AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾ ಲೋಕೇಶ್ ಶಿಕ್ಷಣ, ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಹೇಳಿದ ನರೇಶ್

Mathe Maduve: ಪವಿತ್ರಾ ಲೋಕೇಶ್ ಶಿಕ್ಷಣದ ಬಗ್ಗೆ ಹಾಗೂ ಅವರು ಮಾಡುತ್ತಿರುವ ಪಿಎಚ್​ಡಿ ಸಂಶೋಧನೆ ಬಗ್ಗೆ ಹೆಮ್ಮೆಯಿಂದ ಹೇಳಿದರು ನಟ ನರೇಶ್.

ಪವಿತ್ರಾ ಲೋಕೇಶ್ ಶಿಕ್ಷಣ, ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಹೇಳಿದ ನರೇಶ್
ಮಳ್ಳಿ ಪೆಳ್ಳಿ
Follow us
ಮಂಜುನಾಥ ಸಿ.
|

Updated on: Jun 03, 2023 | 6:57 PM

ತೆಲುಗು ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅವರುಗಳ ಜೀವನವನ್ನು ಆಧರಿಸಿದ ಮಳ್ಳಿ ಪೆಳ್ಳಿ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಆಂಧ್ರ-ತೆಲಂಗಾಣಗಳಲ್ಲಿ ಬಿಡುಗಡೆ ಆಗಿದೆ. ಇದೀಗ ಮಳ್ಳಿ ಪೆಳ್ಳಿಯ (Malli Pelli) ಕನ್ನಡ ಆವೃತ್ತಿ ಮತ್ತೆ ಮದುವೆ (Mathe Maduve) ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನರೇಶ್ ಹಾಗೂ ಪವಿತ್ರಾ ಸಜ್ಜಾಗಿದ್ದು, ಸಿನಿಮಾದ ಪ್ರಚಾರಕ್ಕಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನರೇಶ್, ಪವಿತ್ರಾ ಲೋಕೇಶ್​ ಅವರ ಶಿಕ್ಷಣ ಹಾಗೂ ಅವರು ಮಾಡುತ್ತಿರುವ ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.

”ಪವಿತ್ರಾ ಲೋಕೇಶ್ ಉತ್ತಮ ಶೈಕ್ಷಣಿಕೆ ಹಿನ್ನೆಲೆ ಇರುವ ವ್ಯಕ್ತಿ. ಅವರು ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಅವರ ಶಿಕ್ಷಣದ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ನಾನು ಹೆಚ್ಚು ಕಲಿತವನಲ್ಲ. ನಾನು ಗೌರವ ಡಾಕ್ಟರೇಟ್ ಪಡೆದಿದ್ದೇನೆ ಆದರೆ ಅದು ಭಿನ್ನ. ಪವಿತ್ರಾಗೆ ಸಿನಿಮಾ ಬಿಟ್ಟರೆ ಓದು ಮಾತ್ರವೇ ಗೊತ್ತು. ಆಕೆಯ ಬಳಿ ಪುಸ್ತಕಗಳ ಸಂಗ್ರಹವಿದೆ. ಪುಸ್ತಕಗಳನ್ನು ಓದುತ್ತಿರುತ್ತಾಳೆ. ಕಲಿಯುವುದರಲ್ಲಿ ಬಹಳ ಆಸಕ್ತಿ ಅವರಿಗೆ ಇದೆ. ಈಗ ವೀಣಾ ವಾದನ ಕಲಿಯುತ್ತಿದ್ದಾರೆ. ಅದರಲ್ಲಿಯೂ ಪದವಿ ಗಳಿಸುವ ಬಯಕೆ ಹೊಂದಿದ್ದಾರೆ” ಎಂದರು ನರೇಶ್.

”ಈಗ ಅವರು ಪಿಎಚ್​ಡಿ ಮಾಡಲು ಮುಂದಾಗಿದ್ದಾರೆ. ರಂಗಭೂಮಿಯಲ್ಲಿ ಮಹಿಳೆಯರು ವಿಷಯವಾಗಿ ಪಿಎಚ್​ಡಿ ಮಾಡಲು ಮುಂದಾಗಿದ್ದು, ಈ ಬಗ್ಗೆ ನನ್ನ ಬಳಿ ಹೇಳಿದಾಗ ನನಗೆ ಬಹಳ ಖುಷಿಯಾಯಿತು. ಏಕೆಂದರೆ ನಾನೂ ಸಹ ಮಹಿಳಾ ನಿರ್ದೇಶಕಿಯ ಮಗ. ನನ್ನ ತಾಯಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಸ್ವತಃ ಪವಿತ್ರಾ ಲೋಕೇಶ್ ಸಹ ದೇವಸ್ಥಾನವೊಂದರ ಮೇಲೆ ಡಾಕ್ಯುಮೆಂಟರಿ ಮಾಡಿದ್ದಾರೆ. ಹಾಗಾಗಿ ಅವರು ಮಹಿಳೆ ಮತ್ತು ರಂಗಭೂಮಿ ಬಗ್ಗೆ ಪಿಎಚ್​ಡಿ ಮಾಡುವೆ ಎಂದಾಗ ಬಹಳ ಖುಷಿಯಾಯಿತು. ಅವರೊಟ್ಟಿಗೆ ನಾನೂ ಸಹ ಹಂಪಿ ವಿಶ್ವವಿದ್ಯಾಲಯಕ್ಕೆ ಹೋಗಿ ದಾಖಲಾತಿ ವೇಳೆ ಜೊತೆಗೆ ಇದ್ದೆ ಎಂದಿದ್ದಾರೆ ನರೇಶ್.

ಪವಿತ್ರಾ ಲೋಕೇಶ್​ಗೆ ಪ್ರತಿಭೆ ಇದೆ, ಅವರಿಗೆ ಶಕ್ತಿ ಇದೆ. ಹಾಗಾಗಿ ನಾನೂ ಅವರನ್ನು ಬೆಂಬಲಿಸುತ್ತಿದ್ದೇನೆ. ಅವರು ಒಳ್ಳೆಯದನ್ನೇ ಮಾಡುತ್ತಾರೆಂಬ ವಿಶ್ವಾಸ ನನಗೆ ಇದೆ. ಪಿಎಚ್​ಡಿಗೆ ಅವರು ಆಯ್ದುಕೊಂಡಿರುವ ವಿಷಯವೂ ನನಗೆ ಬಹಳ ಇಷ್ಟವಾಯಿತು. ಸ್ವತಃ ಮಹಿಳಾ ಸಾಧಕಿಯೊಬ್ಬರ ಮಗನು ನಾನಾಗಿರುವಾಗ ಮಹಿಳೆಯರ ಬಗ್ಗೆ ಮಾಡಲಾಗುತ್ತಿರುವ ಅಧ್ಯಯನಕ್ಕೆ ನಾನು ಬೆಂಬಲವಾಗಿ ನಿಲ್ಲುವುದು ನನ್ನ ಜವಾಬ್ದಾರಿ ಎನಿಸಿತು ಎಂದಿದ್ದಾರೆ ನಟ ನರೇಶ್.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಸಂಬಂಧದ ಬಗ್ಗೆ ಕಳೆದ ವರ್ಷ ಎದ್ದಿದ್ದ ವಿವಾದ ಹಾಗೂ ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ ಈ ಇಬ್ಬರ ಮೇಲೆ ಮಾಡಿದ ಆರೋಪಗಳು ಆ ನಂತರ ನಡೆದ ಘಟನೆಗಳನ್ನು ಇರಿಸಿಕೊಂಡೆ ಮತ್ತೆ ಮದುವೆ ಸಿನಿಮಾ ಮಾಡಲಾಗಿದೆ. ಈಗಾಗಲೇ ಈ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಅದೇ ಸಿನಿಮಾ ಕನ್ನಡದಲ್ಲಿ ಜೂನ್ 9ರಂದು ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ನರೇಶ್​ ಸ್ವತಃ ಡಬ್ಬಿಂಗ್ ಮಾಡಿದ್ದಾರಂತೆ. ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ಎಂಎಸ್ ರಾಜು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸ್ವತಃ ನರೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?