AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಬ್ಯುಸಿನೆಸ್ ಅಂತಿದಾನೆ, ಅವನು ನಟನಾದ್ರೆ ಸಾಕು ನಾನು ಸತ್ರು ಪರವಾಗಿಲ್ಲ ಅಂದಿದ್ರು ರಾಜ್ ಕುಮಾರ್: ನಕ್ಕೀರನ್ ಗೋಪಾಲ್

ಬೆಂಗಳೂರು: ಕಳೆದ ಶುಕ್ರವಾರ ವಿಧಿವಶರಾದ ಸ್ಯಾಂಡಲ್​ವುಡ್​ ಖ್ಯಾತ ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಜನ ಸರದಿಯಲಿ ನಿಂತು ಸಂತಾಪ ಸಲ್ಲಿಸುತ್ತಿದ್ದಾರೆ. ಇನ್ನು ಸದಾಶಿವನಗರದಲ್ಲಿರುವ ದೊಡ್ಮನೆ ಮನೆಗೆ ಮತ್ತು ಮಾನ್ಯತಾ ಟೆಕ್​ ಪಾರ್ಕ್​ನಲ್ಲಿರುವ ಶಿವಣ್ಣ ಮನೆಗೆ ನಾನಾ ಕ್ಷೇತ್ರಗಳ ಜನ ಬಂದು ಸಾಂತ್ವನ ಸಲ್ಲಿಸುತ್ತಿದ್ದಾರೆ. ಇಂದು ಬೆಳಗ್ಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಆಗಮಿಸಿ, ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ನಕ್ಕೀರನ್ ಗೋಪಾಲ್ ನಟ ಪುನೀತ್ […]

ಅಪ್ಪು ಬ್ಯುಸಿನೆಸ್ ಅಂತಿದಾನೆ, ಅವನು ನಟನಾದ್ರೆ ಸಾಕು ನಾನು ಸತ್ರು ಪರವಾಗಿಲ್ಲ ಅಂದಿದ್ರು ರಾಜ್ ಕುಮಾರ್: ನಕ್ಕೀರನ್ ಗೋಪಾಲ್
ಅಪ್ಪು ಬ್ಯುಸಿನೆಸ್ ಅಂತಾ ಹೋಗಿದ್ದಾನೆ, ಅವನು ನಟನಾದ್ರೆ ಸಾಕು ನಾನು ಸತ್ರು ಪರವಾಗಿಲ್ಲ ಅಂದಿದ್ರು ರಾಜ್ ಕುಮಾರ್: ನಕ್ಕೀರನ್ ಗೋಪಾಲ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 03, 2021 | 2:04 PM

ಬೆಂಗಳೂರು: ಕಳೆದ ಶುಕ್ರವಾರ ವಿಧಿವಶರಾದ ಸ್ಯಾಂಡಲ್​ವುಡ್​ ಖ್ಯಾತ ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಜನ ಸರದಿಯಲಿ ನಿಂತು ಸಂತಾಪ ಸಲ್ಲಿಸುತ್ತಿದ್ದಾರೆ. ಇನ್ನು ಸದಾಶಿವನಗರದಲ್ಲಿರುವ ದೊಡ್ಮನೆ ಮನೆಗೆ ಮತ್ತು ಮಾನ್ಯತಾ ಟೆಕ್​ ಪಾರ್ಕ್​ನಲ್ಲಿರುವ ಶಿವಣ್ಣ ಮನೆಗೆ ನಾನಾ ಕ್ಷೇತ್ರಗಳ ಜನ ಬಂದು ಸಾಂತ್ವನ ಸಲ್ಲಿಸುತ್ತಿದ್ದಾರೆ. ಇಂದು ಬೆಳಗ್ಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಆಗಮಿಸಿ, ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ನಕ್ಕೀರನ್ ಗೋಪಾಲ್ ನಟ ಪುನೀತ್ ನಿಧನದ ಸುದ್ದಿ ನಂಬಲು ಸಾಧ್ಯವಿಲ್ಲ. ಶಿವರಾಜ್ ಕುಮಾರ್ ಅವರ ಭೇಟಿಯಾದೆ. ಅವರು ತುಂಬಾ ದುಃಖದಲ್ಲಿದ್ದಾರೆ. ಒಬ್ಬ ವ್ಯಕ್ತಿ ಇಷ್ಟೆಲ್ಲಾ ಮಾಡಬಹುದು ಅಂತಾ ಅಪ್ಪು ತೋರಿಸಿಕೊಟ್ಟಿದ್ದಾರೆ ಎಂದರು.

ಇನ್ನು, ಡಾ.ರಾಜ್ ಕುಮಾರ್ ಅವರನ್ನ ವೀರಪ್ಪನ್ ಅಪಹರಣ ಮಾಡಿದ್ದಾಗ ನಾನೂ ಕಾಡಿಗೆ ಹೋಗಿದ್ದೆ. ರಾಜ್ ಕುಮಾರ್ ಅವನ್ನ ಭೇಟಿಯಾದೆ. ಆಗ ರಾಜ್ ಕುಮಾರ್ ಅವರಿಗೆ ಅಪ್ಪು ಅವರದ್ದೇ ಚಿಂತೆಯಾಗಿತ್ತು. ವೀರಪ್ಪನ್ ಅಪಹರಣ ಮಾಡಿದ್ದಾಗಲೂ ಅಪ್ಪುವಿನದ್ದೇ ಚಿಂತೆಯಾಗಿತ್ತು ಅವರಿಗೆ. ಅಪ್ಪು ಬ್ಯುಸಿನೆಸ್ ಅಂತಾ ಹೋಗಿದ್ದಾನೆ, ಅವನು ನಟನಾದ್ರೆ ಸಾಕು ನಾನು ಸತ್ತರೂ ಪರವಾಗಿಲ್ಲ ಅಂದಿದ್ದರು. ಅದನ್ನ ನಾನು ಪುನೀತ್ ಗೆ ಬಂದು ಆಗ ಹೇಳಿದ್ದೆ. ಈಗ ಪುನೀತ್ ತುಂಬಾ ದೊಡ್ಡ ಮಟ್ಟಕ್ಕೆ ಬೆಳೆದು, ನಮ್ಮನ್ನು ಅಗಲಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದರು.

Nakkeeran Gopal Visits Shiva Rajkumar’s House To Condoles Puneeth Rajkumar Demise

ಇದನ್ನೂ ಓದಿ: ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

(Nakkeeran gopal visits shivarajkumar house to condole the death of puneeth rajkumar reebers rajkumar kidanp days)

Published On - 12:34 pm, Wed, 3 November 21

ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ