AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ

ರೇಣುಕಾಸ್ವಾಮಿ ಕೊಲೆ‌ ಕೇಸ್​ನಲ್ಲಿ ಜೈಲು ಸೇರಿರೋ ದರ್ಶನ್ ಅವರಿಗೆ ಈ ಹಿಂದೆ ರಾಜಾತಿಥ್ಯ ಸಿಕ್ಕಿತ್ತು. ಅದೇ ರಾಜಾತಿಥ್ಯ ಬಗ್ಗೆ ಒಂದು ಕೇಸ್ ಕೂಡ ಆಗಿತ್ತು. ಆದರೆ ಆ ಪ್ರಕರಣದ ಚಾರ್ಜ್ ಶೀಟ್ ಮಾತ್ರ ಇನ್ನೂ ಕೋರ್ಟ್​​ಗೆ ಸಲ್ಲಿಕೆಯಾಗಿಲ್ಲ. ಕೇವಲ ದರ್ಶನ್ ಕೇಸ್ ಅಲ್ಲ ಇನ್ನೂ ಹತ್ತಾರು ಕೇಸ್​​ಗಳ‌ ಕಥೆಯೂ ಹೀಗೆ ಆಗಿದೆ..

ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ
Darshan
ಮದನ್​ ಕುಮಾರ್​
|

Updated on: Nov 14, 2025 | 8:24 PM

Share

ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ (Darshan) ಜೈಲಿನಲ್ಲಿದ್ದಾಗ ಸಿಗರೇಟ್ ಹಿಡಿದು ಟೀ ಕುಡಿಯುತ್ತಾ ಕೂತಿದ್ದ ಫೋಟೋ ವೈರಲ್ ಆಗಿತ್ತು. ಈ ಒಂದು‌ ಕೇಸ್ ಸಂಬಂಧಿಸಿದಂತೆ ಒಟ್ಟು ಮೂರು FIR ದಾಖಲಾಗಿತ್ತು. ಆದರೆ ಆ ವಿಚಾರಗಳನ್ನು ಇದೀಗ ಪೊಲೀಸರು ಮರೆತಿದ್ದಾರಾ ಎಂಬಾ ಪ್ರಶ್ನೆ ಮೂಡುತ್ತಿದೆ. ಯಾಕಂದ್ರೆ ಕೇಸ್ ದಾಖಲಾಗಿ ವರ್ಷ ಕಳೆದರೂ ಇನ್ನು ಯಾವುದಕ್ಕು ಸಹ ಚಾರ್ಜ್ ಶೀಟ್ ಮಾತ್ರ ಸಲ್ಲಿಕೆಯಾಗಿಲ್ಲ.

ಹೌದು, 2024ರ ಸೆಪ್ಟೆಂಬರ್​ನಲ್ಲಿ ಪರಪ್ಪನ ಜೈಲಿನಲ್ಲಿ‌ ದರ್ಶನ್ ರಾಜಾತಿಥ್ಯ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇದರಿಂದ ದರ್ಶನ್​ಗೆ ಬೇರೆ ಜೈಲಿಗೆ ಸಹ ಶಿಫ್ಟ್ ಮಾಡಲಾಗಿ ಮೂರು ಕೇಸ್ ದಾಖಲು ಮಾಡಲಾಗಿ ಒಂದೊಂದು ಕೇಸ್​ಗಳನ್ನ ತನಿಖೆ ಹೊಣೆಯನ್ನ ಮೂವರು ಎಸಿಪಿಗಳಿಗೆ ನೀಡಲಾಗಿತ್ತು. ಈ ತನಿಖೆ ಆರಂಭಿಸಿದ 6 ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ಕೂಡ ನಡೆಸಲಾಯ್ತು. ಆದರೆ ಯಾವುದೇ ಪ್ರಕರಣದ ಅಂತಿಮ ವರದಿ ಕೂಡ ಕೋರ್ಟ್​ಗೆ ಸಲ್ಲಿಕೆಯಾಗದೆ ಇನ್ನೂ ಪರಿಶೀಲನೆ ಹಂತದಲ್ಲಿದೆ‌.

ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲಿನಲ್ಲಿ ಎಲ್ಲವೂ ಹಾಗೆ ಇದೆ. ದರ್ಶನ್ ಕೇಸ್ ಆದ ನಂತರ ಇದುವರೆಗೆ ಜೈಲಿನಲ್ಲಿ ಮೊಬೈಲ್ ಬಳಕೆ, ಡ್ರಗ್ಸ್, ಮಾರಾಕಸ್ತ್ರ ಪತ್ತೆ ಸೇರಿದಂತೆ 30ಕ್ಕೂ ಹೆಚ್ಚು ಕೇಸ್ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದವು. ಆದರೆ ಇದರಲ್ಲಿ ಇನ್ನೂ 27 ಕೇಸ್​ಗಳ ಅಂತಿಮ ವರದಿ ಕೋರ್ಟ್​ಗೆ ಸಲ್ಲಿಸುವುದು ಬಾಕಿ ಇದೆ. ಅಂತಿಮ ಪರಿಶೀಲನೆ, CDR ಡಿಟೇಲ್ಸ್ ಬಾಕಿ ಅಂತ ಅನೇಕ ನೆಪಗಳಿಂದ ಕೇಸ್​ಗಳ ಸ್ಥಿತಿ ಹೀಗಾಗಿದೆ‌. ಇಷ್ಟರ ಮಧ್ಯೆ ವಾರದಿಂದ ಮತ್ತೆ ನಾಲ್ಕು ಕೇಸ್ ದಾಖಲಾಗಿದೆ. ಆದರೆ ಹಳೇ ಕೇಸ್ ಸ್ಥಿತಿಯೇ ಹೀಗಾಗಿರುವಾಗ ಹೊಸ ಕೇಸ್ ಸ್ಥಿತಿ ಏನಾಗುತ್ತೋ ಕಾದು ನೋಡಬೇಕು.

ಇದನ್ನೂ ಓದಿ: ದರ್ಶನ್ ಆಪ್ತ ಧನ್ವೀರ್ ಮೇಲೆ ಅನುಮಾನ; ಕರೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು

ರೇಣುಕಾಸ್ವಾಮಿ ಕೇಸ್ ಅಪ್​ಡೇಟ್:

ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಪ್ರಮುಖ ಘಟ್ಟಕ್ಕೆ ಬಂದಿದೆ. ಈಗಾಗಲೇ ದೋಷಾರೋಪಣೆ ನಿಗದಿ ಆಗಿದೆ. ಆದರೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿಲ್ಲ. ಸಾಕ್ಷಿಗಳ ವಿಚಾರಣೆ ಆರಂಭಕ್ಕೆ ದಿನಾಂಕ ನಿಗದಿ ಆಗಬೇಕಿದೆ. ಬಳಿಕ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುತ್ತದೆ. ಪೂರ್ತಿ ವಿಚಾರಣೆ ಬಳಿಕ ಅಂತಿಮ ತೀರ್ಪು ಪ್ರಕಟ ಆಗಲಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ