Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಅಭಿಮಾನಿಗಳು ಮೃತಪಟ್ಟ ಪ್ರಕರಣ; ವರ್ಷ ಕಳೆದರೂ ನಿಂತಿಲ್ಲ ಹೆತ್ತವರ ಕಣ್ಣೀರು

ಯಶ್ ಅವರ 2023ರ ಜನ್ಮದಿನದಂದು ಮೂವರು ಅಭಿಮಾನಿಗಳು ಫ್ಲೆಕ್ಸ್ ಹಾಕುವಾಗ ಮೃತಪಟ್ಟ ದುರಂತಕ್ಕೆ ಒಂದು ವರ್ಷ. ಕುಟುಂಬಗಳು ಇನ್ನೂ ದುಃಖದಲ್ಲಿದ್ದಾರೆ. ಯಶ್ ಅವರು ಸಾಂತ್ವನ ಹೇಳಿ ಸಹಾಯ ಮಾಡಿದ್ದರೂ, ನಷ್ಟದ ನೋವು ಕಡಿಮೆಯಾಗಿಲ್ಲ. ಈ ವರ್ಷ, ಯಶ್ ಅವರು ವಿದೇಶದಲ್ಲಿರುವುದರಿಂದ ಜನ್ಮದಿನ ಆಚರಣೆ ಇರುವುದಿಲ್ಲ.

ಯಶ್ ಅಭಿಮಾನಿಗಳು ಮೃತಪಟ್ಟ ಪ್ರಕರಣ; ವರ್ಷ ಕಳೆದರೂ ನಿಂತಿಲ್ಲ ಹೆತ್ತವರ ಕಣ್ಣೀರು
ಯಶ್
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ರಾಜೇಶ್ ದುಗ್ಗುಮನೆ

Updated on:Jan 07, 2025 | 2:49 PM

ನಟ ಯಶ್ ಅವರಿಗೆ ಜನವರಿ 8 ಜನ್ಮದಿನದ ಸಂಭ್ರಮ. ಆದರೆ ಕಳೆದ ವರ್ಷ ಯಶ್ ಜನ್ಮದಿನದಂದು ಸೂತಕದ ಛಾಯೆ ಆವರಿಸಿತ್ತು. ಅದಕ್ಕೆ ಕಾರಣ ಆಗಿದ್ದು ಯಶ್ ಅಭಿಮಾನಿಗಳ ಸಾವು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಬರ್ತ್​​ಡೇ ದಿನ ಫ್ಲೆಕ್ಸ್ ಹಾಕಲು ಹೋಗಿದ್ದ ಮೂವರು ಯುವಕರು ಮೃತಪಟ್ಟಿದ್ದರು. ಆ ಬಳಿಕ ಯಶ್ ಅವರು ಅಲ್ಲಿಗೆ ಆಗಮಿಸಿ ಸಂತಾಪ ಹೇಳಿದ್ದರು. ಹಣವನ್ನೂ ನೀಡಿದ್ದರು. ಈಗ ಘಟನೆ ನಡೆದು ವರ್ಷ ಕಳೆದಿದೆ. ಆದಾಗ್ಯೂ ಕುಟುಂಬದ ಕಣ್ಣೀರು ನಿಂತಿಲ್ಲ.

2024ರ ಜನವರಿ 8ರಂದು ಯಶ್ ಅಭಿಮಾನಿಗಳು ಅದ್ದೂರಿಯಾಗಿ ಬರ್ತ್​ಡೇ ಆಚರಿಸಲು ನಿರ್ಧರಿಸಿದ್ದರು. ಅದೇ ರೀತಿ ಸೂರಣಗಿ ಗ್ರಾಮದಲ್ಲಿ ಜನವರಿ 7ರ ರಾತ್ರಿ ಯಶ್ ಕಟೌಟ್ ನಿಲ್ಲಿಸಲು ಫ್ಯಾನ್ಸ್ ಮುಂದಾದರು.  ಆದರೆ, ಕಂಬ ವಿದ್ಯುತ್ ಲೈನ್​ಗೆ ತಾಗಿ ಮುರಳಿ ನಡುವಿನಮನಿ, ನವೀನ್ ಹರಿಜನ್ ಹಾಗೂ ಹನಮಂತ ಹರಿಜನ್ ಮೃತ ಪಟ್ಟಿದ್ದರು. ಕೆಲವರಿಗೆ ಗಾಯ ಆಗಿತ್ತು.

ಮನೆಗೆ ಆಧಾರ ಸ್ತಂಬವಾಗಬೇಕಿದ್ದ ಮಕ್ಕಳ ಕಳೆದುಕೊಂಡಿದ್ದ ಕುಟುಂಬ ಕಣ್ಣೀರಲ್ಲಿ ಕೈ ತೊಳೆದಿತ್ತು. ಅಭಿಮಾನಿಗಳು ಮೃತಪಟ್ಟ ಸುದ್ದಿ ತಿಳಿದು ಯಶ್ ಸೂರಣಗಿಗೆ ಆಗಮಿಸಿ ಸಾಂತ್ವನ ಹೇಳಿದ್ದರು. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಸಹಾಯ ಮಾಡಿದ್ದರು.

ನಿಂತಿಲ್ಲ ಕಣ್ಣೀರು..

ವರ್ಷ ಕಳೆದರೂ ಕುಟುಂಬದವರ ಕಣ್ಣೀರು ನಿಂತಿಲ್ಲ. ನಿತ್ಯ ಮಕ್ಕಳ ನೆನೆದು ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳನ್ನು ಕಳುಹಿಸಲೇಬಾರದಿತ್ತು ಎಂದು ಗೋಳಾಡುತ್ತಿದ್ದಾರೆ. ಕಾಡುತ್ತಿರುವ ಕಡು ಬಡತನದ ಜೊತೆ ಮಗನಿಲ್ಲ ಎನ್ನುವ ನೋವು ಕುಟುಂಬದವರನ್ನು ಮತ್ತಷ್ಟು ಹೈರಾಣವಾಗಿಸಿದೆ. ಆದರೆ, ಮೃತಪಟ್ಟ ಮಗ ಏನೇ ಮಾಡಿದರೂ ಹಿಂದಿರುಗುವುದಿಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಪಾಲಕರಿಗೆ ಆಗುತ್ತಿಲ್ಲ.

ಇದನ್ನೂ ಓದಿ: ಯಶ್ ಜನ್ಮದಿನಕ್ಕೆ ಸೂಪರ್ ಸರ್​ಪ್ರೈಸ್; ಪೋಸ್ಟರ್ ಮೂಲಕ ಅಪ್​ಡೇಟ್ ಕೊಟ್ಟ ‘ಟಾಕ್ಸಿಕ್’ ಟೀಂ

ಈ ವರ್ಷ ಇಲ್ಲ ಆಚರಣೆ

ಈ ವರ್ಷ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ಗಾಗಿ ವಿದೇಶದಲ್ಲಿ ಇರುತ್ತಾರೆ. ಈ ಕಾರಣಕ್ಕೆ ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ ಹಾಗೂ ಅಭಿಮಾನಿಗಳ ಭೇಟಿ ಅಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೆ, ಫ್ಲೆಕ್ಸ್, ಬ್ಯಾನರ್ ಹಾಕೋದು ಬೇಡ ಎಂದು ಅವರು ಅಭಿಮಾನಿಗಳ ಬಳಿ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Tue, 7 January 25

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!