AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದೇ ಒಂದು ಸಲ’: ದರ್ಶನ್ ವ್ಯಕ್ತಿತ್ವ ಕೊಂಡಾಡಿದ ನಟಿ ರಚನಾ ರೈ

Darshan Thoogudeepa: ನಟ ದರ್ಶನ್ ತೂಗುದೀಪ ಪ್ರಸ್ತುತ ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ದರ್ಶನ್ ವ್ಯಕ್ತಿತ್ವದ ಹಲವಾರು ರೀತಿಯ ವಿಮರ್ಶೆ, ಟೀಕೆ, ನಿಂದನೆಗಳು ಹೊರಗೆ ಕೇಳಿ ಬರುತ್ತಿವೆ. ಇದೀಗ ದರ್ಶನ್ ಜೊತೆಗೆ ‘ಡೆವಿಲ್’ ಸಿನಿಮಾನಲ್ಲಿ ನಟಿಸಿರುವ ರಚನಾ ರೈ, ದರ್ಶನ್ ವ್ಯಕ್ತಿತ್ವವನ್ನು ಕೊಂಡಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ಹೇಳಿರುವುದೇನು? ಇಲ್ಲಿದೆ ಮಾಹಿತಿ...

‘ಒಂದೇ ಒಂದು ಸಲ’: ದರ್ಶನ್ ವ್ಯಕ್ತಿತ್ವ ಕೊಂಡಾಡಿದ ನಟಿ ರಚನಾ ರೈ
Darshan Rachana
ಮಂಜುನಾಥ ಸಿ.
|

Updated on: Oct 13, 2025 | 8:07 AM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಕನಿಷ್ಟ ಇನ್ನೂ ಒಂದು ವರ್ಷ ಅವರು ಹೊರಗೆ ಬರುವುದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ. ಕೊಲೆ ಆರೋಪಿ ದರ್ಶನ್ ಬಗ್ಗೆ ಟೀಕೆ, ವಿಮರ್ಶೆ, ನಿಂದನೆ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಲೇ ಇದೆ. ಆದರೆ ಅವರ ಅಭಿಮಾನಿಗಳು, ಕೆಲ ಸ್ನೇಹಿತರು ದರ್ಶನ್ ಗುಣಗಾನ ಮಾಡುತ್ತಾ ಬರುತ್ತಿದ್ದಾರೆ. ಇದೀಗ ದರ್ಶನ್ ಜೊತೆಗೆ ‘ದಿ ಡೆವಿಲ್’ ಸಿನಿಮಾನಲ್ಲಿ ನಟಿಸಿದ ನಟಿ ರಚನಾ ರೈ, ದರ್ಶನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ದರ್ಶನ್ ಬಗ್ಗೆ ಉದ್ದನೆಯ ಟ್ವಿಟ್ಟರ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಚನಾ ರೈ, ‘ನಿಮ್ಮಂಥಹಾ ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್‌ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್​​ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು. ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವದ ದೊಡ್ಡ ಛಾಪು ಇತರರಲ್ಲಿ ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದಿದ್ದಾರೆ ನಟಿ.

ಸಿನಿಮಾ ಚಿತ್ರೀಕರಣವನ್ನು ನೆನಪು ಮಾಡಿಕೊಂಡಿರುವ ನಟಿ ರಚನಾ ರೈ, ‘ಬೀಚ್​​ನಲ್ಲಿ ಚಿತ್ರೀಕರಣ ಬಹಳ ಕಷ್ಟವಾಗಿತ್ತು. ಉರಿಯುವ ಸೂರ್ಯ, ಸನ್ ಬರ್ನ್, ಗಂಟೆಗೊಮ್ಮೆ ಬದಲಾಗುತ್ತಿದ್ದ ಹವಾಮಾನ, ಬೀಚ್​​​ನಲ್ಲಿ ಲಾಂಗ್​​ ಶಾಟ್​​ಗಳು ಎಲ್ಲವೂ ಬಹಳ ಕಷ್ಟವಾಗಿದ್ದವು. ಆದರೆ ಆ ಕಷ್ಟ ಸಹಿಸಿಕೊಂಡಿದ್ದಕ್ಕೆ ಇಷ್ಟು ಅದ್ಭುತವಾದ ಹಾಡು ಮೂಡಿಬಂದಿದೆ. ಶ್ರಮ, ಕಷ್ಟ ಸಹಿಷ್ಣುತೆ ಮತ್ತು ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಹಾಡು ಇಷ್ಟು ಅದ್ಭುತವಾಗಿ ಮೂಡಿ ಬಂದಿದೆ’ ಎಂದಿದ್ದಾರೆ ರಚನಾ ರೈ.

‘ನಮ್ಮ ಹಾಡನ್ನು ಇಷ್ಟಪಟ್ಟು ಪ್ರೀತಿ ತೋರುತ್ತಿರುವ ಎಲ್ಲರಿಗೂ ನಮ್ಮ ಹಾಡಿಗೆ ನೀವು ತೋರುತ್ತಿರುವ ಪ್ರೀತಿ ಮತ್ತು ಆದರಕ್ಕೆ ನಾವು ಋಣಿ. ನಮ್ಮ ಹಾಡಿಗೆ ನೀವು ತೋರುತ್ತಿರುವ ಪ್ರೀತಿ ನಮ್ಮನ್ನು ತಲುಪುತ್ತಿದೆ. ಎಲ್ಲರಿಗೂ ಅನನ್ಯ ಧನ್ಯವಾದಗಳು’ ಎಂದು ಟ್ವಿಟ್ಟರ್​​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ನಟಿ ರಚನಾ ರೈ. ದರ್ಶನ್ ಅವರ ಜೊತೆಗಿನ ಕೆಲವು ರೊಮ್ಯಾಂಟಿಕ್ ಚಿತ್ರಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿಗೆ ಲೆಟರ್​ ಬರೆದ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್​ ಜೋಶಿ ಟಕ್ಕರ್​
ಪ್ರಧಾನಿಗೆ ಲೆಟರ್​ ಬರೆದ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್​ ಜೋಶಿ ಟಕ್ಕರ್​
ಅಥಣಿ: ರಸ್ತೆಯಲ್ಲೇ ಉರುಳು ಸೇವೆ ಮಾಡಿ ರೈತರಿಂದ ವಿಭಿನ್ನ ಪ್ರತಿಭಟನೆ
ಅಥಣಿ: ರಸ್ತೆಯಲ್ಲೇ ಉರುಳು ಸೇವೆ ಮಾಡಿ ರೈತರಿಂದ ವಿಭಿನ್ನ ಪ್ರತಿಭಟನೆ
GBIT ಯೋಜನೆಗೆ ವಿರೋಧ: ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ
GBIT ಯೋಜನೆಗೆ ವಿರೋಧ: ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ
ಸಿಎಂ ಸಿದ್ದರಾಮಯ್ಯಗೆ ರಾಜಣ್ಣ ಆತಿಥ್ಯ: ಮಾಜಿ ಸಚಿವರ ಪ್ಲ್ಯಾನ್​ ಏನು?
ಸಿಎಂ ಸಿದ್ದರಾಮಯ್ಯಗೆ ರಾಜಣ್ಣ ಆತಿಥ್ಯ: ಮಾಜಿ ಸಚಿವರ ಪ್ಲ್ಯಾನ್​ ಏನು?
ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು!
ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು!
ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬ
ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬ
ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಬಾಗಲಕೋಟೆಯಲ್ಲಿ ಹೆದ್ದಾರಿ ಬಂದ್
ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಬಾಗಲಕೋಟೆಯಲ್ಲಿ ಹೆದ್ದಾರಿ ಬಂದ್
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ
ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?