AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeepa: ಕಿಚ್ಚನಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ ರಾಜಸ್ಥಾನ್ ರಾಯಲ್ಸ್; ವಿಡಿಯೊ ನೋಡಿ

ರಾಜಸ್ಥಾನ ರಾಯಲ್ಸ್ ತಂಡ ಕಿಚ್ಚ ಸುದೀಪ್​ಗೆ ವಿಶೇಷ ಪೋಸ್ಟ್ ಮುಖಾಂತರ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಆ ಕುರಿತ ಕುತೂಹಲಕರ ವರದಿ ಇಲ್ಲಿದೆ.

Kichcha Sudeepa: ಕಿಚ್ಚನಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ ರಾಜಸ್ಥಾನ್ ರಾಯಲ್ಸ್; ವಿಡಿಯೊ ನೋಡಿ
ರಾಜಸ್ಥಾನ ರಾಯಲ್ಸ್ ಕಳುಹಿಸಿದ ಜೆರ್ಸಿಯೊಂದಿಗೆ ಕಿಚ್ಚ ಸುದೀಪ್ (ಚಿತ್ರ ಕೃಪೆ: ಕೆಸಿ ಕಾರ್ಯಪ್ಪ/ ಟ್ವಿಟರ್)
TV9 Web
| Edited By: |

Updated on:Sep 02, 2021 | 10:53 PM

Share

ಭಾರತೀಯ ಕ್ರಿಕೆಟ್​ಗೆ ಹೊಸ ಆಯಾಮವನ್ನು ನೀಡಿದ ಐಪಿಎಲ್​ ಪಂದ್ಯಾವಳಿಯ ಮೊದಲ ಸೀಸನ್ ವಿನ್ನರ್ ರಾಜಸ್ಥಾನ ರಾಯಲ್ಸ್, ಕಿಚ್ಚ ಸುದೀಪ್​ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ. ಜತೆಗೆ ಅದು ಕಳುಹಿಸಿದ್ದ ವಿಶೇಷ ಉಡುಗೊರೆಯೊಂದರ ಫೊಟೊ, ವಿಡಿಯೊವನ್ನು ಮತ್ತೆ ಹಂಚಿಕೊಂಡಿದೆ. ಅದನ್ನು ಓಪನ್ ಮಾಡಿದ್ದ ಕಿಚ್ಚನಿಗೆ ಸಖತ್ ಸಂತಸವಾಗಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ 7ನೇ ನಂಬರ್ ಜೆರ್ಸಿಯನ್ನು ಸುದೀಪ್​ಗೆ ಕಳುಹಿಸಿಕೊಡಲಾಗಿತ್ತು. ಇದನ್ನು ಕಿಚ್ಚ ಸುದೀಪ್​ಗೆ ತಲುಪಿಸುವ ಕೆಲಸ ಮಾಡಿದ್ದು, ರಾಜಸ್ಥಾನ ತಂಡದ ಪರ ಆಡುವ ಕರ್ನಾಟಕದ ಮಿಸ್ಟರಿ ಸ್ಪಿನ್ನರ್ ಕೆ.ಸಿ.ಕಾರ್ಯಪ್ಪ.

ಜೆರ್ಸಿಯೊಂದಿಗೆ ಶುಭವನ್ನು ಕೋರುವ ಒಂದು ಹಾರೈಕೆಯ ಪತ್ರವನ್ನೂ ಕೂಡ ರಾಯಲ್ಸ್ ಕಳುಹಿಸಿಕೊಟ್ಟಿದೆ. ಅದರಲ್ಲಿ, ‘ಸತ್ಯ ಮತ್ತು ಶಿವನಿಂದ ತಳಪತಿ ಜಲತರಂಗನ್​ವರೆಗೆ- ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಲಭಿಸಲಿ’ ಎಂದು ಬರೆಯಲಾಗಿದೆ. ಜೊತೆಗೆ ‘ನೀವು ಸ್ಟಂಪ್​ಗಳ ಹಿಂದೆ ನಿಲ್ಲುವುದನ್ನು ನೋಡುವುದು ಕೂಡ ನಮಗೆ ಇಷ್ಟ’ ಎಂದು ರಾಜಸ್ಥಾನ್ ರಾಯಲ್ಸ್ ತಿಳಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಕಳುಹಿಸಿದ ಉಡುಗೊರೆಯನ್ನು ಸುದೀಪ್ ತೆರೆಯುತ್ತಿರುವುದು:

ಇಂದು 49ನೇ ವಸಂತಕ್ಕೆ ಕಾಲಿಟ್ಟಿರುವ ಕಿಚ್ಚ ಸುದೀಪ್​ಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿವೆ. ಒಲಂಪಿಕ್ಸ್​ನಲ್ಲಿ ಜಾವೆಲಿನ್ ಎಸೆತದ ಮೂಲಕ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದ ನೀರಜ್ ಚೋಪ್ರಾ, ಸುದೀಪ್​ಗೆ ಶುಭಾಶಯ ತಿಳಿಸಿ, ವಿಕ್ರಾಂತ್ ರೋಣ ಚಿತ್ರಕ್ಕೆ ಹಾರೈಸಿದ್ದರು. ಖ್ಯಾತ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ಸುದೀಪ್ ಅವರ ಸಿಡಿಪಿಯನ್ನು ಕೆಲ ದಿನಗಳ ಹಿಂದೆಯೇ ಬಿಡುಗಡೆಗೊಳಿಸಿ ಶುಭಾಶಯ ಕೋರಿದ್ದರು.

ಸಿಸಿಎಲ್ ಮುಖಾಂತರ ಕ್ರಿಕೆಟ್​ನಲ್ಲೂ ಸುದೀಪ್ ಸಕ್ರಿಯರಾಗಿರುವುದರಿಂದ ಅವರಿಗೆ ಖ್ಯಾತ ಕ್ರಿಕೆಟಿಗರೊಂದಿಗೆ ಆಪ್ತ ಒಟನಾಟವಿದೆ. ದೇಶದ ವಿವಿಧ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವುದರಿಂದ ಚಿತ್ರರಂಗದ ದಿಗ್ಗಜರೂ ಆಪ್ತರಾಗಿದ್ದಾರೆ. ಆದ್ದರಿಂದಲೇ ಸುದೀಪ್ ಅವರಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಹುಟ್ಟುಹಬ್ಬ; ‘ಅಭಿನಯ ಚಕ್ರವರ್ತಿ’ ಜೀವನದ 10 ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ

Sudeep Birthday: ಪರಭಾಷೆಗಳಲ್ಲಿ ಕಿಚ್ಚನ ಮಿಂಚು; ಈ ಚಿತ್ರಗಳಲ್ಲಿ ಸುದೀಪ್ ನಟನೆ ಕಂಡು ಮಾರುಹೋಗದವರುಂಟೇ?

Vikrant Rona: ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥಮ್’ ರಿಲೀಸ್; ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ

(Rajasthan Royals wishes Kichcha Sudeepa on his birthday)

Published On - 3:14 pm, Thu, 2 September 21

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?