ್ಟ!: ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳ ಮಾತು
ಡಿಕೆಶಿಗೆ ಸಿಎಂ ಪಟ್ಟ!: ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳ ಮಾತು
ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು
ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು
ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಹೀಗೆ ಔಟಾಗಿ, ಹೀಗೊಂದು ದಾಖಲೆ ಬರೆದ ಸಾಯಿ ಸುದರ್ಶನ್
ಹೀಗೆ ಔಟಾಗಿ, ಹೀಗೊಂದು ದಾಖಲೆ ಬರೆದ ಸಾಯಿ ಸುದರ್ಶನ್
ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ವಿಜಯೇಂದ್ರ ಸ್ಫೋಟಕ ಭವಿಷ್ಯ!
ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ವಿಜಯೇಂದ್ರ ಸ್ಫೋಟಕ ಭವಿಷ್ಯ!