‘ವಿಐಪಿ’ ಸಿನಿಮಾದ ತಾಯಿ-ಮಗನ ಬಾಂಧವ್ಯದ ಹಾಡಿಗೆ ಧ್ವನಿ ನೀಡಿದ ಕೆ.ಎಸ್. ಚಿತ್ರಾ

ಬಹುದಿನಗಳ ಬಳಿಕ ಹಿರಿಯ ಗಾಯಕಿ ಕೆ.ಎಸ್​. ಚಿತ್ರಾ ಅವರು ಕನ್ನಡದ ಸಿನಿಮಾಗೆ ಹಾಡಿದ್ದಾರೆ. ವಸಿಷ್ಠ ಸಿಂಹ ಅಭಿನಯದ ‘ವಿಐಪಿ’ ಸಿನಿಮಾದ ಮದರ್​ ಸೆಂಟ್​ಮೆಂಟ್​ ಹಾಡು ಕೆ.ಎಸ್​. ಚಿತ್ರಾ ಅವರ ಕಂಠದಲ್ಲಿ ಮೂಡಿಬಂದಿದೆ. ಇದು ಚಿತ್ರತಂಡದ ಬಲವನ್ನು ಹೆಚ್ಚಿಸಿದೆ. ಬ್ರಹ್ಮ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಆರ್.ಎಸ್. ಮೋಹನ್ ಕುಮಾರ್ ಮತ್ತು ಆರ್. ಅಚ್ಯುತ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ.

‘ವಿಐಪಿ’ ಸಿನಿಮಾದ ತಾಯಿ-ಮಗನ ಬಾಂಧವ್ಯದ ಹಾಡಿಗೆ ಧ್ವನಿ ನೀಡಿದ ಕೆ.ಎಸ್. ಚಿತ್ರಾ
ಕೆ.ಎಸ್​. ಚಿತ್ರಾ ಜೊತೆ ‘ವಿಐಪಿ’ ಚಿತ್ರತಂಡ
Follow us
|

Updated on: Jul 07, 2024 | 11:24 PM

ಗಾಯಕಿ ಕೆ.ಎಸ್​. ಚಿತ್ರಾ ಅವರು ಕನ್ನಡದಲ್ಲಿ ಹಲವಾರು ಸೂಪರ್​ ಹಿಟ್​ ಗೀತೆಗಳನ್ನು ಹಾಡಿದ್ದಾರೆ. ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರು ಕನ್ನಡದಲ್ಲಿ ಯಾವುದೇ ಗೀತೆ ಹಾಡಿರಲಿಲ್ಲ. ಈಗ ಅವರು ಕನ್ನಡದಲ್ಲಿ ಹೊಸ ಸಾಂಗ್​ ಹಾಡಿದ್ದಾರೆ. ಕನ್ನಡದ ‘ವಿಐಪಿ’ ಸಿನಿಮಾಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದ ‘ಬಾರೋ ಕಂದ..’ ಎಂಬ ಹಾಡಿಗೆ ವಿ. ನಾಗೇಂದ್ರ ಪ್ರಸಾದ್​ ಅವರು ಸಾಹಿತ್ಯ ರಚಿಸಿದ್ದಾರೆ. ಇದೇ ಹಾಡು ಕೆ.ಎಸ್​. ಚಿತ್ರಾ ಅವರ ಕಂಠದಲ್ಲಿ ಮೂಡಿಬಂದಿದೆ. ಈ ಸಿನಿಮಾಗೆ ವಸಿಷ್ಠ ಸಿಂಹ ಹೀರೋ.

ವಸಿಷ್ಠ ಸಿಂಹ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ವಿಐಪಿ’ ಸಿನಿಮಾದಲ್ಲಿನ ತಾಯಿ-ಮಗನ ಬಾಂಧವ್ಯ ಸಾರುವ ಹಾಡು ಇದು. ಕೆ.ಎಸ್. ಚಿತ್ರಾ ಅವರು ಈ ಗೀತೆ ಹಾಡಿದ್ದು, ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಮಾತನಾಡಿದ್ದಾರೆ. ‘ಅಂತಹ ಅದ್ಭುತ ಗಾಯಕಿ ನಮ್ಮ ಸಿನಿಮಾ ಗೀತೆಯನ್ನು ಹಾಡಿದ್ದು ತುಂಬಾ ಸಂತೋಷವಾಯಿತು. ಅವರು ಅದ್ಭುತವಾಗಿ ಹಾಡಿದ್ದಾರೆ.‌ ಹಾಡಿದ ಬಳಿಕ ತಾವು ಹಾಡಿರುವುದು ಇಷ್ಟವಾಯಿತಾ ಎಂದು ಮ್ಯೂಸಿಕ್​ ಡೈರೆಕ್ಟರ್​ ಹರ್ಷವರ್ಧನ್ ರಾಜ್ ಬಳಿ ಅವರು ಕೇಳುತ್ತಿದ್ದರು. ಇಷ್ಟ ಆಗದಿದ್ದರೆ ಮತ್ತೊಮ್ಮೆ ಹಾಡುತ್ತೇನೆ ಅಂದರು. ಅಂಥ ದೊಡ್ಡ ಗಾಯಕಿ ಆದರೂ ಅವರಲ್ಲಿನ ಸರಳತೆ ಎಲ್ಲರಿಗೂ ಮಾದರಿ’ ಎಂದು ಅಫ್ಜಲ್​ ಹೇಳಿದ್ದಾರೆ.

ಆರ್.ಎಸ್. ಮೋಹನ್ ಕುಮಾರ್ ಮತ್ತು ಆರ್. ಅಚ್ಯುತ್ ರಾವ್ ಅವರು ‘ಕಲಾ ಸೃಷ್ಟಿ ಪ್ರೊಡಕ್ಷನ್ಸ್’ ಮೂಲಕ ‘ವಿಐಪಿ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೇಕಿಂಗ್ ಕಾರಣದಿಂದ ಈ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ನಟಿಸುತ್ತಿದ್ದಾರೆ. ಬಲ ರಾಜವಾಡಿ, ಸುನೀಲ್ ಪುರಾಣಿಕ್, ಅಫ್ಜಲ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಹನುಮಂತೇಗೌಡ, ರಣವೀರ್, ರಾಮ್ ಕಶ್ಯಪ್, ಸನತ್, ಶ್ರೀದತ್ತ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜೀವ್ ಗಣೇಸನ್ ಅವರು ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರು ಸಂಕಲನ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಸೆರೆಮನೆಯಲಿ ವಾಸ, ನೋವಿನಲಿ ದಾಸ..’: ದರ್ಶನ್​ ಮೇಲಿನ ಅಭಿಮಾನಕ್ಕೆ ಹೊಸ ಹಾಡು

ಬೆಂಗಳೂರು ಸುತ್ತಮುತ್ತ ‘ವಿಐಪಿ’ ಸಿನಿಮಾಗೆ ಶೂಟಿಂಗ್​ ನಡೆಯುತ್ತಿದೆ. ಈಗಾಗಲೇ ವಸಿಷ್ಠ ಸಿಂಹ ಅವರ ಫಸ್ಟ್ ಲುಕ್ ಪೋಸ್ಟರ್​ನಿಂದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇವೆ. ವಸಿಷ್ಠ ಸಿಂಹ ಅವರು ಈವರೆಗೆ ಮಾಡಿರದಂತಹ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದಾರೆ ಎಂದಿದ್ದಾರೆ ನಿರ್ದೇಶಕ ಬ್ರಹ್ಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ