AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಿಕ್​ ಬಳಿಕ ಮುಂದುವರಿದ ರಕ್ಷಿತಾ-ದರ್ಶನ್​ ಫ್ರೆಂಡ್​ಶಿಪ್​; ಇಲ್ಲಿದೆ ಫೋಟೋ ಸಾಕ್ಷಿ

ವಿವಾದದ ನಂತರ ದರ್ಶನ್​ ಮತ್ತು ರಕ್ಷಿತಾ ಪ್ರೇಮ್​ ನಡುವೆ ಮತ್ತೆ ಸ್ನೇಹ ಚಿಗುರಿದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋವನ್ನು ರಕ್ಷಿತಾ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

ಕಿರಿಕ್​ ಬಳಿಕ ಮುಂದುವರಿದ ರಕ್ಷಿತಾ-ದರ್ಶನ್​ ಫ್ರೆಂಡ್​ಶಿಪ್​; ಇಲ್ಲಿದೆ ಫೋಟೋ ಸಾಕ್ಷಿ
ದರ್ಶನ್​, ರಕ್ಷಿತಾ ಪ್ರೇಮ್​
TV9 Web
| Edited By: |

Updated on: Jul 29, 2021 | 9:31 AM

Share

ಕೆಲವೇ ದಿನಗಳ ಹಿಂದೆ ಸ್ಯಾಂಡಲ್​ವುಡ್​ನಲ್ಲಿ ವಿವಾದ ಭುಗಿಲೆದ್ದಿತ್ತು. ನಟ ದರ್ಶನ್​ (Darshan) ಮತ್ತು ನಿರ್ದೇಶಕ ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮೊದಲು 25 ಕೋಟಿ ರೂ. ವಂಚನೆ ಯತ್ನದಿಂದ ಆರಂಭವಾದ ಪ್ರಕರಣ ಎತ್ತೆತ್ತಲೋ ಸಾಗಿತ್ತು. ಮಾತಿನ ಭರದಲ್ಲಿ ನಿರ್ದೇಶಕ ಪ್ರೇಮ್​ (Prem) ಬಗ್ಗೆಯೂ ದರ್ಶನ್ ಹಗುರವಾಗಿ ಮಾತನಾಡಿದ್ದರು. ಇದು ಸಹಜವಾಗಿಯೇ ಪ್ರೇಮ್​ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈಗ ಪ್ರೇಮ್​ ಪತ್ನಿ, ನಟಿ ರಕ್ಷಿತಾ (Rakshitha Prem) ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ಹೊಸ ಸಂದೇಶ ರವಾನಿಸಿದೆ.

ಪ್ರೇಮ್​ ಬಗ್ಗೆ ದರ್ಶನ್​ ಹಗುರವಾಗಿ ಮಾತನಾಡಿದ್ದರಿಂದ ರಕ್ಷಿತಾಗೂ ಬೇಸರ ಆಗಿತ್ತು. ಆದರೆ ಈಗ ದರ್ಶನ್​ ಮತ್ತು ರಕ್ಷಿತಾ ನಡುವೆ ಮತ್ತೆ ಸ್ನೇಹ ಚಿಗುರಿದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋವನ್ನು ರಕ್ಷಿತಾ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

‘ಕೆಲವು ಸಂಬಂಧಗಳಿಗೆ ಕೊನೆ ಎಂಬುದೇ ಇಲ್ಲ. ದರ್ಶನ್​ ನೀವು ನನಗಾಗಿ ಸದಾ ಇರುತ್ತೀರಿ ಎಂಬುದು ನನಗೆ ಗೊತ್ತು. ನನ್ನ ಬದುಕಿನಲ್ಲಿ ಅಂಥ ವ್ಯಕ್ತಿ ಆಗಿರುವುದಕ್ಕೆ ಧನ್ಯವಾದಗಳು’ ಎಂದು ರಕ್ಷಿತಾ ಪೋಸ್ಟ್​ ಮಾಡಿದ್ದಾರೆ. #friendhipforever ಎಂಬ ಹ್ಯಾಶ್​ಟ್ಯಾಗ್​ ಮೂಲಕ ತಮ್ಮ ಸ್ನೇಹ ಶಾಶ್ವತ ಎಂಬುದನ್ನು ಅವರು ಮತ್ತೊಮ್ಮೆ ಸಾರಿ ಹೇಳಿದ್ದಾರೆ.

ರಕ್ಷಿತಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಈ ಫೋಟೋ ಕಂಡು ಅವರ ಅಭಿಮಾನಿಗಳು ಖುಷಿ ಆಗಿದ್ದಾರೆ. ‘ನಿಮ್ಮ ಸ್ನೇಹ ಚಿರಕಾಲ ಹೀಗೆ ಇರಲಿ. ನಿಮ್ಮನ್ನು ಜೊತೆಯಾಗಿ ನೋಡೋಕೆ ಖುಷಿ ಆಗುತ್ತದೆ. ನೀವಿಬ್ಬರು ಒಂದಾಗಿದ್ದನ್ನು ಕಂಡ ಆನಂದಭಾಷ್ಪ ಬಂತು’ ಎಂದೆಲ್ಲ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಅಭಿಮಾನಿಗಳ ಮನಗೆದ್ದ ಬೆಸ್ಟ್​ ಜೋಡಿಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಕೂಡ ಪ್ರಮುಖರು. ‘ಅಯ್ಯ’, ‘ಸುಂಟರಗಾಳಿ’, ‘ಕಲಾಸಿಪಾಳ್ಯ’, ‘ಮಂಡ್ಯ’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಆ ಸಿನಿಮಾಗಳೆಲ್ಲ ತೆರೆಕಂಡು ಹಲವು ವರ್ಷಗಳೇ ಕಳೆದಿವೆ. ರಕ್ಷಿತಾ ಅವರ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಹಾಗಿದ್ದರೂ ಕೂಡ ರಕ್ಷಿತಾ​ ಮತ್ತು ದರ್ಶನ್​ ನಡುವಿನ ಸ್ನೇಹ ಮಾಸಿಲ್ಲ.

ಇದನ್ನೂ ಓದಿ:

ಪೋಸ್ಟರ್​ನಲ್ಲಿ ದರ್ಶನ್​​ ಜೊತೆ ಸಪ್ಲೈಯರ್​ ಹುಡುಗನ ಫೋಟೋ; ಅಚ್ಚರಿ ಮೂಡಿಸಿದ ‘ಝೂ’ ಚಿತ್ರ

ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ