AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ

2019ರಲ್ಲಿ ತೆರೆಗೆ ಬಂದ ‘ಕುರುಕ್ಷೇತ್ರ’  ಸಿನಿಮಾದಲ್ಲಿ ದರ್ಶನ್​ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಣ್ಣ ನಿರ್ದೇಶನದ ಈ ಸಿನಿಮಾಗೆ ಮುನಿರತ್ನ ಅವರು ಬಂಡವಾಳ ಹೂಡಿದ್ದರು.

‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ
‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ
TV9 Web
| Edited By: |

Updated on: Jul 21, 2021 | 4:00 PM

Share

ನಟ ದರ್ಶನ್​ ಇತ್ತೀಚೆಗೆ ಸಾಕಷ್ಟು ವಿವಾದಗಳಿಗೆ ತುತ್ತಾಗಿದ್ದಾರೆ. ಅವರು ಸಾಕಷ್ಟು ಜನರ ಮೆಲೆ ಕೋಪಗೊಂಡಿದ್ದೂ ಇದೆ. ಈ ಸಿಟ್ಟಿಗೆ ದರ್ಶನ್​ ಮಾಡಿದ ದುರ್ಯೋಧನನ ಪಾತ್ರವೇ ಕಾರಣವಂತೆ! ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ  ಗ್ರಾಮಸ್ಥರು ಹೀಗೊಂದು ಅಭಿಪ್ರಾಯ ಪಟ್ಟಿದ್ದಾರೆ.

2019ರಲ್ಲಿ ತೆರೆಗೆ ಬಂದ ‘ಕುರುಕ್ಷೇತ್ರ’  ಸಿನಿಮಾದಲ್ಲಿ ದರ್ಶನ್​ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಣ್ಣ ನಿರ್ದೇಶನದ ಈ ಸಿನಿಮಾಗೆ ಮುನಿರತ್ನ ಅವರು ಬಂಡವಾಳ ಹೂಡಿದ್ದರು. ಈ ದುರ್ಯೋಧನನ ಪಾತ್ರ ದರ್ಶನ್​ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.

‘ದುರ್ಯೋಧನನ ಪಾತ್ರ ಮಾಡಿದವರಿಗೆ ಅಹಂ ಭಾವ ಜಾಸ್ತಿಯಾಗುತ್ತದೆ. ಆ ಪಾತ್ರ ಮಾಡಿದವರು ಯಾರ ಮಾತನ್ನೂ ಕೇಳೋದಿಲ್ಲ. ಅವರು ಹೇಳಿದ್ದೇ ನಡೆಯಬೇಕು, ಅವರು ಹೇಳಿದ್ದೇ ಸರಿ ಅನ್ನುತ್ತಾರೆ. ನಮ್ಮ ಗ್ರಾಮದಲ್ಲಿ ದುರ್ಯೋಧನನ ಪಾತ್ರ ಮಾಡಿದ ಮೂವರು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಬೇರೆ ಪಾತ್ರ ಮಾಡಿದಮೇಲೆ ಸಂಕಷ್ಟ ನಿವಾರಣೆ ಆಯ್ತು’ ಎನ್ನುತ್ತಾರೆ ಈ ಗ್ರಾಮದವರು.

ಕಳೆದ ಹಲವು ವರ್ಷಗಳ ಹಿಂದೆ ಈ ಗ್ರಾಮದ ಚೌಡೇಗೌಡ, ಮಹಾದೇವಪ್ಪ ಹಾಗೂ ನಾಗರಾಜು ಎಂಬುವವರು ನಾಟಕದಲ್ಲಿ ದುರ್ಯೊಧನನ ಪಾತ್ರ ಮಾಡಿದ್ದರು. ಅಚ್ಚರಿ ಎಂಬಂತೆ, ನಾಟಕ ಮಾಡಿದ ನಂತರವೂ ಅವರಲ್ಲಿ ದುರ್ಯೋಧನನ ಗುಣ ಹೋಗಿರಲಿಲ್ಲ. ‘ನಮ್ಮಲ್ಲಿ ಅಹಂ ಭಾವ ಹೆಚ್ಚಾಗಿತ್ತು. ಈ ಗುಣದಿಂದ ನಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳು ಉಂಟಾದವು. ಬೇರೆ ಪೌರಾಣಿಕ ಪಾತ್ರಗಳನ್ನು ಮಾಡಿದ ಮೇಲೆ ನಮ್ಮ ಮನಸ್ಥಿತಿ ಸರಿ ಆಯಿತು. ಬದುಕು ಸುಧಾರಿಸಿತು. ಈಗ ನಟ ದರ್ಶನ್​​ಗೂ ಅದೇ ಆಗಿದೆ. ಅವರು ಕುರುಕ್ಷೇತ್ರ ಸಿನಿಮಾ‌ದಲ್ಲಿ ದುರ್ಯೋಧನನ‌ ಪಾತ್ರ ಮಾಡಿದ್ದಾರೆ. ಪಾತ್ರದ ಛಾಯೆ ಅವರ ಮೇಲಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಬೇರೆ ಪೌರಾಣಿಕ ಪಾತ್ರ ಮಾಡಿದರೆ ಅವರಲ್ಲಿ ಬದಲಾವಣೆ ಆಗಲಿದೆ’ ಎನ್ನುತ್ತಾರೆ ಈ ಪಾತ್ರ ಮಾಡಿದವರು.

ಇದನ್ನೂ ಓದಿ: ವಂಚನೆ ಪ್ರಕರಣದ ಮೂಲ ಅರಿಯಲು ಕೈ ಜೋಡಿಸಿದರಾ ದರ್ಶನ್- ಉಮಾಪತಿ?

‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ