AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮರ್ದಿನಿ’ ಟ್ರೇಲರ್​ನಿಂದ ಹೆಚ್ಚಿದ ಕೌತುಕ; ರೋಚಕ ಕಥೆ ಹೇಳಲು ಸಜ್ಜಾದ ಹೊಸಬರ ಟೀಮ್​

ಟ್ರೇಲರ್​ ಮೂಲಕ ‘ಮರ್ದಿನಿ’ ಸಿನಿಮಾ ಗಮನ ಸೆಳೆದಿದೆ. ರಿತನ್ಯ ಹೂವಣ್ಣ ಮುಖ್ಯಭೂಮಿಕೆಯಲ್ಲಿ ಇರುವ ಈ ಚಿತ್ರ ಸೆಪ್ಟೆಂಬರ್​ 16ರಂದು ಬಿಡುಗಡೆ ಆಗಲಿದೆ.

‘ಮರ್ದಿನಿ’ ಟ್ರೇಲರ್​ನಿಂದ ಹೆಚ್ಚಿದ ಕೌತುಕ; ರೋಚಕ ಕಥೆ ಹೇಳಲು ಸಜ್ಜಾದ ಹೊಸಬರ ಟೀಮ್​
‘ಮರ್ದಿನಿ’ ಸಿನಿಮಾ ತಂಡ
TV9 Web
| Edited By: |

Updated on: Aug 29, 2022 | 7:30 AM

Share

ಕನ್ನಡದ ‘ಮರ್ದಿನಿ’ ಸಿನಿಮಾ (Mardini Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಇರುವ ಬಹುತೇಕ ಎಲ್ಲರೂ ಹೊಸಬರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ನಿರ್ಮಾಪಕ ಜಗ್ಗಿ ಅವರ ಆಶಯ ಆಗಿತ್ತು. ಅದರಂತೆ ಸಂಪೂರ್ಣ ಹೊಸಬರ ತಂಡವನ್ನು ಕಟ್ಟಿಕೊಂಡು ಅವರು ಸಿನಿಮಾ ಮಾಡಿದ್ದಾರೆ. ಕಿರಣ್ ಕುಮಾರ್​ ವಿ. ನಿರ್ದೇಶನ ಮಾಡಿದ್ದಾರೆ. ‘ಕೊವಿಡ್​ ಸಮಯದಲ್ಲಿ ಶುರುವಾದ ಸಿನಿಮಾ ಇದು. ಮೂರು ಅಲೆ ಬಂದರೂ ಯಾವುದೇ ತೊಂದರೆ ಇಲ್ಲದೇ ಶೂಟಿಂಗ್​ ಮುಗಿಸಿದ್ದೇವೆ. ಇದು ಸಾಧ್ಯವಾಗಿದ್ದು ನಿರ್ಮಾಪಕ ಜಗ್ಗಿ ಅವರ ಸಹಕಾರದಿಂದ’ ಎಂದಿದ್ದಾರೆ ನಿರ್ದೇಶಕರು. ನಟಿ ರಿತನ್ಯಾ ಹೂವಣ್ಣ (Ritanya Huvanna) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಅವರು ನಟಿಸಿದ್ದಾರೆ. ಅವರಿಗೂ ಇದು ಮೊದಲ ಸಿನಿಮಾ.

ಸೆಪ್ಟೆಂಬರ್​ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸದ್ಯ ಟ್ರೇಲರ್​ ಬಿಡುಗಡೆ ಮಾಡಿ, ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ಹಲವು ವರ್ಷಗಳಿಂದ ಬ್ಯಾನರ್​ ಮತ್ತು ಸ್ಟ್ಯಾಂಡಿ ನಿರ್ಮಾಣ ಮಾಡಿದ ಅನುಭವ ಹೊಂದಿರುವ ಜಗ್ಗಿ ಅವರು ‘ಅಂಕಿತ್​ ಫಿಲ್ಮ್ಸ್​’ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿತನ್​ ಹಾಸನ್​ ಅವರು ಸಂಗೀತ ನೀಡಿದ್ದಾರೆ. ಅರುಣ್​ ಸುರೇಶ್​ ಛಾಯಾಗ್ರಹಣ, ಎನ್​.ಎಂ. ವಿಶ್ವ ಸಂಕಲನ ಮಾಡಿದ್ದಾರೆ.

ಚೊಚ್ಚಲ ಚಿತ್ರದಲ್ಲೇ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ರಿತನ್ಯ ಅವರಿಗೆ ಇದೆ. ‘ನನಗೆ ಚಿಕ್ಕ ವಯಸ್ಸಿನಿಂದ ಮಾಲಾಶ್ರೀ ಎಂದರೆ ತುಂಬ ಇಷ್ಟ. ಹಲವು ಸಿನಿಮಾಗಳಿಗೆ ಆಡಿಷನ್​ ನೀಡಿದ್ದೆ. ಆದರೆ ಆಯ್ಕೆ ಆಗಿರಲಿಲ್ಲ. ನಿರ್ಮಾಪಕ ಜಗ್ಗಿ ಅವರು ನನಗೆ ಅಣ್ಣನ ರೀತಿ. ಲಾಕ್​ಡೌನ್​ ಬಳಿಕ ಎಲ್ಲರ ಜೀವನ ಕಷ್ಟ ಆಗಿತ್ತು. ಆ ಸಂದರ್ಭದಲ್ಲಿ ಜಗ್ಗಿ ಅವರು ಸಿನಿಮಾ ಶುರು ಮಾಡಿದರು. ಆಗ ನಾನು ಅವರಿಗೆ ನನ್ನ ಫೋಟೋ ಕಳಿಸಿಕೊಟ್ಟೆ. ಈ ಸಿನಿಮಾದ ಮುಖ್ಯ ಪಾತ್ರಕ್ಕೆ ನಾನು ಆಯ್ಕೆ ಆದೆ. ಶೂಟಿಂಗ್​ ನಡುವೆ ನಮ್ಮ ತಂದೆ ತೀರಿಹೋದರು. ಚಿತ್ರತಂಡದ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ’ ಎಂಬುದು ನಾಯಕಿ ರಿತನ್ಯ ಹೂವಣ್ಣ ಅವರ ಮಾತುಗಳು.

ಇದನ್ನೂ ಓದಿ
Image
Dollu Movie: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಚಿತ್ರ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
Image
Dollu Movie: ‘ಡೊಳ್ಳು’ ಚಿತ್ರ ವೀಕ್ಷಿಸಲು ರಾಜ್ಯಪಾಲರಿಗೆ ವಿಶೇಷ ಆಹ್ವಾನ ನೀಡಿದ ಚಿತ್ರತಂಡ
Image
‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ‘ಡೊಳ್ಳು’ ಚಿತ್ರದ ಮೊದಲ ಹಾಡು ರಿಲೀಸ್​ ಮಾಡಿದ ಡಾಲಿ ಧನಂಜಯ್​
Image
68th National Film Awards: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ

ಮಹಿಳಾ ಪ್ರಧಾನ ಕಥೆಯನ್ನೇ ಆಯ್ಕೆ ಮಾಡಿದ್ದು ಯಾಕೆ? ಈ ಪ್ರಶ್ನೆಗೆ ನಿರ್ದೇಶಕ ಕಿರಣ್​ ಕುಮಾರ್​ ವಿ. ಉತ್ತರ ನೀಡಿದ್ದಾರೆ. ಅಡುಗೆ ಮನೆಯಿಂದ ಆರ್ಮಿ ತನಕವೂ ಮಹಿಳೆಯರ ಮಹತ್ವ ದೊಡ್ಡದಿದೆ. ಅವರ ಜರ್ನಿಯಲ್ಲಿ ಹಲವು ವಿಷಯಗಳಿವೆ. ಅದೇ ರೀತಿ ‘ಮರ್ದಿನಿ’ ಚಿತ್ರದಲ್ಲೂ ಮಹಿಳೆಯರ ಕಥಾವಸ್ತು ಇದೆ. ಮಹಿಳಾ ಪೊಲೀಸ್​ ಅಧಿಕಾರಿಯ ಪಾತ್ರ ಈ ಸಿನಿಮಾದಲ್ಲಿ ಪ್ರಧಾನವಾಗಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ರಿತನ್ಯ ಹೂವಣ್ಣ ಜೊತೆಗೆ ಅಕ್ಷಯ್​, ಮನೋಹರ್​, ಇಂಚರಾ ಜೋಶಿ, ರಚನಾ ಎಸ್​, ಸುಶ್ಮಿತಾ ಮುಂತಾದವರು ನಟಿಸಿದ್ದಾರೆ. ಯೂಟ್ಯೂಬ್​ನಲ್ಲಿ ಮೂರು ಲಕ್ಷಕ್ಕೂ ಅಧಿಕ ಬಾರಿ ಈ ಚಿತ್ರದ ಟ್ರೇಲರ್​ ವೀಕ್ಷಣೆ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!