ಬಜೆಟ್​ ಮೀರಿದ್ದಕ್ಕೆ ‘ಮಾರ್ಟಿನ್​’ ತಂಡದಲ್ಲಿ ಕಿರಿಕ್​ ಆಯ್ತಾ? ಉತ್ತರಿಸಿದ ಎ.ಪಿ. ಅರ್ಜುನ್

ಕೆಲವು ನೆಗೆಟಿವ್​ ಕಾರಣಗಳಿಂದ ‘ಮಾರ್ಟಿನ್​’ ಸಿನಿಮಾ ತಂಡ ಸುದ್ದಿ ಆಗುತ್ತಿದೆ. ನಿರ್ದೇಶಕ ಎ.ಪಿ. ಅರ್ಜುನ್​ ಅವರ ಮೇಲೆ ಆರೋಪ ಬಂದಿದ್ದು, ಅದನ್ನು ಅವರು ತಳ್ಳಿಹಾಕಿದ್ದಾರೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಎ.ಪಿ. ಅರ್ಜುನ್​ ಅವರು ತಮ್ಮ ವಾದ ಏನು ಎಂಬುದನ್ನು ಮುಂದಿಟ್ಟಿದ್ದಾರೆ. ಬಜೆಟ್​ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಬಜೆಟ್​ ಮೀರಿದ್ದಕ್ಕೆ ‘ಮಾರ್ಟಿನ್​’ ತಂಡದಲ್ಲಿ ಕಿರಿಕ್​ ಆಯ್ತಾ? ಉತ್ತರಿಸಿದ ಎ.ಪಿ. ಅರ್ಜುನ್
ಎ.ಪಿ. ಅರ್ಜುನ್​, ಧ್ರುವ ಸರ್ಜಾ
Follow us
|

Updated on: Jul 26, 2024 | 10:35 PM

ನಟ ಧ್ರುವ ಸರ್ಜಾ ಅವರು ಬಹುನಿರೀಕ್ಷಿತ ‘ಮಾರ್ಟಿನ್​’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರತಂಡದಲ್ಲಿ ಬಿರುಕು ಮೂಡಿದೆ. ಬಿಗ್​ ಬಜೆಟ್​ನ ಈ ಸಿನಿಮಾದಲ್ಲಿ ಮನಸ್ತಾಪ ಉಂಟಾಗಲು ಕಾರಣ ಹಲವು. ಈ ಕುರಿತು ಮಾತನಾಡಲು ಇಂದು (ಜುಲೈ 26) ನಿರ್ದೇಶಕ ಎ.ಪಿ. ಅರ್ಜುನ್​ ಅವರು ಪ್ರೆಸ್​ಮೀಟ್​ ನಡೆಸಿ ಒಂದಷ್ಟು ವಿಷಯಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಮಾರ್ಟಿನ್​’ ಚಿತ್ರದ ಸಿಜಿ ಕೆಲಸಗಳಿಗೆ ಎ.ಪಿ. ಅರ್ಜುನ್​ ಅವರು 50 ಲಕ್ಷ ರೂಪಾಯಿ ಕಮಿಷನ್​ ಪಡೆದಿದ್ದಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಾರೆ. ಅದರ ಬಗ್ಗೆ ಎ.ಪಿ. ಅರ್ಜುನ್​ ಮಾತನಾಡಿದ್ದಾರೆ.

‘ಬಜೆಟ್​ ಜಾಸ್ತಿ ಆಯಿತು ಅನ್ನೋದಕ್ಕಿಂತ, ಒಂದು ಪ್ಯಾನ್​ ಇಂಡಿಯಾ ಸಿನಿಮಾ ಎಂದಾಗ ಆ ರೀತಿಯ ದೊಡ್ಡ ಬಜೆಟ್​ ಬೇಕಾಗುತ್ತದೆ. ನಿರ್ಮಾಪಕರು, ನಿರ್ದೇಶಕರು, ಹೀರೋ ಇದನ್ನೆಲ್ಲ ಮೊದಲೇ ನಿರ್ಧರಿಸಿರುತ್ತಾರೆ. ಮೊದಲು 20 ಕೋಟಿ ರೂಪಾಯಿ ಹೇಳಿ, ಆಮೇಲೆ 100 ಕೋಟಿಯನ್ನು ತಂದು ಯಾರೂ ಹಾಕಲ್ಲ. ಶೇಕಡ 10ರಿಂದ 20ರಷ್ಟು ವ್ಯತ್ಯಾಸ ಬರಬಹುದು’ ಎಂದು ಎ.ಪಿ. ಅರ್ಜುನ್ ಹೇಳಿದ್ದಾರೆ. ಈ ಮೊದಲು ಕೂಡ ನಿರ್ಮಾಪಕರ ಜೊತೆ ನಿರ್ದೇಶಕರು ಮನಸ್ತಾಪ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು.

‘ಸಂಭಾವನೆ ವಿಚಾರದಲ್ಲಿ ನಿರ್ಮಾಪಕರ ಜೊತೆ ನಾನು ಒಪ್ಪಂದ ಮಾಡಿಕೊಂಡಿದ್ದು 2 ವರ್ಷಗಳಿಗೆ. ಆದರೆ ಈ ಸಿನಿಮಾದ ಕೆಲಸ ಒಂದೂವರೆ ವರ್ಷ ಜಾಸ್ತಿ ಆಗಿದೆ. ಆ ಬಗ್ಗೆ ನಾನು ನಿರ್ಮಾಪಕರ ಜೊತೆ ಕುಳಿತು ಮಾತುಕಥೆ ಮಾಡುತ್ತೇನೆ. ಆದರೆ ನಾನು ಇಂದು ಸುದ್ದಿಗೋಷ್ಠಿ ಕರೆದಿದ್ದು ಆ ವಿಚಾರಕ್ಕೆ ಅಲ್ಲ. ನನ್ನ ಮೇಲೆ 50 ಲಕ್ಷ ರೂಪಾಯಿ ಕಮಿಷನ್​ ಪಡೆದ ಆರೋಪ ಬಂದಿದೆ. ಅದನ್ನು ತಳ್ಳಿಹಾಕುತ್ತೇನೆ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

‘ಮಾಧ್ಯಮ ತುಂಬ ಶಕ್ತಿಶಾಲಿ. ನಾನು ಹೆಸರು ಮಾಡಲು ಹಲವು ವರ್ಷ ಕಷ್ಟಪಟ್ಟಿದ್ದೇನೆ. ನನ್ನ ಮೇಲಿನ ಕೋಪಕ್ಕೆ ಕೆಲವರು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬರೆದರೆ ಸರಿ-ತಪ್ಪು ಏನು ಎಂಬುದು ನಮ್ಮವರಿಗೆ ಗೊತ್ತಿರುತ್ತದೆ. ಆದರೆ ದೂರದಿಂದ ನೋಡುವವರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಮನೆ ಕಟ್ಟುವುದು ತುಂಬ ಕಷ್ಟ. ಆದರೆ ಕೆಡಗುವುದು ಸುಲಭ. ನಾನು ಬೆಳೆಯುವಾಗ ಯಾರೂ ಬೆಂಬಲಿಸಿಲ್ಲ. ಆದರೆ ಈಗ ತೇಜೋವಧೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಎ.ಪಿ. ಆರ್ಜುನ್​.

ಇದನ್ನೂ ಓದಿ: ‘ಮಾರ್ಟಿನ್’ ತಂಡದಲ್ಲಿ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ

‘ಎಫ್​ಐಆರ್​ ಕಾಪಿಯಲ್ಲಿ ನನ್ನ ಹೆಸರು ಇದ್ದು, ಆಗ ಸುದ್ದಿ ಮಾಡಿದರೆ ಒಳ್ಳೆಯದು. ಎಫ್​ಐಆರ್​ ಕಾಪಿಯಲ್ಲಿ ನನ್ನ ಹೆಸರು ಇಲ್ಲ. ಚಿತ್ರತಂಡದ ಯಾರೋಬ್ಬರೂ ನನ್ನ ಮೇಲೆ ದೂರು ನೀಡಿಲ್ಲ. ಯಾರೋ ಒಬ್ಬರು ಊಹಾಪೋಹದಿಂದ ಸುದ್ದಿ ಹಬ್ಬಿಸಿದಾಗ ನನ್ನ ಫೋನ್​ ನಂಬರ್​ ಇದೆಯಲ್ಲ. ಆರೋಪ ಬಂದಾಗ ಕರೆ ಮಾಡಿ ನನ್ನನ್ನೇ ಕೇಳಬಹುದಿತ್ತು. ನಿರ್ಮಾಪಕರಿಗಾದರೂ ಕೇಳಿ ವಿಚಾರಿಸಬಹುದಿತ್ತು’ ಎಂದು ಎ.ಪಿ. ಅರ್ಜುನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್