Puneeth Rajkumar: ಪುನೀತ್​ ರಾಜ್​ಕುಮಾರ್​ ಅವರ ಕೊನೇ ಫೋಟೋ ತೋರಿಸಿ ಶೋಕಗೀತೆ ಹಾಡಿದ ಗುರುಕಿರಣ್​

Puneeth Rajkumar Death Anniversary: ಈ ಹಾಡಿಗೆ ಹೃದಯಶಿವ ಸಾಹಿತ್ಯ ಬರೆದಿದ್ದಾರೆ. ಗುರುಕಿರಣ್​ ಅವರ ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ಶೋಕಗೀತೆ ಮೂಡಿಬಂದಿದೆ.

Puneeth Rajkumar: ಪುನೀತ್​ ರಾಜ್​ಕುಮಾರ್​ ಅವರ ಕೊನೇ ಫೋಟೋ ತೋರಿಸಿ ಶೋಕಗೀತೆ ಹಾಡಿದ ಗುರುಕಿರಣ್​
ಗುರುಕಿರಣ್​, ಪುನೀತ್​ ರಾಜ್​ಕುಮಾರ್​
Follow us
| Updated By: ಮದನ್​ ಕುಮಾರ್​

Updated on:Oct 29, 2022 | 1:36 PM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಇಲ್ಲ ಎಂದರೆ ನಂಬುವುದು ಕಷ್ಟ. ಅಷ್ಟರಮಟ್ಟಿಗೆ ಅವರು ಎಲ್ಲರನ್ನೂ ಆವರಿಸಿಕೊಂಡಿದ್ದರು. ಚಿತ್ರರಂಗದ ಎಲ್ಲರ ಜೊತೆಗೂ ಅವರು ಸ್ನೇಹ ಸಂಪಾದಿಸಿದ್ದರು. 2021ರ ಅಕ್ಟೋಬರ್​ 28ರ ರಾತ್ರಿ ಕೂಡ ಅವರು ಚಿತ್ರರಂಗದ ಸ್ನೇಹಿತರ ಜೊತೆ ಸೇರಿ ಖುಷಿಯ ಕ್ಷಣವನ್ನು ಕಳೆದಿದ್ದರು. ಆದರೆ ಮರುದಿನವೇ ವಿಧಿ ತನ್ನ ಅಟ್ಟಹಾಸ ಮೆರೆಯಿತು. ಏಕಾಏಕಿ ಹೃದಯಾಘಾತದಿಂದ ಪುನೀತ್​ ರಾಜ್​ಕುಮಾರ್​ ಅವರು ಕೊನೆಯುಸಿರು ಎಳೆದರು. ಅಂದು ಇಡೀ ಕರುನಾಡಿನ ಪಾಲಿಗೆ ಕರಾಳ ದಿನ. ಆ ಕೆಟ್ಟ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳು, ಆಪ್ತರು ಮತ್ತು ಕುಟುಂಬದವರ ಎದೆಯಲ್ಲಿನ ನೋವು ಯಾವ ಕಾಲಕ್ಕೂ ಕೊನೆ ಆಗುವಂಥದ್ದಲ್ಲ. ಆ ನೋವಿನಲ್ಲೇ ಸಂಗೀತ ನಿರ್ದೇಶಕ/ಗಾಯಕ ಗುರುಕಿರಣ್​ (Gurukiran) ಅವರು ಒಂದು ಶೋಕಗೀತೆ ಹಾಡಿದ್ದಾರೆ.

ಗುರುಕಿರಣ್​ ಅವರು 2021ರ ಅ.28ರ ರಾತ್ರಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪುನೀತ್​ ರಾಜ್​ಕುಮಾರ್​ ಭಾಗಿ ಆಗಿದ್ದರು. ಅಂದು ಕ್ಲಿಕ್ಕಿಸಿದ ಫೋಟೋವೇ ಅಪ್ಪು ಅವರ ಕೊನೇ ಫೋಟೋ ಆಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಆ ಫೋಟೋವನ್ನು ಈ ಶೋಕಗೀತೆಯ ಕೊನೆಯಲ್ಲಿ ಗುರು ಕಿರಣ್​ ತೋರಿಸಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಒಟ್ಟಾರೆ ಈ ಹಾಡು ಕಣ್ಣೀರು ತರಿಸುವಂತಿದೆ.

ಈ ಹಾಡಿಗೆ ಹೃದಯಶಿವ ಸಾಹಿತ್ಯ ಬರೆದಿದ್ದಾರೆ. ಗುರುಕಿರಣ್​ ಅವರ ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ಗೀತೆ ಮೂಡಿಬಂದಿದೆ. ‘ಮುಗಿದಿಲ್ಲ ಇನ್ನೂ ಕವಿತೆ, ನಡುವೆ ಶಾಹಿ ಖಾಲಿ..’ ಎಂಬ ಸಾಲಿನೊಂದಿಗೆ ಗೀತೆ ಶುರುವಾಗುತ್ತದೆ. ಅಪ್ಪು ಅವರ ಬಾಲ್ಯದ ಫೋಟೋದಿಂದ ಸಮಾಧಿ ಸೇರುವ ತನಕದ ಹಲವು ಭಾವಚಿತ್ರಗಳನ್ನು ಇದರಲ್ಲಿ ಹಂಚಿಕೊಳ್ಳಲಾಗಿದೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಅಳುತ್ತಿರುವ ದೃಶ್ಯಗಳು ಆ ಹಾಡಿನಲ್ಲಿವೆ. ಅದನ್ನೆಲ್ಲ ನೋಡುತ್ತಿದ್ದರೆ ಆ ಕರಾಳ ದಿನ ಮತ್ತೆ ಎಲ್ಲರನ್ನೂ ಕಾಡುತ್ತದೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಕಳೆದು ಹೋಗಿದೆ. ಪುನೀತ್​ ರಾಜ್​ಕುಮಾರ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಕುಟುಂಬದವರು ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಮನೆಯಲ್ಲೂ ಕೂಡ ಪೂಜೆ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಅವರ ಎಲ್ಲ ಬಂಧು ಬಾಂಧವರು ಸದಾಶಿವನಗರದ ನಿವಾಸದಲ್ಲಿ ಸೇರಿದ್ದಾರೆ.

ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮತ್ತು ಮಕ್ಕಳು ಕಂಠೀರವ ಸ್ಟುಡಿಯೋಗೆ ಬಂದು ಸಮಾಧಿ ಎದುರು ಗಳಗಳನೆ ಅತ್ತಿದ್ದಾರೆ. ಇತ್ತ, ಪುನೀತ್​ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಅದನ್ನು ಕಣ್ತುಂಬಿಕೊಳ್ಳಲು ಅಪ್ಪು ಇಲ್ಲ ಎಂಬ ನೋವು ಕಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:36 pm, Sat, 29 October 22