AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ, ‘ಬುಲ್-ಬುಲ್’ ಚೆಲುವೆಗೆ ನಿಲ್ಲದ ಬೇಡಿಕೆ

Rachita Ram movies: ಸಿನಿಮಾ ರಂಗದಲ್ಲಿ ಸ್ಟಾರ್ ನಟರಿಗಿರುವ ಅರ್ಧದಷ್ಟು ಸಹ ನಟಿಯರಿಗೆ ಶೆಲ್ಫ್ ಇರುವುದಿಲ್ಲ. ನಾಯಕಿಯರು ಹೀಗೆ ಬಂದು ಹಾಗೆ ಮರೆ ಆಗಿ ಬಿಡುತ್ತಾರೆ. ಒಂದು ದಶಕದ ಕಾಲ ಉಳಿವುದು ಮಹಾನ್ ಸಾಧನೆ. ಅದರಲ್ಲೂ ಹೊಸ ಜಮಾನಾನಲ್ಲಿ ಅಂತೂ ಬಹುತೇಕ ಅಸಾಧ್ಯ. ಪ್ರತಿಭೆ, ವ್ಯಕ್ತಿತ್ವ, ಸೌಂದರ್ಯ ಎಲ್ಲವೂ ಜೊತೆಗಿದ್ದರಷ್ಟೆ ನಟಿಯರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಅಂಥಹಾ ಕೆಲವೇ ಕೆಲವು ನಟಿಯರಲ್ಲಿ ಕನ್ನಡದ ನಟಿ ರಚಿತಾ ರಾಮ್ ಸಹ ಒಬ್ಬರು.

ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ, ‘ಬುಲ್-ಬುಲ್’ ಚೆಲುವೆಗೆ ನಿಲ್ಲದ ಬೇಡಿಕೆ
Rachita Ram
ಮಂಜುನಾಥ ಸಿ.
|

Updated on: May 10, 2026 | 11:02 PM

Share

ಸಿನಿಮಾ (Cinema) ರಂಗದಲ್ಲಿ ಸ್ಟಾರ್ ನಟರಿಗಿರುವ ಅರ್ಧದಷ್ಟು ಸಹ ನಟಿಯರಿಗೆ ಶೆಲ್ಫ್ ಇರುವುದಿಲ್ಲ. ನಾಯಕಿಯರು ಹೀಗೆ ಬಂದು ಹಾಗೆ ಮರೆ ಆಗಿ ಬಿಡುತ್ತಾರೆ. ಒಂದು ದಶಕದ ಕಾಲ ಉಳಿವುದು ಮಹಾನ್ ಸಾಧನೆ. ಅದರಲ್ಲೂ ಹೊಸ ಜಮಾನಾನಲ್ಲಿ ಅಂತೂ ಬಹುತೇಕ ಅಸಾಧ್ಯ. ಪ್ರತಿಭೆ, ವ್ಯಕ್ತಿತ್ವ, ಸೌಂದರ್ಯ ಎಲ್ಲವೂ ಜೊತೆಗಿದ್ದರಷ್ಟೆ ನಟಿಯರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಅಂಥಹಾ ಕೆಲವೇ ಕೆಲವು ನಟಿಯರಲ್ಲಿ ಕನ್ನಡದ ನಟಿ ರಚಿತಾ ರಾಮ್ ಸಹ ಒಬ್ಬರು.

ಡಿಂಪಲ್ ಚೆಲುವೆ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿ 14 ವರ್ಷಗಳಾಗಿವೆ. ರಚಿತಾ ರಾಮ್ ಮೊದಲು ನಟಿಸಿದ್ದ ಸಿನಿಮಾ ‘ಬುಲ್ ಬುಲ್’ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ 14 ವರ್ಷ. 2013 ರ ಮೇ 10 ರಂದು ಬಿಡುಗಡೆ ಆಗಿದ್ದ ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದಕ್ಕೆ ಮುನ್ನ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್, ‘ಬುಲ್ ಬುಲ್’ ಸಿನಿಮಾಕ್ಕೆ ಆಡಿಷನ್ ನೀಡಿ, ಸಾವಿರಾರು ಯುವತಿಯರ ನಡುವೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಮೊದಲ ಸಿನಿಮಾನಲ್ಲೇ ಸ್ಟಾರ್ ನಟ ದರ್ಶನ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ:ಸಿನಿಮಾ ಶೂಟ್​​ನಲ್ಲಿ ರಚಿತಾ ರಾಮ್ ಸಖತ್ ಬ್ಯುಸಿ

‘ಬುಲ್ ಬುಲ್’ ಬಳಿಕ ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸಿದ್ದು, ದರ್ಶನ್, ಸುದೀಪ್, ಪುನೀತ್ ರಾಜ್​​ಕುಮಾರ್, ಶಿವರಾಜ್ ಕುಮಾರ್ ಇನ್ನೂ ಕೆಲವು ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದರು. ಸ್ಟಾರ್ ನಟರು ಮಾತ್ರವೇ ಅಲ್ಲದೆ ಹಲವು ಸಮಕಾಲೀನ ನಟರು, ಕೆಲ ಕಿರಿಯ ನಟರ ಜೊತೆಗೂ ನಟಿಸಿದ ರಚಿತಾ ರಾಮ್, ಹಳ್ಳಿ ಹುಡುಗಿ, ಮಾಡರ್ನ್ ಹುಡುಗಿ, ಗೌರಮ್ಮ, ಬಜಾರಿ ಎಲ್ಲ ರೀತಿಯ ಪಾತ್ರಗಳನ್ನೂ ಲೀಲಾ ಜಾಲವಾಗಿ ನಟಿಸಿದ್ದಾರೆ.

ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ರಚಿತಾ ರಾಮ್ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಪವರ್​​ಫುಲ್ ಪಾತ್ರದಲ್ಲಿ ರಚಿತಾ ರಾಮ್ ನಟಿಸಿದ್ದರು. ಈಗಲೂ ಸಹ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ರಚಿತಾ ರಾಮ್ ಹೊಸ ಸಿನಿಮಾದ ಚರ್ಚೆಯಲ್ಲಿದ್ದಾರಂತೆ. ಅದರ ಜೊತೆಗೆ ಧ್ರುವ ಜೊತೆ ‘ಕ್ರಿಮಿನಲ್’, ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ನಟಿಸುತ್ತಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆಯಂತೆ.

ರಚಿತಾ ರಾಮ್ ಅವರು ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದನ್ನು ಅವರ ಅಭಿಮಾನಿಗಳು ಸಂಭ್ರಮಿಸಿದ್ದು, ಅನಾಥಾಶ್ರಮಗಳಿಗೆ ತೆರಳಿ ಸೇವೆ ಮಾಡಿದ್ದಾರೆ. ರಚಿತಾ ರಾಮ್ ಫೋಟೊಗಳನ್ನು ಹಿಡಿದುಕೊಂಡು ಕೇಕ್ ಕತ್ತರಿಸಿ, ನಟಿಯ ಪರವಾಗಿ ಘೋಷಣೆಗಳನ್ನು ಸಹ ಕೂಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​