AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಬರ್ಟ್​ ಪೈರಸಿ ಮಾಡಿದವರಿಗೆ ಶಿಕ್ಷೆ ಕೊಡೋದು ದೊಡ್ಡ ವಿಚಾರವಲ್ಲ; ಆದ್ರೆ ಅದರಿಂದ ಬೇರೆ ನಟರ ಹೆಸರು ಬರುತ್ತವೆ’

ಈಗಾಗಲೇ ಪೈರಸಿ ಮಾಡಿದ ಕೆಲವರನ್ನ ಪತ್ತೆ ಹಚ್ಚಲಾಗಿದೆ. ಅವರಿಗೆ ಶಿಕ್ಷೆ ಕೊಡುವುದು ದೊಡ್ಡ ವಿಚಾರವೇನಲ್ಲ. ಆದರೆ ಅದರಿಂದ ಬೇರೆ ನಟರ ಹೆಸರುಗಳು ಬರುತ್ತವೆ. ಬೇರೆ ನಟರ ಅಭಿಮಾನಿಗಳಿಂದ ಪೈರಸಿ ಆಯ್ತು ಅಂತಾರೆ. ಹಾಗಾಗಿ, ನಾವು ಬೆಂಕಿ ಹಚ್ಚಬಾರದು, ಆದಷ್ಟು ಆರಿಸಬೇಕು ಎಂದು ಉಮಾಪತಿ ಹೇಳಿದರು.

‘ರಾಬರ್ಟ್​ ಪೈರಸಿ ಮಾಡಿದವರಿಗೆ ಶಿಕ್ಷೆ ಕೊಡೋದು ದೊಡ್ಡ ವಿಚಾರವಲ್ಲ; ಆದ್ರೆ ಅದರಿಂದ ಬೇರೆ ನಟರ ಹೆಸರು ಬರುತ್ತವೆ’
ನಿರ್ಮಾಪಕ ಉಮಾಪತಿ (ಫೈಲ್ ಚಿತ್ರ)
KUSHAL V
| Edited By: |

Updated on:Jun 23, 2021 | 1:29 PM

Share

ಬೆಂಗಳೂರು: ರಾಬರ್ಟ್​​ ಚಿತ್ರ ರೆಕಾರ್ಡ್​​ ಮಾಡಿ ಹರಿಬಿಟ್ಟ ಕೆಲ ಕಿಡಿಗೇಡಿಗಳು ಹಾಗೂ ಸಿನಿಮಾದ ಪೈರಸಿ ಕುರಿತು ಚಿತ್ರದ ನಿರ್ಮಾಪಕ ಉಮಾಪತಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಪೈರಸಿ ಮಾಡಿದ ಕೆಲವರನ್ನ ಪತ್ತೆ ಹಚ್ಚಲಾಗಿದೆ. ಅವರಿಗೆ ಶಿಕ್ಷೆ ಕೊಡುವುದು ದೊಡ್ಡ ವಿಚಾರವೇನಲ್ಲ. ಆದರೆ ಅದರಿಂದ ಬೇರೆ ನಟರ ಹೆಸರುಗಳು ಬರುತ್ತವೆ. ಬೇರೆ ನಟರ ಅಭಿಮಾನಿಗಳಿಂದ ಪೈರಸಿ ಆಯ್ತು ಅಂತಾರೆ. ಹಾಗಾಗಿ, ನಾವು ಬೆಂಕಿ ಹಚ್ಚಬಾರದು, ಆದಷ್ಟು ಆರಿಸಬೇಕು ಎಂದು ಉಮಾಪತಿ ಹೇಳಿದರು.

ಪೈರಸಿ ಆಗಿರುವ 2 ಸಾವಿರಕ್ಕೂ ಹೆಚ್ಚು ಲಿಂಕ್​ಗಳು ಸಿಕ್ಕಿವೆ. ಆದರೆ ಸಿಕ್ಕಿರುವ ಲಿಂಕ್​ಗಳು ಯಾವುದೂ ಓಪನ್​ ಆಗುತ್ತಿಲ್ಲ. ಆದ್ರೆ ಲಿಂಕ್ ಓಪನ್ ಮಾಡುವವರ ಅಕೌಂಟ್​ನಿಂದ ದುಡ್ಡು ಮಾತ್ರ ಕಟ್ ಆಗ್ತಿದೆಯಂತೆ. ನಾವು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದು ಸಹಕಾರಿಯಾಗಿದೆ. 40ಮಂದಿ ಇರೋ ಆ್ಯಂಟಿ ಸ್ಕ್ವಾಡ್​ ರಚಿಸಿದ್ದೆವು. ಇದನ್ನೂ ಮೀರಿ ಪೈರಸಿ ಮಾಡಿದ್ರೂ ತೊಂದರೆಯಿಲ್ಲ. ಕಂಟೆಂಟ್ ಚೆನ್ನಾಗಿದ್ರೆ ಜನ ಸಿನಿಮಾ ನೋಡೇ ನೋಡ್ತಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ಸಹ ಹೇಳಿದರು.

ರಾಬರ್ಟ್​​ ಚಿತ್ರಕ್ಕೆ ಪೈರಸಿ ಕಾಟ ನಟ ದರ್ಶನ್​ ಅಭಿನಯದ ರಾಬರ್ಟ್​​ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಪೂರ್ತಿ ಸಿನಿಮಾ ರೆಕಾರ್ಡ್​​ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಈಗಾಗಲೇ ಲಿಂಕ್​ಗಳನ್ನ ಡಿಲೀಟ್​ ಮಾಡಿರುವ ತಂಡ ಸುಮಾರು 300-400 ಲಿಂಕ್ ಡಿಲಿಟ್ ಮಾಡಿಸಿದೆ. ಲಿಂಕ್​ ಡಿಲೀಟ್ ಮಾಡಿದ್ರೂ ಕಿಡಿಗೇಡಿಗಳು ಬೇರೆ ಬೇರೆ ಹೆಸರಿನಲ್ಲಿ ಅಪ್ಲೋಡ್ ಮಾಡ್ತಿದ್ದಾರೆ.

ಇತ್ತ, ಸ್ಟಾರ್​ಗಳು ಸುಮ್ಮನಿದ್ರೂ ಅವರ ಫ್ಯಾನ್ಸ್ ನಡುವಿನ ಕಚ್ಚಾಟ ನಿಲ್ಲುತ್ತಿಲ್ಲ. ಇದೀಗ, ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ನಡುವಿನ ಮಾತಿನ ವಿಡಿಯೋ ವೈರಲ್ ಆಗ್ತಿದೆ. ಹೌದು, ಅಭಿಮಾನದ ಅತಿರೇಕದ ಒಂದು ಘಟನೆ ಸಂಭವಿಸಿದೆ.

ಥಿಯೇಟರ್ ಅಂಗಳದಲ್ಲಿ ಕಿಚ್ಚನ ವಿರುದ್ಧ ದರ್ಶನ್​ ಅಭಿಮಾನಿಗಳು ಘೋಷಣೆ ಕೂಗಿದ್ದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ರಾಬರ್ಟ್ ಸಿನಿಮಾ ರಿಲೀಸ್ ವೇಳೆ ಘಟನೆ ನಡೆದಿದೆ. ಹೀಗಾಗಿ, ಅದನ್ನ ಕಂಡು ಸುದೀಪ್ ಅಭಿಮಾನಿಗಳು ದರ್ಶನ್​ ಫ್ಯಾನ್ಸ್​ಗಳಿಗೆ ವಾರ್ನ್ ಮಾಡಿದ್ದಾರೆ.

ಕೆಲವು ಪದಗಳನ್ನ ಬಳಸಿರೋದ್ರಿಂದ ನಮಗೆ ಬೇಸರವಾಗಿದೆ. ಅಭಿಮಾನದ ಅತೀರೇಕದ ವರ್ತನೆಯಲ್ಲಿ ಒಮ್ಮೊಮ್ಮೆ ಹೀಗಾಗುತ್ತೆ. ಆದರೆ, ಪದೇ ಪದೇ ಹೀಗಾಗಬಾರದು ಎಂದು ಕಿಚ್ಚನ ಅಭಿಮಾನಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೊನೆಗೆ ದರ್ಶನ್​ ಅಭಿಮಾನಿಯೊಬ್ಬ ವಿಡಿಯೋ ಬಗ್ಗೆ ಕ್ಷಮೆ ಕೇಳಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ರೆಡಿ ಮಾಡಿದ ಟೀಂ ಎಸ್​ಐಟಿ ಬಲೆಗೆ; ‘ಸಿಡಿ ಲೇಡಿ’ ಬಾಯ್​ಫ್ರೆಂಡ್ ಕೂಡ ಅಂದರ್​!

Published On - 6:47 pm, Fri, 12 March 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ