AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಜಿತ್ ಮನೆಯಲ್ಲಿ ಪ್ಲೇ ಆಗ್ತಿದೆ ದುಃಖದ ಹಾಡು; ವಿವರಿಸಿದ ಸುದೀಪ್

ವಾರದ ಪಂಚಾಯ್ತಿಯಲ್ಲಿ ಲಾಯರ್ ಜಗದೀಶ್ ಪರವಾಗಿ ಕಿಚ್ಚ ಸುದೀಪ್ ಮಾತನಾಡಿದ್ದರು. ಲಾಯರ್ ಜಗದೀಶ್ ಅನ್ನು ಇತರೆ ಸ್ಪರ್ಧಿಗಳು ಪ್ರವೋಕ್ ಮಾಡಿದ್ದರಿಂದಲೇ ಆ ವ್ಯಕ್ತಿ ರೆಬೆಲ್ ಆದರು ಎಂದರು. ಜೊತೆಗೆ ರಂಜಿತ್ ಹೊರ ಹೋದ ಬಗ್ಗೆಯೂ ಅವರು ಮಾತನಾಡಿದ್ದಾರೆ.

ರಂಜಿತ್ ಮನೆಯಲ್ಲಿ ಪ್ಲೇ ಆಗ್ತಿದೆ ದುಃಖದ ಹಾಡು; ವಿವರಿಸಿದ ಸುದೀಪ್
ಸುದೀಪ್​-ರಂಜಿತ್
ರಾಜೇಶ್ ದುಗ್ಗುಮನೆ
|

Updated on: Oct 21, 2024 | 7:05 AM

Share

ರಂಜಿತ್ ಅವರಿಗೆ ಈ ಬಾರಿಯ ಬಿಗ್ ಬಾಸ್​ನಲ್ಲಿ ಫಿನಾಲೆವರೆಗೆ ಹೋಗುವ ಅವಕಾಶ ಇತ್ತು. ಅವರು ಟಾಪ್​ ಐದರಲ್ಲಿ ಒಬ್ಬರಾಗುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ, ಅವರು ಮೂರನೇ ವಾರವೇ ಎಲಿಮಿನೇಟ್ ಆಗಿದ್ದಾರೆ. ಅವರು ಜಗದೀಶ್ ಅವರ ಮೈ ಮುಟ್ಟಿದ ಆರೋಪದಲ್ಲಿ ಮನೆಗೆ ಹೋಗಿದ್ದಾರೆ. ಈಗ ಅವರ ಮನೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆಯಂತೆ. ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ರಂಜಿತ್ ಆಪ್ತರು. ರಂಜಿತ್ ಈ ರೀತಿ ಮಾಡಿಕೊಂಡು ಎಲಿಮಿನೇಟ್ ಆದ ಬಗ್ಗೆ ಸುದೀಪ್​ಗೆ ಕೋಪ ಇದೆ. ಅವರು ಇನ್ನೂ ಹಲವು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂಬುದು ಸುದೀಪ್ ಆಸೆ ಆಗಿತ್ತು. ಆದರೆ, ಸುಖಾಸುಮ್ಮನೆ ಫೈಟ್ ಮಾಡಿಕೊಂಡು ಅವರು ಹೊರ ಹೋಗಿದ್ದಾರೆ. ಈ ಬಗ್ಗೆ ವೀಕೆಂಡ್​ನಲ್ಲಿ ಸುದೀಪ್ ಮಾತನಾಡಿದ್ದಾರೆ.

‘ಬಿಗ್ ಬಾಸ್’ ವೇದಿಕೆ ಮೇಲೆ ರಂಜಿತ್ ಎಲಿಮಿನೇಟ್ ಆದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ರಂಜಿತ್ ಅವರ ಎಲಿಮಿನೇಷನ್ ಬಗ್ಗೆ ಮಾತನಾಡುತ್ತಾ ನಕ್ಕಿದ್ದಾರೆ. ‘ಎಲಿಮಿನೇಟ್ ಆದ ರಂಜಿತ್ ಮನೆಯಲ್ಲಿ ಈಗ ಒಂದು ಹಾಡು ಪ್ಲೇ ಆಗುತ್ತಿದೆಯಂತೆ. ಯಾವುದು ಗೊತ್ತಾ ಆ ಸಾಂಗ್? ಯಾರೋ ಯಾರೋ ಗೀಚಿ ಹೋದ ಹಾಡು’ ಎಂದು ಸುದೀಪ್ ಅಣಕಿಸಿದ್ದಾರೆ.

ಕಳೆದ ವಾರ ನಡೆದ ಘಟನೆಯಲ್ಲಿ ಮಾತನಾಡಬೇಕಿದ್ದಿದ್ದು ಹಂಸಾ ಹಾಗೂ ಜಗದೀಶ್. ಏಕೆಂದರೆ ಹಂಸಾ ವಿರುದ್ಧ ಜಗದೀಶ್ ಅವರು ಕೆಟ್ಟ ಪದ ಬಳಕೆ ಮಾಡಿದ್ದರು. ಈ ಪ್ರಕರಣದಲ್ಲಿ ರಂಜಿತ್ ಕೂಡ ಭಾಗಿ ಆದರು. ಅವರು ತಮಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ತಲೆ ಹಾಕಿ ಎಲ್ಲವನ್ನೂ ಹಾಳು ಮಾಡಿಕೊಂಡರು. ಇದರಿಂದ ಅವರಿಗೆ ಸಾಕಷ್ಟು ನಷ್ಟ ಆಗಿದೆ.

ಇದನ್ನೂ ಓದಿ: ಜಗದೀಶ್​ ಬಗ್ಗೆ ಬಿಗ್​ಬಾಸ್​ ತೋರಿಸದೇ ಇದ್ದಿದ್ದನ್ನು ಹೇಳಿದ ರಂಜಿತ್

ಜಗದೀಶ್ ಅವರು ಬಳಕೆ ಮಾಡಿದ ಅವಾಚ್ಯ ಶಬ್ದಗಳ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಇದು ಕಳೆದ ವಾರದ ಹೈಲೈಟ್ ಆಗಿತ್ತು. ಈಗ ದೊಡ್ಮನೆಗೆ ಹನುಮಂತ್ ಅವರು ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ